Posts

Showing posts from January, 2013

ಶಾಂತಿಗಾಗಿ ಹಂಬಲಿಸಿದ; ಅಶಾಂತಿಯೇ ಬದುಕಾಯಿತು!

ಭಾವತೀರಯಾನ - ಎ.ಆರ್.ಮಣಿಕಾಂತ್ ಶ್ರೀಮಂತಿಕೆಯೊಂದಿದ್ದರೆ ಸಾಕು; ಅದರಿಂದ ನಾವು ಬಯಸಿದ್ದನ್ನೆಲ್ಲ ಪಡೆಯಬಹುದು, ಖರೀದಿಸಬಹುದು, ಗೆಲ್ಲಬಹುದು! ಬಯಸಿದ್ದೆಲ್ಲ ಸಿಕ್ಕಿದ ಮೇಲೆ ಇನ್ನೇನಿದೆ? ಆನಂತರದ ದಿನಗಳಲ್ಲಿ ಸಂಭ್ರಮವೆಂಬುದು ನಮ್ಮ ಬದುಕಾಗುತ್ತದೆ. ನೆಮ್ಮದಿ ಕೈ ಹಿಡಿಯುತ್ತದೆ. ಕೈ ತುಂಬ ಕಾಸಿದೆ ಎಂಬ ಕಾರಣದಿಂದಲೇ ಬಯಸಿದಂಥ ಮನೆ ಮಾತ್ರವಲ್ಲ, ಮನೆಯೊಡತಿ ಕೂಡ ಸಿಕ್ಕುತ್ತಾಳೆ. 'ಹಣವಂತ' ಎಂಬ ಕಾರಣದಿಂದಲೇ ಸಮಾಜದಲ್ಲಿ ಗೌರವ ಸಿಗುತ್ತದೆ. ಬಂಧುಗಳು-ಸ್ನೇಹಿತರ ಸಂಖ್ಯೆ ಸಾವಿರವಾಗುತ್ತದೆ. ಅಲ್ಲಲ್ಲಿ, ಅಭಿಮಾನಿಗಳೂ ಹುಟ್ಟಿಕೊಳ್ಳುತ್ತಾರೆ. ಅಷ್ಟೇ ಅಲ್ಲ; ಶ್ರೀಮಂತ ಅನ್ನಿಸಿಕೊಂಡವನನ್ನು, ಆತ ಮಧ್ಯವಯಸ್ಸು ತಲುಪಿದ ನಂತರವೂ ಪ್ರೀತಿಸುವ, ಆರಾಧಿಸುವ, ಆಸೆ ಪಡುವ, ಅವನ ಒಂದೇ ಒಂದು ಅಪ್ಪುಗೆಗಾಗಿ, ಆಲಿಂಗನಕ್ಕಾಗಿ ಕಾತರಿಸುವ ಹೆಣ್ಣುಗಳ ಹಿಂಡೇ ಇರುತ್ತದೆ. ಅದಕ್ಕೆ ಹೇಳೋದು: ಶ್ರೀಮಂತಿಕೆ ಎಂಬುದು ಜೊತೆಗಿದ್ದರೆ, ಸುಖದ ಬದುಕು ನಮ್ಮದಾಗುತ್ತದೆ!' ಇಂಥದೊಂದು ನಂಬಿಕೆ ಹಲವರಿಗಿದೆ. ಆದರೆ, ವಾಸ್ತವ ಏನೆಂದರೆ- ದುಡ್ಡಿದೆ ಎಂದ ಮಾತ್ರಕ್ಕೆ ಅದರಿಂದ ನೆಮ್ಮದಿಯನ್ನಾಗಲಿ, ಸಂತೋಷವನ್ನಾಗಲಿ, ಬಯಸಿದಂಥ ಹೆಂಡತಿಯನ್ನಾಗಲಿ (ಗಂಡನನ್ನಾಗಲಿ) ಪಡೆಯಲು ಸಾಧ್ಯವೇ ಇಲ್ಲ. ಈ ಮಾತಿಗೆ ಸಾಕ್ಷಿಯಾಗಿ, ಆಲ್‌ಫ್ರೆಡ್ ನೊಬೆಲ್‌ನ ಬದುಕಿನ ಕಥೆಯಿದೆ. ತನ್ನ ಜೀವಿತಾವಧಿಯ ಸಾಧನೆಗಾಗಿ ವ್ಯಕ್ತಿಯೊಬ್ಬ ಪಡೆಯಬಹುದಾದ ಸರ್ವಶ್ರೇಷ್ಠ ಪ್ರಶಸ...

ಕಷ್ಟ ಬಂದಾಗ ಆಕೆ ಬಾಗಲಿಲ್ಲ, ಬಾಳಿ ತೋರಿಸಿದಳು!

ಕಷ್ಟ ಬಂದಾಗ ಆಕೆ ಬಾಗಲಿಲ್ಲ, ಬಾಳಿ ತೋರಿಸಿದಳು! ಭಾವತೀರಯಾನ - ಎ.ಆರ್.ಮಣಿಕಾಂತ್ ಕಷ್ಟಗಳು, ಬೇಡುವುದನ್ನು ಮಾತ್ರವಲ್ಲ, ಬಾಳುವುದನ್ನೂ ಕಲಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ಪಟ್ರೇಸಿಯಾ ನಾರಾಯಣ್ ಎಂಬ ಹೆಣ್ಣು ಮಗಳ ಯಶೋಗಾಥೆ ಇಲ್ಲಿದೆ. ಅದನ್ನೂ ಆಕೆಯ ಮಾತುಗಳಲ್ಲೇ ಕೇಳೋಣ: 'ನಿಜ ಹೇಳಬೇಕೆಂದರೆ ನನ್ನ ಬದುಕೇ ಆಕಸ್ಮಿಕಗಳ ಸರಮಾಲೆ. ಗೃಹಿಣಿಯಾಗಿ ಜೀವನ ನಡೆಸಬೇಕು ಎಂಬುದಷ್ಟೇ ನನ್ನ ಆಸೆಯಾಗಿತ್ತು. ಆದರೆ ಗಂಡ ಅನ್ನಿಸಿಕೊಂಡಾತ ನನ್ನ ಪಾಲಿಗೆ ಒಂದು ಶಾಪವಾದ. ಆತ ತನ್ನ ಜವಾಬ್ದಾರಿ ಮರೆತ. ಹೊಡೆದು ಬಡಿದು ಚಿತ್ರಹಿಂಸೆ ನೀಡಿದ. ಬಿಟ್ಟೂ ಬಿಡದೆ ಕಾಡಿದ. ಈ ಮಧ್ಯೆಯೇ ಇಬ್ಬರು ಮಕ್ಕಳಾದರು. ಆನಂತರವಾದರೂ ಗಂಡ ಬದಲಾಗಲಿಲ್ಲ.  ಪರಿಣಾಮ, ಹೊಟ್ಟೆಪಾಡಿನ ಕಾರಣಕ್ಕೆ ನಾನು ದುಡಿಯಲು ನಿಂತೆ. ಮೊದಲ ದಿನ ಸಂಪಾದಿಸಿದ್ದು ಕೇವಲ 50 ಪೈಸೆ. ಆದರೆ ಈಗ ದಿನಕ್ಕೆ ಎರಡೂವರೆ ಲಕ್ಷ ಸಂಪಾದಿಸ್ತಾ ಇದೀನಿ. 30 ವರ್ಷಗಳ ಹಿಂದೆ ಒಂದು ತಳ್ಳುಗಾಡಿಯ ಮೊಬೈಲ್ ಕ್ಯಾಂಟೀನ್ ಹೊಂದಿದ್ದವಳು, ಈಗ 14 ಎ.ಸಿ. ಹೋಟೆಲುಗಳ ಮಾಲೀಕಳಾಗಿದೀನಿ. ಒಮ್ಮೆ ಹಿಂತಿರುಗಿ ನೋಡಿದ್ರೆ ನಡೆದಿರುವುದೆಲ್ಲಾ ನಂಬಲಾಗದಂಥ ಪವಾಡ ಅನ್ನಿಸ್ತಿದೆ... ನಮ್ಮದು ಸಂಪ್ರದಾಯಸ್ತ ಕ್ರಿಶ್ಚಿಯನ್ ಕುಟುಂಬ. ಅಪ್ಪನಿಗೆ ಅಂಚೆ ಮತ್ತು ತಂತಿ ಇಲಾಖೆಯಲ್ಲಿ, ಅಮ್ಮನಿಗೆ ದೂರವಾಣಿ ಇಲಾಖೆಯಲ್ಲಿ ನೌಕರಿಯಿತ್ತು. ನನಗೆ ಇಬ್ಬರು ಸೋದರರು. ಚೆನ್ನೈನ ಮರೀನಾ ಬೀಚ್‌ಗೆ ಹತ್ತಿರದಲ್ಲೇ ನಮ್...

Attacks on RTI activists in India

Many  Right to Information Act  (RTI) activists, including policemen, have been harassed and even murdered for seeking information to “promote transparency and accountability in the working of every public authority” in  India . Many face assaults on a regular basis. People seeking information from their  gram panchayat  and the local administration also face social ostracism. Many threats and attacks (including murder) are unreported by the media. Rising voices RTI activists are vulnerable  human rights defenders  (HRDs) in India. Unlike other HRDs, a majority of the RTI activists are not part of an organisation; they often act alone, moved by anger at corruption and other illegal activities. RTI activists are vulnerable because they live in the same areas as public authorities and political leaders who do not want information about their activities to be disclosed. For the most part, human rights defenders receive media attention only when...