Posts

Showing posts with the label Vbhat article's

ಅಂದು ಮತ ಹಾಕುವ ಮುನ್ನ ಇವನ್ನೆಲ್ಲ ಯೋಚಿಸಿ!

Image
ಚುನಾವಣೆ ಘೋಷಣೆಯಾಗಿದೆ. ನಾವು ಇದನ್ನು 'ಮಹಾಯುದ್ಧ' ಎಂದು ಕರೆದಿದ್ದೇವೆ. ಇದಕ್ಕಿಂತ ಪ್ರಬಲವಾದ, ಎಲ್ಲರಿಗೂ ಅರ್ಥವಾಗುವ ಪದವಿದ್ದಿದ್ದರೆ, ಆ ಹೊತ್ತಿನಲ್ಲಿ ಹೊಳೆದಿದ್ದರೆ ಅದನ್ನೇ ಇಡುತ್ತಿದೆ. World war ಗೆ ನಾವು ಮಹಾಯುದ್ಧ ಎಂದು ಕರೆದಿದ್ದೇವೆ. ಭಾರತದಲ್ಲಿನ ಚುನಾವಣೆ ಅಂದ್ರೆ ಯಾವ ದೃಷ್ಟಿಯಿಂದಲೂ ಅದಕ್ಕಿಂತ ಕಡಿಮೆ ಇರುವುದಿಲ್ಲ. ಇದನ್ನು mother of all battles ಅಂತಾನೂ ಕರೆಯುವುದುಂಟು. ಅದೂ ಸಹ ನಿಜ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಇದರ ವಿರಾಟದರ್ಶನ ವಿಶ್ವಕ್ಕೆ ಮತ್ತೊಮ್ಮೆ ಗೊತ್ತಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು, ಆ ಪಕ್ಷಗಳ ನೇತಾರರು, ಹುರಿಯಾಳುಗಳು, ಕಾರ್ಯಕರ್ತರು ತೆರೆಮರೆಯಲ್ಲಿ ಈ ಹೋರಾಟಕ್ಕೆ ಮೌನವಾಗಿ ಸಜ್ಜಾಗುತ್ತಿದ್ದಾರೆ. ಈ ದೇಶ ಕಂಡು ಕೇಳರಿಯದ ಮತ್ತೊಂದು ಮಹಾಯುದ್ಧಕ್ಕೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ. ಹಾಗಾದರೆ ಈ ಚುನಾವಣೆಯಲ್ಲಿ ನನ್ನ ಪಾತ್ರವೇನು, ನಾನು ಏನು ಮಾಡಬೇಕು, ನನ್ನ ಮುಂದಿರುವ ಸವಾಲುಗಳೇನು, ಆಯ್ಕೆಯೇನು, ಹೊಸ ಸರ್ಕಾರ ರಚನೆಯಲ್ಲಿ ನಾನು ಹೇಗೆ ತೊಡಗಿಸಿಕೊಳ್ಳಬೇಕು. ಈ ಎಲ್ಲ ಪ್ರಶ್ನೆಗಳೂ ನಮ್ಮೆಲ್ಲರ ಮುಂದೆ ಮೂಡಲಾರಂಭಿಸಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ನಾವೆಲ್ಲ ಈ ಚುನಾವಣೆ ಸುಳಿಯಲ್ಲಿ ಸಿಲುಕಿ ತಿರುಗುತ್ತಿರುವ ಈ ಸಂದರ್ಭದಲ್ಲಿ ಇತ್ತೀಚೆಗೆ ನಾನು 'ಫಾರ್ಚೂನ್‌' ಮ್ಯಾಗಜಿನ್‌ನ ಹಿರಿಯ ಸಂಪಾದಕ ಹಿಂದೋಲ್ ಸೇನಗುಪ್ತಾ...

ಸಾಧನೆ, ಕನಸುಗಳಿಗೆ ಮುಗಿಲೇ ಮಿತಿ ಎಂಬ ಮಕ್ತೌಮ್ ಮಾರ್ಗ

Image
'ಸಾಧ್ಯವಾದರೆ ಆ ಪುಸ್ತಕ ಓದಿ. ನಮಗಾಗಿ, ರಾಜ್ಯದ ಜನತೆಗಾಗಿ ಆ ಕೃತಿಯನ್ನು ಓದಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡು ವಾರಗಳ ಹಿಂದೆ ಒಂದು ಪುಟ್ಟ ಹಾಗೂ ಆಪ್ತ ಸಲಹೆ ನೀಡಿದ್ದೆ. ಆ ಪುಸ್ತಕವನ್ನು ಅವರು ಓದಿದರೋ, ಬಿಟ್ಟರೋ ಗೊತ್ತಿಲ್ಲ. ಒಂದು ವೇಳೆ ಅವರು ಅದನ್ನು ಓದಿದರೆ, ಓದಿದ್ದೇನೆಂದು ಹೇಳಬೇಕಿಲ್ಲ. ಅವರ ಮಾತು, ಕೃತಿ, ಆದ್ಯತೆ, ಚಿಂತನೆ, ಆಲೋಚನೆಗಳೇ ಬದಲಾಗುತ್ತವೆ. ಅದರಲ್ಲಿ ಸಂದೇಹವೇನಿಲ್ಲ. ಮುಖ್ಯಮಂತ್ರಿಯಾದವರಿಗೆ ಪುಸ್ತಕ ಓದಲು, ಬರೆಯಲೂ ಸಮಯ ಸಿಗುವುದಿಲ್ಲ. ಓದಬೇಕೆಂದು ಬಯಸಿದರೂ ಜನ ಬಿಡುವುದಿಲ್ಲ. ಸದಾ ಅವರ ಮನೆಯ ಸುತ್ತಲೂ ನಿಂತಿರುತ್ತಾರೆ. ಮುಖ್ಯಮಂತ್ರಿಯಾದವರಿಗೆ 'ಮನೆಗೆ ಬರಬೇಡಿ' ಎಂದು ಜನರಿಗೆ ಹೇಳಲಾಗುವುದಿಲ್ಲ. ಜನ ಜಂಗುಳಿ, ಕಾರ್ಯಕ್ರಮ, ಭಾಷಣ, ಮೀಟಿಂಗ್, ಗಣ್ಯರ ಭೇಟಿ ನಡುವೆ ಒಂದು ಪುಟ್ಟ ಏಕಾಂತವನ್ನು ಸೃಷ್ಟಿಸಿಕೊಳ್ಳಲಾಗುವುದಿಲ್ಲ. ಈ ಎಲ್ಲ ಸಂಗತಿಗಳು ಗೊತ್ತಿಲ್ಲ ಎಂದಲ್ಲ. ಆದರೂ ತುಸು ಸವುಡು ಮಾಡಿಕೊಂಡು ದುಬೈ ಎಂಬ ಮಾಯಾನಗರಿ, ಆಧುನಿಕ ದೇಶ, ಪ್ರಯೋಗ ನಗರವನ್ನು ಕಟ್ಟಿದ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಬರೆದ My Vision:Challenges in the Race for Excellence ಎಂಬ ಪುಸ್ತಕವನ್ನು ಓದಿ ಎಂದಿದ್ದೆ. ಕಾರಣ ಇಷ್ಟೆ. ಒಂದು ಊರನ್ನು ಹೇಗೆ ಕಟ್ಟಬೇಕು, ಜನರ ಚಿಂತನೆಯನ್ನು ಅಣಿಗೊಳಿಸುವುದು ಹೇಗೆ, ಈ ಕೆಲಸಕ್ಕೆ ಜನರನ್ನು ತೊಡಗಿಸುವುದೆಂತು...

ಸಿದ್ದರಾಮಯ್ಯನವರೇ ಸದಾ ಫಾರಿನ್ ಟೂರ್ ಮಾಡಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಚೀನಾದಿಂದ ವಾಪಸ್ ಬಂದಿದ್ದಾರೆ. ತಮ್ಮ ಪ್ರವಾಸ ಅನುಭವಗಳನ್ನು ಅವರು ಸ್ನೇಹಿತರ ಮುಂದೆ, ಪತ್ರಕರ್ತರ ಮುಂದೆ ರಸವತ್ತಾಗಿ ಬಣ್ಣಿಸಿದ್ದಾರೆ. ಮೂಲತಃ ಸಿದ್ದರಾಮಯ್ಯ ವಿದೇಶಿ ವ್ಯಾಮೋಹಿಯೇನಲ್ಲ. ಅವರ ಬೇರಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ಹಾಗೆಂದು ವಿದೇಶ ಪ್ರವಾಸ ಮಾಡಿಲ್ಲ ಅಂತಲ್ಲ. ಅವರು ಚೀನಾಕ್ಕೆ ಹೊರಡುತ್ತಾರೆ ಎಂದು ಗೊತ್ತಾದಾಗ ಅವರ ರಾಜಕೀಯ ವಿರೋಧಿಗಳು, 'ಮುಖ್ಯಮಂತ್ರಿಗಳು ಇನ್ನೂ ಜಿಲ್ಲಾ ಪ್ರವಾಸವನ್ನೇ ಮಾಡಿಲ್ಲ. ಮುಖ್ಯಮಂತ್ರಿಯಾಗಿ ಇನ್ನೂ ಬೆಂಗಳೂರು ನಗರ ಪ್ರದಕ್ಷಿಣೆಯನ್ನೇ ಮಾಡಿಲ್ಲ. ಆಗಲೇ ವಿದೇಶ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ. ಸಿದ್ದರಾಮಯ್ಯನವರ ಆದ್ಯತೆಗಳೇನು ಎಂಬುದು ಇದರಿಂದ ಗೊತ್ತಾಗುತ್ತದೆ' ಎಂದು ಟೀಕೆ ಮಾಡಿದರು. ಈ ಟೀಕಾಕಾರರ ಮಾತುಗಳನ್ನು ಕೇಳಿ, ಅದನ್ನು ಗಂಭೀರವಾಗಿ ಪರಿಗಣಿಸಿ ಸಿದ್ದರಾಮಯ್ಯನವರು ಈ ವಿದೇಶ ಪ್ರವಾಸವನ್ನು ರದ್ದುಗೊಳಿಸಿ ಬಿಡುತ್ತಾರಾ ಎಂದುಕೊಂಡಿದ್ದೆ. ಆದರೆ ಅವರು ಹಾಗೆ ಮಾಡಲಿಲ್ಲ. ಮುಖ್ಯಮಂತ್ರಿಯವರು ವರ್ಲ್ಡ್ ಎಕನಾಮಿಕ್ ಫೋರಂನ ಸಮಾವೇಶದಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ಹೋಗಿದ್ದರು. ಇದು ನಿಜಕ್ಕೂ ಪ್ರತಿಷ್ಠಿತ ಸಮಾವೇಶ. ಈ ಸಂದರ್ಭದಲ್ಲಿ ಪಾಲ್ಗೊಳ್ಳಲು ಭಾರತದ ಎಷ್ಟು ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿತ್ತೋ ಗೊತ್ತಿಲ್ಲ. ಆದರೆ ನಮ್ಮ ಮುಖ್ಯಮಂತ್ರಿಗಳಿಗೆ ಈ ಆಮಂತ್ರಣ ಸಿಕ್ಕಿದ್ದು ಹೆಮ್ಮೆಯ ಸಂಗತಿ. ಜಗತ್ತಿನ ಬಹುರಾಷ್ಟ್ರೀಯ ಕಂ...

ಸಿದ್ದರಾಮಯ್ಯನವರೇ ನಮಗಾಗಿ ಈ ಪುಸ್ತಕ ಓದುತ್ತೀರಾ?

'ಸಿದ್ದರಾಮಯ್ಯನವರೇ, ಸದಾ ಫಾರಿನ್ ಟೂರ್ ಮಾಡಿ' ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಕಳೆದ ವಾರದ ಅಂಕಣದಲ್ಲಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎಂಬ ಹೆಸರನ್ನು ಪ್ರಸ್ತಾಪಿಸಿದ್ದೆನಷ್ಟೆ. ಈ ಹೆಸರನ್ನು ನೀವು ಕೇಳುವ ಸಾಧ್ಯತೆ ತೀರಾ ಕಡಿಮೆ. ಈ ಹೆಸರು ನಿಮ್ಮಲ್ಲಿ ಯಾವುದೇ ಭಾವನೆಯನ್ನು ಮೂಡಿಸಲಾರದು. ಹೆಚ್ಚೆಂದರೆ ಇದು ಒಬ್ಬ ಮುಸ್ಲಿಂ ಅಥವಾ ಅರಬ್ ವ್ಯಕ್ತಿಯ ಹೆಸರು ಎಂದಷ್ಟೇ ನೀವು ಭಾವಿಸಬಹುದು. ಅದೇ 'ದುಬೈ' ಎಂದು ಹೇಳಿದರೆ, ನಿಮ್ಮ ಮನಸ್ಸಿನಲ್ಲಿ ಹತ್ತಾರು ಚಿತ್ರಣಗಳು ಮೂಡೀತು. ಆ ಹೆಸರನ್ನು ಯಾರು ಕೇಳಿಲ್ಲ ಹೇಳಿ. ದುಬೈಗೆ ಹೋಗಿ ಬಂದವರು ಸಹ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಹೆಸರನ್ನು ಕೇಳಿರುವ ಸಾಧ್ಯತೆ ಅಷ್ಟಕಷ್ಟೆ. ಆದರೆ ಆಧುನಿಕ ದುಬೈ ಎಂಬ ಮಾಯಾನಗರಿಯ ನಿರ್ಮಾತೃ ಇದೇ ವ್ಯಕ್ತಿ ಎಂದರೆ ಅಚ್ಚರಿಯಾದೀತು. ಒಬ್ಬ ವ್ಯಕ್ತಿಯ ದೂರದರ್ಶಿತ್ವ ಹಾಗೂ ಧೀಮಂತನಾಯಕತ್ವ ಹೇಗೆ ಒಂದು ನಗರವನ್ನು ಜಗತ್ತಿನ ಭೂಪಟದಲ್ಲಿ ಪ್ರಮುಖವಾಗಿ ಸ್ಥಾಪಿಸಬಹುದು ಎಂಬುದಕ್ಕೆ ಮಕ್ತೌಮ್ ಜೀವಂತ ನಿದರ್ಶನ. ನಾನು ಇತ್ತೀಚೆಗೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಬರೆದ My vision: Challenges in the Race for Excellence ಎಂಬ ಪುಸ್ತಕವನ್ನು ಓದುತ್ತಿದ್ದೆ. ದುಬೈ ವಿಮಾನ ನಿಲ್ದಾಣದ ಪುಸ್ತಕದಂಗಡಿಯಲ್ಲಿ ಈ ಕೃತಿಯ ಮೈದಡವುತ್ತಿದ್ದಾಗ ಒಂದು ವಾಕ್ಯವನ್ನು ಗಮನಿಸಿದೆ-'ಆಫ್ರಿಕಾದ ಕಾಡಿನಲ್ಲಿರುವ ಕೃಷ್...

ಗೊರಿಲ್ಲಾಗಳಿಗಾಗಿಯೇ ಪೂರ್ತಿ ಬದುಕು ಸವೆಸಿದ ಫಾಸ್ಸಿ

ಮತ್ತೆ ರವಾಂಡಾ, ಗೊರಿಲ್ಲಾ! ಹೀಗೆಂದು ನೀವು ರಾಗ ಎಳೆಯಬಹುದು, ಮೂಗು ಮುರಿಯಬಹುದು. ಈ ಸೆಳೆತ, ಹಿಡಿತ, ಮೋಹದಿಂದ ತಪ್ಪಿಸಿಕೊಳ್ಳುವುದು ಸಹ ಕಷ್ಟ ಎಂದು ಮನವರಿಕೆಯಾಗಿದೆ. ರವಾಂಡಾದಿಂದ ವಾಪಸ್ ಬಂದು ಒಂದೂವರೆ ತಿಂಗಳಾದರೂ, ಮನಸ್ಸು ಇನ್ನೂ ರವಾಂಡಾದ ಕಾಡು, ಜನಾಂಗೀಯ ನರಮೇಧದಲ್ಲಿ ಸತ್ತವರ ತಲೆಬುರುಡೆಗಳನ್ನು ನುಂಗಿದ ಆ ಸಮಾಧಿಯ ಸುತ್ತ ಸುತ್ತುತ್ತಿದೆ. ರವಾಂಡಾದಿಂದ ಬಂದ ಬಳಿಕ ಓದಿದ ಆ ಮೂರು ಪುಸ್ತಕಗಳು ಮನಸ್ಸಿನ ಮೇಲ್ಪದರದಲ್ಲಿ ಕೆನೆಯಂತೆ ಕುಳಿತತು ಬಿಟ್ಟಿದೆ. ಫಿಲಿಪ್ ಗೌರೆವಿಚ್ ಬರೆದ we wish to inform you that tommrrow we will be killed with our families: Stories from Rwanda,ಅಲಿಸನ್ ಲಿಬಾಫ್‌ಸ್ಕಿ ಬರೆದ Leave none to tell the story: Genocide in Rwanda ಹಾಗೂ ಡಯನ್ ಫಾಸ್ಸಿ ಬರೆದ Gorillas in the mist ಕೃತಿಗಳು ಪುನಃ ಪುನಃ ರವಾಂಡಾದ ಕಡೆಗೆ ಕರೆದೊಯ್ಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಒಂದು ದೇಶ, ಅಲ್ಲಿನ ಜನ, ಒಂದು ಪ್ರಾಣಿ ಇಷ್ಟೊಂದು ಹಿತವಾಗಿ ಅಲುಗಾಡಿಸಿರಲಿಲ್ಲ. ಈ ಮಧ್ಯೆ ಜನಾಂಗೀಯ ಹತ್ಯಾಕಾಂಡಕ್ಕೆ ಸಂಬಂಧಿಸಿದ 'ಹೋಟೆಲ್ ರವಾಂಡಾ' ಎಂಬ ಸಿನಿಮಾವನ್ನು ನೋಡಿದೆ. ಮನಸ್ಸು ತೊಯ್ದು ಗುಬ್ಬಚ್ಚಿಯಂತಾಗಿದೆ. ನೂರು ದಿನಗಳಲ್ಲಿ ಹತ್ತು ಲಕ್ಷ ಜನ ಹೊಡೆದು, ಬಡಿದುಕೊಂಡು ಬೀದಿ ಹೆಣವಾಗಿ, ಅಂತಿಮ ಸಂಸ್ಕಾರಕ್ಕೂ ನಸೀಬು ಇಲ್ಲದೇ ಯಕಃಶ್ಚಿತವಾಗಿ ಸತ್ತು ಹೋಗುವುದಿದೆಯಲ್ಲ...

ಚುಕ್ಕಿಗಳಂಥ ಮಿನುಗು ಕತೆಗಳಲ್ಲಿ ಆಗಸದಗಲ ನೀತಿ!

Image
- ವಿಶ್ವೇಶ್ವರ ಭಟ್ ಜೀವನವೆಂಬುದು ನೀವು ಯಾವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಬಿಸಿಲಿನ ಝಳದೊಂದಿಗೆ ಚುನಾವಣೆಯ ಕಾವೂ ಸೇರಿಕೊಂಡಿದೆ. ರಾಜಕಾರಣಿಗಳೆಲ್ಲ ನಿಮ್ಮ ಮನೆ ಬಾಗಿಲಲ್ಲಿ ಜಮಾಯಿಸಿ ತಮ್ಮ ತಮ್ಮ ಕತೆ ಹೇಳುವ, ಕನಸು ತೋರಿಸುವ ಸಮಯ. ಇವರದ್ದೆಲ್ಲಾ ಕತೆ ಯಾರಿಗೆ ಬೇಕಿದೆ ಎಂಬ ಪ್ರಶ್ನೆ ಥಟ್ಟನೆ ನಿಮ್ಮ ಮನದಲ್ಲಿ ಎದ್ದರೆ ಅದಕ್ಕೆ ನನ್ನ ಅನುಮೋದನೆಯೂ ಇದೆ. ಹಾಗೆಂದೇ ಇಲ್ಲಿ ಬೇರೆಯದೇ ಹರವಿನ ಮೂರು ಕತೆಗಳ ಕೈ ಜಗ್ಗಿದ್ದೇನೆ. -- ಪ್ರಯಾಣಿಕರ ದೋಣಿಯೊಂದು ಬಿರುಗಾಳಿಗೆ ಸಿಲುಕಿ ಛಿದ್ರವಾಯಿತು. ಕೊನೆಯಲ್ಲಿ ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಸಮೀಪದಲ್ಲೇ ಇದ್ದ ಚಿಕ್ಕ ದ್ವೀಪವೊಂದರತ್ತ ಈಜಿ ಬದುಕುಳಿದರು. ಅವರಿಬ್ಬರೂ ಮಿತ್ರರೇ! ಮುಂದೇನು ಮಾಡಬೇಕು ಎನ್ನುವುದು ತೋಚದೆ ದೇವರಿಗೆ ಮೊರೆ ಹೋಗುವುದೇ ಕೊನೆಯ ದಾರಿ ಎಂದವರು ನಿಶ್ಚಯಿಸಿದರು. ಆದರೆ ಯಾರ ಪ್ರಾರ್ಥನೆಗೆ ದೇವರು ಬೇಗ ಓಗೊಡುತ್ತಾನೆ ಎಂಬುದನ್ನು ಪರೀಕ್ಷಿಸಲು ಇಬ್ಬರೂ ದ್ವೀಪದ ವಿರುದ್ಧ ದಿಕ್ಕುಗಳಲ್ಲಿ ವಾಸಿಸಬೇಕೆಂದು ನಿರ್ಧರಿಸಿ, ಅದರಂತೆಯೇ ದೂರವಾದರು. ಅವರು ಮೊದಲು ಪ್ರಾರ್ಥಿಸಿದ್ದು ಆಹಾರಕ್ಕಾಗಿ. ಮರುದಿನ ಬೆಳಗ್ಗೆ ಮೊದಲನೇ ವ್ಯಕ್ತಿ ಇದ್ದ ತುಸು ದೂರದಲ್ಲೇ ಹಣ್ಣು ತುಂಬಿದ ಮರವೊಂದು ಬೆಳೆದು ನಿಂತಿತ್ತು. ಆದರೆ...

ಸತ್ಯ, ವಿಶ್ವಾಸಾರ್ಹತೆ, ಧಿಮಾಕು… ಹೀಗೊಂದು ಪದ ಮೆಲುಕು !

Image
ಇತ್ತೀಚೆಗೆ ಮಹಾತ್ಮ ಗಾಂಧಿಯವರು ತಾವೇ ಸಂಪಾದಿಸುತ್ತಿದ್ದ ‘ಯಂಗ್ ಇಂಡಿಯಾ’ ಪತ್ರಿಕೆಯ ಹಳೆಯ ಸಂಚಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದೆ. ನಿಮಗೆ ಗೊತ್ತಿರಬಹುದು, ಗಾಂಧೀಜಿ ಸಹ ಪತ್ರಕರ್ತರಾಗಿದ್ದರು. ಬೇರೆ ಬೇರೆ ಕಾಲಘಟ್ಟಗಳಲ್ಲಿ ಅವರು ಆರು ಪತ್ರಿಕೆಗಳಿಗೆ ಸಂಪಾದಕರಾಗಿದ್ದರು ಹಾಗೂ ಆ ಎಲ್ಲ ಪತ್ರಿಕೆಗಳಿಗೂ ಅವರು ತಪ್ಪದೇ ಬರೆಯುತ್ತಿದ್ದರು. ಯಂಗ್ ಇಂಡಿಯಾ, ಹರಿಜನ, ಇಂಡಿಯನ್ ಒಪಿನಿಯನ್, ಹರಿಜನ ಬಂಧು (ಗುಜರಾತಿ), ಹರಿಜನಸೇವಕ (ಹಿಂದಿ) ಹಾಗೂ ನವಜೀವನ ಪತ್ರಿಕೆಗಳಿಗೆ ಅವರು ಸಂಪಾದಕರಾಗಿದ್ದರು. ಗಾಂಧೀಜಿಯವರು ಇಂಗ್ಲಿಷ್, ಹಿಂದಿ ಹಾಗೂ ಗುಜರಾತಿ ಭಾಷೆಗಳಲ್ಲಿ ಬರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೀರ್ಘ ಕಾಲ ಪ್ರವಾಸ ಮಾಡಬೇಕಾಗುತ್ತಿತ್ತು. ಆದರೂ ಅವರು ಸಂಪಾದಿಸುತ್ತಿದ್ದ ಪತ್ರಿಕೆ ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಪ್ರಯಾಣದ ಸಮಯದಲ್ಲಿ ತಾವು ಬರೆಯಬೇಕಾದ ಲೇಖನಗಳು, ಸಂಪಾದಕೀಯವನ್ನು ಅವರು ಡಿಕ್ಟೇಟ್ ಮಾಡುತ್ತಿದ್ದರು. ತಮ್ಮಿಂದಾಗಿ ಪತ್ರಿಕೆ ತಡವಾಗಿ ಪ್ರಕಟವಾಗುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಅದಿರಲಿ, ನಾನು ಹೇಳಬೇಕೆಂದಿದ್ದು ಇದಲ್ಲ. ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಅವರು ತಮಗೆ ಇಷ್ಟವಾದ ಎರಡು ಪದಗಳ ಕುರಿತು ಬರೆದ ಒಂದು ಪುಟ್ಟ ಲೇಖನ ನನ್ನ ಗಮನ ಸೆಳೆಯಿತು. ತೀರಾ ಸಹಜವಾದ, ಆದರೆ ಕುತೂಹಲ ಹುಟ್ಟಿಸುವ ಬರಹವದು. ಗಾಂಧೀಜಿಗೆ ಇಷ್ಟವಾದ ಆ ಎರಡು ಪದಗಳು ಯಾವವು? ಮೊದಲನೆಯದು Truth (ಸತ್ಯ) ಹಾ...

ಇಸ್ರೇಲ್ ಎಂಬ ಅದ್ಭುತ ‘ಮರುಳು’ ಭೂಮಿ!

Image
ನನಗಂತೂ ನಂಬಿಕೆ ಬರಲಿಲ್ಲ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಕೇಳಿದ್ದು ನಿಜ. ಆದರೆ ಸ್ವತಃ ಅಲ್ಲಿಗೆ ಹೋಗಿ ನೋಡಿದರೂ ನಂಬಿಕೆ ಬರುತ್ತಿಲ್ಲ. ಜೋರ್ಡಾನ್ ರಾಜಧಾನಿ ಅಮ್ಮಾನ್್ನಿಂದ ಡೆಡ್ ಸೀ (ಮೃತ ಸಮುದ್ರ) ಮಾರ್ಗವಾಗಿ, ರಸ್ತೆ ಮೂಲಕ ಇಸ್ರೇಲ್ ಗಡಿಯನ್ನು ದಾಟುತ್ತಿದ್ದರೆ, ಕಣ್ಣಿನ ಜೀಕು ಹಾಯುವ ತನಕ ಬರೀ ಮರಳುಗಾಡು. ದುರ್ಬೀನು ಹಿಡಿದು ಹುಡುಕಿದರೂ ಒಂದು ಮರವಾಗಲಿ, ಹಸಿರು ಎಂಬ ವಸ್ತುವಾಗಲಿ ಕಾಣ ಸಿಗುವುದಿಲ್ಲ. ಎಲ್ಲೆಡೆ ನಿರುಪಯುಕ್ತ ಮಣ್ಣು. ಹನಿ ನೀರಿನ ಲವಲೇಶವೂ ಇಲ್ಲದ ನಿರ್ದಯಿ ಭೂಮಿ. ಮುಗಿಲು ಮುಟ್ಟುವ ಮರುಭೂಮಿ. ದಾರಿ ಸಾಗಿದ್ದೇ ತಿಳಿಯದ ಆ ಮರುಳುಗಾಡಿನಲ್ಲಿ ಹಸಿರು ಎಂಬ ಪದದ ಅರ್ಥವೂ ಆಗುವುದಿಲ್ಲ. ಊಹಿಸಿಕೊಳ್ಳಲೂ ಆಗುವುದಿಲ್ಲ. ಎರಡು ಗಂಟೆ ಪ್ರಯಾಣದ ಬಳಿಕ, ಹತ್ತಿರ ಹತ್ತಿರ ಜೆರುಸಲೆಮ್್ಗೆ ಬರುವ ತನಕವೂ ಇದೇ ದೃಶ್ಯ. ಇಸ್ರೇಲ್್ನ ಸಾಹಸ, ಪರಾಕ್ರಮ, ವೈರಿಗಳನ್ನು ಮಟ್ಟ ಹಾಕುವ ರೀತಿ, ಭಯೋತ್ಪಾದನೆ ವಿರುದ್ಧ ಸೆಣಸುವ ಛಲ, ನಾಲ್ಕೂ ದಿಕ್ಕಿಗೆ ವೈರಿಗಳನ್ನು ಕಟ್ಟಿಕೊಂಡರೂ ಸದಾ ಅವರಿಗೇ ಸಿಂಹಸ್ವಪ್ನವಾಗಿರುವ ಇಸ್ರೇಲ್ ಕಥೆಗಳನ್ನು ಕೇಳಿದ್ದರೂ, ಕೃಷಿ ರಂಗದಲ್ಲೂ ಇದು ಜಗತ್ತಿನಲ್ಲಿಯೇ ಮುಂದುವರಿದ ದೇಶ ಎಂಬುದನ್ನು ಅಲ್ಲಿಗೆ ಹೋದ ಬಳಿಕವೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸುಮಾರು ನಾನೂರು- ಐನೂರು ಕಿಮಿ ಓಡಾಡಿದರೂ ಹಸಿರೇ ಕಾಣದ ದೇಶ, ಬುರುಡೆ ಬರಡುಭೂಮಿ ಹೊಂದಿರುವ ದೇಶ, ಕೃಷಿಯಲ್ಲೂ ಅಗಾಧ ಸಾಧನೆ ಮಾಡಿದೆ ಅ...