Posts

Showing posts with the label Travel India

ಕಾಸರಕೋಡ್ ಇಕೋ ಬೀಚ್,ಪೊನ್ಮುಡಿ

Image
    ದಣಿದ ಮನಸ್ಸಿಗೊಂದು ವಿಶ್ರಾಂತಿಯ ತಾಣ * ಬಳಕೂರು ವಿ. ಎಸ್ ನಾಯಕ್ ಧರೆಯ ಸೌಂದರ್ಯದ ಮುಕುಟಮಣಿಯಾಗಿ ಮೇಳೈಸಿರುವ ಜಿಲ್ಲೆಯೇ ಉತ್ತರ ಕನ್ನಡ ಒಂದು ಕಾಲದಲ್ಲಿ ಚೆನ್ನಾಬೈರಾದೇವಿ ಆಡಳಿತದ ಸಂದರ್ಭ ಹೊನ್ನಾವರವು ಹೆಚ್ಚಾಗಿ ಕಾಳು ಮೆಣಸನ್ನು ರಫ್ತು ಮಾಡುವ ಪ್ರಮುಖ ಸ್ಥಳವಾಗಿದೆ. ಸರ್ವಧರ್ಮ ಸಮನ್ವಯತೆಗೆ ಒಂದು ಉದಾಹರಣೆಯಾಗಿತ್ತು. ಶಾಂತಿ ಮಂತ್ರವನ್ನು ಉಪದೇಶಿಸುತ್ತಾ ಬಂದ ಜೈನರ ನೆಲೆವೀಡು ಇದಾಗಿತ್ತು. ಇಂದಿನ ಸಂಸ್ಕೃತಿ ಆಧುನಿಕತೆಯ ಭರಾಟೆಯೊಂದಿಗೆ ಸತ್ವ ಕಳೆದುಕೊಂಡರೂ ಹೊನ್ನಾವರವು ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಮೀನುಗಾರಿಕೆಯು ಮುಖ್ಯ ಉದ್ಯೋಗವಾಗಿದ್ದು ಕೃಷಿ ಆಧಾರಿತ ಕುಟುಂಬಗಳು ಇಲ್ಲಿ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಾಣಬಹುದು. ಚೌಪದಿ ಬ್ರಹ್ಮ ದಿನಕರ ದೇಸಾಯಿ ಅವರು ಈ ಜಿಲ್ಲೆಯನ್ನು ಈ ರೀತಿಯಾಗಿ ಹಾಡಿ ಹೊಗಳಿದ್ದಾರೆ. 'ಒಂದು ಬದಿ ಸಹ್ಯಾದ್ರಿ ಇನ್ನೊಂದು ಬದಿ ಕಡಲು/ ನಡುಮಧ್ಯದಲ್ಲಿ ಅಡಿಕೆ ತೆಂಗುಗಳ ಮಡಲು /ಸಿರಿಗನ್ನಡದ ಚಪ್ಪರವೇ ನನ್ನ ಈ ಜಿಲ್ಲೆ /ಇನ್ನೊಮ್ಮೆ ಇಲ್ಲಿ ಹುಟ್ಟಿ ಬರುವೇ ನಾ ಅಲ್ಲೆ' ಎಂದು ಹೇಳಿದ್ದು ಅವರ ಅಭಿಮಾನಕ್ಕೆ ಸಾಕ್ಷಿ. ಸದಾ ನಗುಮುಖದವರು ಜ್ಞಾನಿಗಳು, ಸಹೃದಯರು ತುಂಬಿರುವ ಈ ಜಿಲ್ಲೆಯಲ್ಲಿ ಸೊಬಗಿದೆ ಸೌಂದರ್ಯವಿದೆ. ಅದೇ ಕಾಸರಕೋಡು ಇಕೋ ಬೀಚ್ ಎಂದರೆ ಅತಿಶೋಯಕ್ತಿಯಲ್ಲ . ಹೀಗಿದೆ ಹೊನ್ನಾವರ ಹೊನ್ನಾವರದ ಮೊದಲ ಹೆಸರು ಹೊನ್ನಪುರಿ ನ...

KAVALEDURGA FORT

Kavaledurga is a magnificent fort located on a hill at an altitude of 5,056 feet (1,541 m), situated in Shivamogga District in Karnataka. The place can be reached by a 16 km drive from Thirthahalli. Other important places close by are: Thirthahalli Thirthahalli is a taluk head quarters, amidst dense forest and is about 65 Kms. from Shimoga Rameshwara Temple is located on the bank of river Tunga and attracts tourist and pilgrims for holy bath during the month of January every year. Agumbe Agumbe is at a distance of about 80Kms. from Shimoga via Thirthahalli . This is a famous place for viewing sunset. Abbey falls is nearby Agumbe. Kuppahalli This situated at a distance of about 16 Kms. east of Thirthahalli and 81 Kms. from Shimoga. This is fascinating locality which is the birth place of the great poet "KUVEMPU". There is the famous spot here know as Kavishilla where where the poet in his young days used it sit and contemplate. Ambuteertha This is 10 Kms. from Thirthahalli...

ಮಾಳ ಕಾಡಿನ ರಸಕವಳ,ಮಲ್ಯಾಡಿಯಲ್ಲಿ ಪಕ್ಷಿಗಳ ಕಲರವ

Image
ಮಾಳ ಪಶ್ಚಿಮ ಘಟ್ಟದ ತಡಿಯ ಪುಟ್ಟ ತೊಟ್ಟಿಲು, ಬಗಲಲ್ಲಿ ಸಾವಿರಾರು ಜೀವರಾಶಿಗಳನ್ನು, ಪುಟ್ಟ ತೊರೆಗಳನ್ನು ಹೊತ್ತುಕೊಂಡ ಕಾರ್ಕಳ ತಾಲೂಕಿಗೆ ನವಿಲುಗರಿಯಂತಿರೋ ಮಾಳ ಸೌಂದರ್ಯರಾಶಿಗೆ ಅಣಿಯಿಲ್ಲದ ಪುಟ್ಟ ಗ್ರಾಮ. ಮಲೆನಾಡಿನ ಹಸಿರ ಕೇಶ ರಾಶಿಯ ತಪ್ಪಲ್ಲಲ್ಲಿರೋ ಮಾಳದ ಕಾಡ ದಾರಿ, ನೀರ ಹಾದಿ, ಹಸಿರಬೆಟ್ಟ ಎಲ್ಲವೂ ಚಾರಣಿಗರ ಸ್ವರ್ಗ. ಕಾಡಲ್ಲಿ ಪ್ರಕೃತಿಯೊಂದಿಗೆ ಕಾಡೇಗೂಡೇ ಆಡಬೇಕೆನ್ನುವವರಿಗೆ ಮಾಳದ ಚಾರಣ ಬಿಟ್ಟೆನೆಂದರೂ ಬಿಡದ ಮಾಯೆ. ಕಣ್ಣು ಹಾಸಿದ್ದಲ್ಲಿ ಕಾಡುವ ಗಿಡಗಂಟಿಗಳನ್ನು ದಾಟುತ್ತಾ, ಹಾದಿಯೇ ಕಾಣದ ಹುಲ್ಲುರಾಶಿಗಳ ನಡುವೆ ದಾರಿ ಮಾಡಿಕೊಳ್ಳುತ್ತಾ, ಹಕ್ಕಿಗಳ ಕೊರಳ ದನಿಗೆ ತಲೆದೂಗುತ್ತಾ, ಮಾಳದ ಕಾಡ ಹಾದಿ ಹೊಕ್ಕರೆ ಮನಸ್ಸು ನಿರಾಳವಾಗುತ್ತದೆ. ಹರಿಯುವ ಜಲಪಾತದ ವಾದ್ಯ ಸಂಗೀತ ಕಿವಿಗೆ ದಯಪಾಲಿಸುತ್ತದೆ. ಮಾಳ ಕಾಡಿನಲ್ಲಿ ಮೂರುದಿಕ್ಕಿಗೆ ಮೂರು ಜಲಪಾತಗಳು ಬಳಕುತ್ತಾ ಹರಿಯುತ್ತಿರುವುದು ಹಸಿರ ಒಲೆಯಲ್ಲಿ ಕೆನೆ ಹಾಲು ಉಕ್ಕಿದಂತೆ ಕಾಣುತ್ತದೆ. ದಾನಗುಂಡಿ ಜಲಪಾತ, ಕುರೆಂಗಲ್ ಜಲಪಾತ, ಪಶ್ಚಿಮಘಟ್ಟದ ಮೇಲ್ಮೈಯಿಂದ ಜಿಗಿಜಿಗಿದು ಮಲೆನಾಡಿಗೆ ಸೇರುತ್ತದೆ. 500-600 ಅಡಿ ಎತ್ತರದಿಂದ ಕುಣಿಯುತ್ತಾ ಬಂಡೆಗಲ್ಲಿಗೆ ನೂರ್ಮಡಿದು ಬಂದು ರಾಚುವ ದಾನಗುಂಡಿಯ ಧ್ಯಾನಕ್ಕೆ ಎದೆಯರಳಿ ಐಸ್ ಕ್ಯಾಂಡಿಯಾದೀತು. ಕೂಗಳತೆ ದೂರದಿಂದ ನೀರಧಾರೆಯನ್ನು ನೋಡುತ್ತಿದ್ದರೆ ನಿಜಕ್ಕೂ ದುಂಡುಮಲ್ಲಿಗೆ ಮಳೆಗರೆಯುತ್ತಿದೆಯೇನೋ ಅನ್ನಿಸಿ ಒಂದರೆ ಕ್ಷಣ ...

ಪೋಖರಾ ಎಂಬ ಪ್ರೇಮಕಾವ್ಯ

Image
ನೇಪಾಳವು ಭಾರತೀಯರಿಗೆ ಅಪರಿಚಿತವೇನಲ್ಲ, ಭಾರತದ ಒಂದು ರಾಜ್ಯದಂತೆ ಭಾಸವಾಗುವ ನೇಪಾಳದ ಪ್ರವಾಸ ಎಂಥವರನ್ನೂ ಮುದಗೊಳಿಸುತ್ತದೆ. ನೇಪಾಳಕ್ಕೆ ಹೋಗಿಬರುವುದೂ ಅಷ್ಟೇ ಸುಲಭ. ಯಾವುದೇ ವೀಸಾದ ಅವಶ್ಯಕತೆಯಿರುವುದಿಲ್ಲ. ನೇಪಾಳಕ್ಕೆ ಬರುವ ಪ್ರತಿ ಪ್ರವಾಸಿಗನ ಮೊದಲ ಊರು ರಾಜಧಾನಿ ಕಠ್ಮಂಡುವಾದರೆ, ಎರಡನೇ ಭೇಟಿ ಪೋಖರಾಗೆ ಆಗಿರುತ್ತದೆ. ಪೋಖರಾ ನಗರ ಹಿಮಾಲಯದ ಪ್ರೇಮಕಾವ್ಯ, ದೃಶ್ಯಕಾವ್ಯ ಎಲ್ಲವೂ ಆಗಿದೆ. ಹಿಮಾಲಯದ ಚೆಲುವೆಲ್ಲವನ್ನೂ ಮೈಗೂಡಿಸಿಕೊಂಡಂತೆ ಕಾಣುವ ಪೋಖರಾ ನೇಪಾಳದ ಎರಡನೇ ದೊಡ್ಡ ನಗರ. ಆದರೂ ನಗರೀಕರಣದ ಭರಾಟೆ ಅಷ್ಟಾಗಿ ತಾಕಿಲ್ಲ. ನೇಪಾಳದ ಪಶ್ಚಿಮ ಭಾಗದ ಗಂಡಕಿ ವಿಭಾಗದ ಕಾಸ್ಕಿ ಜಿಲ್ಲೆಯ ಜಿಲ್ಲಾ ಮುಖ್ಯ ಕೇಂದ್ರವೂ ಆಗಿರುವ ಪೋಖರಾ, ರಾಜಧಾನಿ ಕಠ್ಮಂಡುವಿನಿಂದ 200 ಕಿ.ಮೀ. ದೂರವಿದೆ. ಜಗತ್ತಿನ ಅತೀ ಎತ್ತರದ ಹತ್ತು ಪರ್ವತ ಶ್ರೇಣಿಗಳಲ್ಲಿ ಮೂರು ಈ ನಗರದ ಸುತ್ತಮುತ್ತ ಇವೆ. ಅವೇ ಅನ್ನಪೂರ್ಣ, ಧವಳಗಿರಿ ಮತ್ತು ಮನಸ್ಲೂ ಶ್ರೇಣಿಗಳು. ಅದರಲ್ಲೂ ನಗರವು ಅನ್ನಪೂರ್ಣ ಶ್ರೇಣಿಯ (ಚಾರಣ) ಮಾರ್ಗಗಳು ಇಲ್ಲಿಂದ ಪ್ರಾರಂಭವಾಗುತ್ತದೆ. ಹಿಮಾಲಯವು ಅತ್ಯಂತ ರೋಮಾಂಚನಕಾರಿ ಅನುಭವ ನೀಡುವ ಚಾರಣ, ಪರ್ವತಾರೋಹಣ, ಪ್ಯಾರಾಗ್ಲೈಡಿಂಗ್, ರಿವರ್ ರ‌್ಯಾಫ್ಟಿಂಗ್‌ನಂಥ ಸಾಹಸಗಳ ತಾಣವಾಗಿದೆ. ಇಲ್ಲಿ ಸದಾ ಮಳೆ ಸುರಿಯುವುದರಿಂದ ಸುತ್ತಮುತ್ತಲಿನ ನದಿಗಳು ವರ್ಷವಿಡೀ ಭೋರ್ಗರೆಯುತ್ತ ರಭಸವಾಗಿ ಹರಿಯುತ್ತವೆ. ಹಾದಿಯುದ್ದಕ್ಕೂ ಹತ್ತಾರೂ ಜಲಪಾತಗಳನ್ನು...

ಕೂಡಲ ಸಂಗಮ ,ಗೊಡಚಿ ವೀರಭದ್ರ

Image
ಕೂಡಲ ಸಂಗಮ ಎಂಬ ಮಹಾ ತಾಣ ನಿಮಗೆ ಶರಣರ ವಿಚಾರಧಾರೆಗಳನ್ನು ಅರಿತುಕೊಳ್ಳುವ ಆಸೆ ಇದೆಯೇ? ಹಾಗಿದ್ದರೆ ಕೂಡಲ ಸಂಗಮದ ಶರಣ ಲೋಕಕ್ಕೆ ಹೋಗಿಬನ್ನಿ. ನೆನಪಿರಲಿ, ಸಮಯಾವಕಾಶ ಇಟ್ಟುಕೊಳ್ಳದೆ ಗಡಿಬಿಡಿಯಲ್ಲಿ ಹೋದರೆ ಏನೂ ಪ್ರಯೋಜನ ಆಗದು! ಧರ್ಮಕರ್ತ ಬಸವಣ್ಣನ ವರವಿದ್ಯಾಭೂಮಿ, ತಪೋಸ್ಥಾನ, ಐಕ್ಯ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಬಸವ ಧರ್ಮೀಯರ ಕ್ಷೇತ್ರವಾಗಿ, ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಇಂತಿಪ್ಪ ತಾಣದಲ್ಲಿರುವುದು ಶರಣ ಲೋಕ ಅಥವಾ ಶರಣ ಮಂಟಪ. ಈ ಸಮುಚ್ಛಯ ಗಮನ ಸೆಳೆಯುವುದು ಚಾರಿತ್ರಿಕ ಹಾಗೂ ಐತಿಹಾಸಿಕ ಹಿನ್ನಲೆಯಿಂದ. ಇಲ್ಲಿ ವಿಶ್ವಮಾನವ ಬಸವೇಶ್ವರ ಸೇರಿದಂತೆ ಆತನ ಸಮಕಾಲೀನ ಪ್ರಮುಖ ಶಿವ ಶರಣ-ಶರಣೆಯರ ಪ್ರತಿಮೆಗಳಿವೆ. ಬಸವಧರ್ಮ ಪೀಠದ ಮೂಲಕ ಅಸ್ತಿತ್ವಕ್ಕೆ ಬಂದಿರುವ ಈ ತಾಣ ಶರಣರ ಕಾಲಕ್ಕೆ ಹೋಗಿ ಬಂದ ಅನುಭವ ನೀಡುತ್ತದೆ. ಆ ಮೂಲಕ ನಮ್ಮ ನಾಡಿನ ಪ್ರಮುಖ ಶರಣರು, ಅವರ ಕಾಯಕ ಪ್ರಜ್ಞೆ, ಅವರ ತತ್ವಗಳನ್ನು ಪ್ರಚಾರ ಮಾಡುವ ಮೂಲಕ ಇಂದಿನವರಿಗೆ ಶರಣರ ಬಗ್ಗೆ ತಿಳಿಸಿ, ಅವರ ವಿಚಾರಧಾರೆಗಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡುವುದು ಶರಣಲೋಕದ ಉದ್ದೇಶ. ಮಹಾದ್ವಾರಕ್ಕೆ ಮಡಿವಾಳ ಮಾಚಿದೇವನ ಹೆಸರಿಡಲಾಗಿದೆ. ಇನ್ನು ಒಳ ಹೊಕ್ಕರೆ ಶರಣರ ಪ್ರತಿಮೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿ 16 ಮಂಟಪಗಳಿವೆ. ಗಣಲಿಂಗದ ಇಕ್ಕೆಲಗಳಲ್ಲಿ ಈ ಪ್ರತಿಮೆಗಳನ್ನು ಅವರವರ ಕಾಯಕ ಮಾಡುವ ಶೈಲಿಯಲ್...

ಸಿಂಹನಗದ್ದೆಯ ಜ್ವಾಲಾಮಾಲಿನಿ,ಗೇರುಸೊಪ್ಪಾ,ರಾಮನಗಿಂಡಿ

Image
ಸಿಂಹನಗದ್ದೆಯ ಜ್ವಾಲಾಮಾಲಿನಿ ಮಲೆನಾಡಿನ ತವರೂರೆಂದೇ ಪ್ರಖ್ಯಾತವಾಗಿದೆ ಚಿಕ್ಕಮಗಳೂರು ಜಿಲ್ಲೆ. ಪ್ರವಾಸಿಗರು ಇಷ್ಟಪಡುವ ಅಸಂಖ್ಯಾತ ತಾಣಗಳು ಜಿಲ್ಲೆಯಲ್ಲಿವೆ. ಹಸಿರು ಸಿರಿಯಿಂದ ತುಂಬಿರುವ 'ಕಾಫಿ ಜಿಲ್ಲೆ'ಯಲ್ಲಿ ಧಾರ್ಮಿಕ ಕ್ಷೇತ್ರಗಳೂ ಅಸಂಖ್ಯಾತ. ನರಸಿಂಹರಾಜಪುರದ ಸಿಂಹನಗದ್ದೆ ಬಸ್ತಿಮಠ ಕೂಡ ಅಂಥ ಶಕ್ತಿಕ್ಷೇತ್ರಗಳಲ್ಲಿ ಒಂದು. ಸಿಂಹನಗದ್ದೆ ಮೂಲತಃ ಜೈನ ಕ್ಷೇತ್ರ. ಬಸದಿಗಳ ಬೀಡು. ಸಾವಿರ ವರ್ಷ ಹಿಂದೆ ಪ್ರತಿಷ್ಠಾಪಿಸಲಾದ ಶಾಂತಿನಾಥ ಸ್ವಾಮಿ, ನಿತ್ಯಪೂಜೆಗೊಳ್ಳುವ ಚಂದ್ರನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ ಬಸದಿ, ಬ್ರಹ್ಮದೇವರ ಬಸದಿ, ಬಾಹುಬಲಿಸ್ವಾಮಿ ಬಸದಿಗಳಿವೆ. ಆದರೆ ವಿಶೇಷವಾಗಿ ಗಮನ ಸೆಳೆಯುತ್ತಿರುವುದು 'ಯಕ್ಷಿ' ಜ್ವಾಲಾಮಾಲಿನಿ ದೇವಸ್ಥಾನ. ಇದು ಕೂಡ ಜೈನ ಮಠದ ನಿರ್ವಹಣೆಗೆ ಒಳಪಟ್ಟಿದೆ. ಹಿಂದೆ ರಾಜಮನೆತನಗಳಲ್ಲಿ ಯಕ್ಷಿಯವರನ್ನು ಪೂಜಿಸುವ ಪದ್ಧತಿಯೊಂದು ಗಾಢ ಪ್ರಭಾವ ಬೀರಿದೆ. ಅದರಲ್ಲಿಯೂ ವಿಶೇಷವಾಗಿ ಜ್ವಾಲಾಮಾಲಿನಿ, ಅಂಬಿಕಾ, ಪದ್ಮಾವತಿ, ಚಾಮುಂಡಾ ಯಕ್ಷಿಯರ ಪ್ರಭಾವ ಹಲವು ರಾಜಕುಲದಲ್ಲಿ ಇದ್ದುದಾಗಿ ಶಾಸನಗಳಿಂದ ತಿಳಿದುಬರುತ್ತದೆ. ಜ್ವಾಲಾಮಾಲಿನಿ ದೇವಿಯು ಎಂಟನೆಯ ತೀರ್ಥಂಕರರಾದ ಚಂದ್ರನಾಥರ ಶಾಸನದೇವಿಯಾಗಿದ್ದಳು ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ. ಜ್ವಾಲಾಮಾಲಿನಿ ದೇವಸ್ಥಾನದ ವಿಶೇಷ ಎಂದರೆ ಭಕ್ತಾದಿಗಳ ಅಭೀಷ್ಟ ಪೂರೈಕೆಯಾಗುತ್ತದಯೋ ಇಲ್ಲವೋ ಎಂಬ ಖಚಿತ ಮಾಹಿತಿ ...

TOP TEN National park in India

1. Keoladeo Ghana National Park Bharatpur, Rajasthan Better known as the Bharatpur Bird Sanctuary in Bharatpur, Rajasthan, the Keoladeo Ghana National Park is an ornithologist's paradise. According to its website, the national park is home to over 230 species of birds and was declared a protected sanctuary in 1971. Once the hunting ground for the maharajas of Bharatpur, the park was the venue for the annual duck shoots held in honour of the British viceroys. While the princely states were permitted to shoot after Independence, these rights were revoked after 1972 and a decade later grazing was banned in the park which led to violent clashes between the local communities and the government. The park was declared a World Heritage Site in 1985. 2. Jim Corbett National Park Uttarakhand Probably the most inviting place for nature lovers living in and around Delhi, the Jim Corbett National Park owes its name to the legendary British hunter, conservationist, author...

ಹೊನ್ನೆಲೆಗಳ ಹೊನ್ನಾಳಿ

Image
ತನ್ನ ವಿಶಿಷ್ಟ ಸಂಸ್ಕೃತಿ, ಭಾಷೆಯಿಂದ ಗಮನ ಸೆಳೆದಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ಐತಿಹಾಸಿಕ ಹಿನ್ನೆಲೆ ಇದೆ. ಅದನ್ನು ಸಾರಿ ಹೇಳುವಂತೆ ಪಾಳೇಗಾರರು ಕಟ್ಟಿದ ಕೋಟೆಯ ದಿಡ್ಡಿಬಾಗಿಲ ಅವಶೇಷ ತುಂಗಭದ್ರಾ ನದಿಗೆ ಮುಖ ಮಾಡಿ ನಿಂತಿದೆ. ಪಟ್ಟಣದ ಆಕರ್ಷಣೆಗಳಲ್ಲಿ ಮುಖ್ಯವಾದುದು ತುಂಗಭದ್ರಾ ತೀರದ ಪ್ರಶಾಂತ ವಾತಾವರಣದಲ್ಲಿರುವ, ದ್ವಿತೀಯ ಮಂತ್ರಾಲಯವೆಂದೇ ಪ್ರಸಿದ್ಧಿ ಪಡೆದಿರುವ ರಾಘವೇಂದ್ರಸ್ವಾಮಿಗಳ ಮಠ. ಮಾರಿಕಾಂಬ ದೇವಸ್ಥಾನ, ಶ್ರೀ ಹಳದಮ್ಮ ದೇವಸ್ಥಾನ, ದುರ್ಗಾಂಬ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನಗಳೊಂದಿಗೆ ಜಾಮಿಯಾ ಮಸೀದಿ ಹಾಗೂ ಚರ್ಚ್, ಬ್ರಿಟಿಷರ ಕಾಲದ ಹಳೆಯ ಕಟ್ಟಡಗಳೂ ಗಮನ ಸೆಳೆಯುತ್ತವೆ. ಹೊನ್ನಾಳಿಗೆ ಆತುಕೊಂಡಿರುವ ಹಿರೇಕಲ್ಮಠದಲ್ಲಿನ ಪ್ರಸಿದ್ಧ ಬೃಹಚ್ಛಿಲಾಮಠ (ಹಿರೇಕಲ್ಮಠ) ಸಂಪೂರ್ಣ ಶಿಲೆಯಿಂದಲೇ ನಿರ್ಮಾಣವಾಗಿದೆ. ಚನ್ನಪ್ಪಸ್ವಾಮಿ ಗದ್ದುಗೆ ಇರುವ ಈ ದಿವ್ಯ ಸನ್ನಿಧಿ ಸರ್ವಧರ್ಮೀಯರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಬ್ರಿಟಿಷರ ಕಾಲದಲ್ಲಿ ತುಂಗಭದ್ರಾ ತೀರದ ಪ್ರಕೃತಿ ಮಡಿಲಲ್ಲಿ ನಿರ್ಮಿತವಾದ ಪ್ರವಾಸಿ ಮಂದಿರ ಮಹಾತ್ಮಾ ಗಾಂಧೀಜಿಯವರು ಪದಾರ್ಪಣೆ ಮಾಡಿ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ನೀಡಿದ ಸ್ಥಳವಾಗಿದೆ. ಇನ್ನು ಹೊನ್ನಾಳಿ-ತುಮ್ಮಿನಕಟ್ಟೆ ರಸ್ತೆಯಲ್ಲಿ ಐದು ಕಿಲೋಮೀಟರ್ ದೂರದಲ್ಲಿ ಬಳ್ಳೇಶ್ವರದಲ್ಲಿ ಜೈನ ಧರ್ಮೀಯರ ಪವಿತ್ರ ಕ್ಷೇತ್ರ ಪಾರ್ಶ್ವನಾಥ ಬಸದಿ ಹಾಗೂ ಬಳ್ಳಲಿಂಗೇಶ್ವರ ದೇವಸ...

ಎಚ್.ಡಿ.ಕೋಟೆ ತಾಲೂಕಿನಲ್ಲಿ ಡ್ಯಾಂ ಧಮಾಕ,ಅನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ

Image
ಒಂದೇ ತಾಲೂಕಿನಲ್ಲಿ ನಾಲ್ಕು ಜಲಾಶಯಗಳು. ಈ ರೀತಿ ಇರುವುದು ಅಪರೂಪ. ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕು ಈ ರೀತಿಯ ವಿಶೇಷತೆಗೆ ಸಾಕ್ಷಿಯಾಗಿದೆ. ಈ ತಾಲೂಕಿನಲ್ಲಿ ಕಬಿನಿ, ನುಗು, ತಾರಕ ಹಾಗೂ ಹೆಬ್ಬಳ ಜಲಾಶಯಗಳು ಬರುತ್ತವೆ. ಕಾವೇರಿ ಕಣಿವೆಯಲ್ಲಿ ಬರುವ ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ಬಗ್ಗೆ ಎಲ್ಲರಿಗೂ ಗೊತ್ತು. ಕಾವೇರಿ ವಿವಾದದಿಂದಾಗಿ ತಮಿಳುನಾಡು ನೀರಿಗೆ ಕ್ಯಾತೆ ತೆಗೆದಾಗಲೆಲ್ಲಾ ಹೆಚ್ಚು ನೀರು ಪೂರೈಸುವುದೇ ಕಬಿನಿ ಜಲಾಶಯದಿಂದ. ಹೀಗಾಗಿ, ಕಬಿನಿ ಜಲಾಶಯದ ಬಗ್ಗೆ ಮಾಹಿತಿ ಇದ್ದರೂ ಕಬಿನಿಯ ಸೆರಗಿನಲ್ಲೇ ಇರುವ ನುಗು, ತಾರಕ ಹಾಗೂ ಹೆಬ್ಬಳ ಜಲಾಶಯಗಳ ಬಗ್ಗೆ ಕೇಳಿರುವವರು ಕಡಿಮೆ. ಬೀಚನಹಳ್ಳಿ ಬಳಿ ಇರುವ ಕಬಿನಿಗಂತೂ ವರ್ಷಕ್ಕೆರಡು ಬಾರಿ ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಇದೆ. ಈ ಬಾರಿ ಕಬಿನಿ ಜೊತೆಗೆ ಬೀರ್ವಾಳ್ ಬಳಿ ಇರುವ ನುಗು ಹಾಗೂ ತಾರಕ ಜಲಾಶಯಗಳು ಭರ್ತಿಯಾಗಿರುವುದು ವಿಶೇಷ. ಏಕೆಂದರೆ, ಕಬಿನಿ ಹೊರತುಪಡಿಸಿದರೆ ಉಳಿದ ಜಲಾಶಯಗಳು ಸಾಮಾನ್ಯವಾಗಿ ಭರ್ತಿಯಾಗುವುದಿಲ್ಲ. ಆದರೆ, ಈ ಬಾರಿ ಕೇರಳದ ವಯನಾಡು ಹಾಗೂ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಮೂರು ಜಲಾಶಯಗಳು ಭರ್ತಿಯಾಗಿವೆ. ಮೂರು ಜಲಾಶಯಗಳಿಂದಲೂ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ತಾರಕ ನೀರು ಹೈರಿಗೆ- ಮಟಕೆರೆ ಸಮೀಪ ಕಪಿಲಾ ನದಿಗೆ, ನುಗು ಜಲಾಶಯದಿಂದ ನದಿಗೆ ಹರಿಸಲಾದ ನೀರು ಹೊಮ್ಮರಗಳ್ಳಿ ಸಮೀಪ ಸಂಗಮ ಬಳಿ ಕಪಿಲಾ ನ...