Posts

Showing posts from October, 2012

ಸುಂದರ ಆಲೋಚನೆಗಳ ಬೀಜ ಬಿತ್ತಿ ಆ್ಯಪಲ್ ಬೆಳೆದವ !

Image
“ನಾಳೆ ಸಾಯಂಕಾಲ ಎಂಟು ಗಂಟೆಗೆ ಜೆ.ಪಿ. ನಗರದಲ್ಲಿರುವ ಸ್ನೇಹಿತ ಅಖಿಲ್ ಶ್ರೀನಿವಾಸ ಅವರ ಮನೆಯಲ್ಲಿ ಒಂದು ಅಪರೂಪದ ಕಾರ್ಯಕ್ರಮವಿದೆ, ಹೋಗಬೇಕು’ ಎಂದು ನನ್ನ ಐಫೋನ್ ಬೆಳಗ್ಗೆ ಆರು ಗಂಟೆಗೆ ಮೆಲ್ಲಗೆ ನನ್ನನ್ನು ನೆನಪಿಸಿತು. ಅಲ್ಲಿ ನಾವು ಸುಮಾರು ನಲವತ್ತು ಮಂದಿ”ಹುಚ್ಚರು’ ಸಭೆ ಸೇರಿ ಒಂದು ಸಭೆ ಮಾಡುವವರಿದ್ದೇವೆ. ಅದನ್ನು ಮೊದಲ ಪುಣ್ಯಸ್ಮರಣೆ ಅನ್ನಿ, ತಿಥಿ ಅನ್ನಿ, ಶ್ರದ್ಧಾಂಜಲಿ ಅನ್ನಿ ಅಥವಾ ಗುಣಗಾನ ಸಭೆ ಅನ್ನಿ. ಎರಡು ತಾಸು ಸ್ಟೀವ್ ಜಾಬ್ಸ್ ಎಂಬ ಮಾಂತ್ರಿಕನನ್ನು ಅಲ್ಲಿ ನೆನಪಿಸಿಕೊಳ್ಳುತ್ತೇವೆ. ಸ್ಟೀವ್ ಜಾಬ್ಸ್ ಜತೆ ಕೆಲಸ ಮಾಡಿದ ಇಬ್ಬರು ಅಂದು ಮಾತಾಡುತ್ತಾರೆ. ಅಂದ ಹಾಗೆ ನಾಳೆ ಶುಕ್ರವಾರಕ್ಕೆ ಸ್ಟೀವ್ ಜಾಬ್ಸ್ ನಮ್ಮನ್ನು ಅಗಲಿ ಒಂದು ವರ್ಷವಾಗುತ್ತದೆ. ಕಳೆದ ಒಂದು ವರ್ಷದಲ್ಲಿ, ಸ್ಟೀವ್ ಜಾಬ್ಸ್ ಇಲ್ಲದ ಜಗತ್ತು ಏನಾಗಿದೆ ಎಂಬ ಬಗ್ಗೆ ಅಖಿಲ್ ಶ್ರೀನಿವಾಸ ಮಾತಾಡುತ್ತಾನೆ. ಆತ ಜಾಬ್ಸ್್ನನ್ನು ಅಡಿಯಿಂದ ಮುಡಿತನಕ ಪ್ರೀತಿಸುವವ. ನಾವು ನಲವತ್ತು ಮಂದಿ ಪ್ರತಿದಿನ ಜಾಬ್ಸ್್ನ ಕುರಿತು ಮೇಲ್, ಆರ್ಟಿಕಲ್ ಎಕ್ಸ್್ಚೇಂಜ್ ಮಾಡಿಕೊಳ್ಳುತ್ತೇವೆ. ಕೆಲವರಿಗೆ ಇದೇ ಪ್ರಮುಖ ಜಾಬ್ ವರ್ಕ್! ಬೇರೆಯವರು ಕರೆಯುವುದಕ್ಕಿಂತ ಮೊದಲೇ ನನ್ನನ್ನು ನಾನು”ಆ್ಯಪಲ್ ಹುಚ್ಚ’ ಅಂತ ಕರೆದುಕೊಂಡು ಬಿಟ್ಟಿದ್ದೇನೆ. ಅಲ್ಲದೇ ಈ”ಹುಚ್ಚುತನ’ ಸಾಂಕ್ರಾಮಿಕ ಎಂಬುದನ್ನು ಮನಗೊಂಡು ಇತರರಿಗೂ ಹಬ್ಬಿಸಿದ್ದೇನೆ. ನನ್ನಿಂದ”ಹುಚ್ಚ’ರಾದವರ ಸಂಖ್ಯೆ ಏನಿಲ್ಲವೆಂದ...