Posts

Showing posts from January, 2014

ಕಂಕಾರಿಯಾ ಮಾದರಿಯನ್ನು ನಾವೂ ಅನು'ಮೋದಿ'ಸೋಣ

Image
ಸರ್ದಾರ್ ಸರೋವರದಿಂದ ನೀರು ಸರಿಸುಮಾರು 280 ಕಿ. ಮೀ. ನಷ್ಟು ದೂರದ ಪ್ರಯಾಣ ಬೆಳೆಸುತ್ತದೆ. ಉದ್ದಕ್ಕೂ ಇರುವ ಸಣ್ಣಪುಟ್ಟ ಕೆರೆಗಳನ್ನು ತುಂಬಿಯೇ ನೀರು ಮುಂದಕ್ಕೆ ಹೋಗುವಂತೆ ಯೋಜಿಸಲಾಗಿದೆ. ಜತೆಗೆ ಕನೇವಲ್ ಹಾಗೂ ಪರೇಜ್ ಕೆರೆಗಳೂ ತುಂಬುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಅನಾಯಾಸವಾಗಿ ಏರಿಕೆ ಕಂಡು ಬಂದಿದೆ. ಹಿಂದೊಮ್ಮೆ ಗುಜರಾತ್‌ನ ನೀರಾವರಿ ಮತ್ತು ಕೃಷಿ ರಂಗದಲ್ಲಾದ ಅಭಿವೃದ್ಧಿಯ ಬಗ್ಗೆ ನನ್ನ ಅಂಕಣದಲ್ಲಿ ಬರೆದಿದ್ದಾಗ ನಮ್ಮ ಬುದ್ಧಿ(?)ಜೀವಿಗಳೆನಿಸಿದ ಕೆಲವರು ಚೇಳು ಕಡಿಸಿಕೊಂಡಂತೆ ಎಗರಿ ಬಿದ್ದಿದ್ದರು. ಅದೇನೋ ಕೆಲವರಿಗೆ ಗುಜರಾತ್ ಅಂದರೆ ಅದು ಗೋಧ್ರಾ ಸುತ್ತಮುತ್ತಲಿನ ಘಟನೆಗಳು, ಮೋದಿ ಎಂದರೆ ಹಿಂದುತ್ವ ಎಂದಷ್ಟೇ ಆಗಿಬಿಟ್ಟಿದೆ. ಅದರ ಹೊರತಾಗಿ ಗುಜರಾತ್ ಅನ್ನು ಒಂದು ರಾಜ್ಯವಾಗಿ, ಮೋದಿಯನ್ನು ಒಬ್ಬ ಆಡಳಿತಗಾರ, ಮುಖ್ಯಮಂತ್ರಿಯಾಗಿ ನೋಡಿಯೇ ಇಲ್ಲ. ಹೀಗಾಗಿ ಅಲ್ಲಿನ ಅಭಿವೃದ್ಧಿ ಯಾವಾಗಲೂ ಕೆಲವರಿಗೆ ಮಾನದಂಡವಾಗುವುದೇ ಇಲ್ಲ. ಹೋಗಲಿ ಬಿಡಿ, ರಾಜಕೀಯದ ಮಾತುಗಳು. ಆದರೆ ಅದರ ಹೊರತಾಗಿ ನಿಜಕ್ಕೂ ಗುಜರಾತ್ ಏಕೆ ಮಾದರಿಯಾಗಿ ನಿಲ್ಲುತ್ತದೆ ಎಂಬುದಕ್ಕೆ ಕಾರಣಗಳನ್ನು ನಿರಾಕರಿಸುವಂತೆಯೇ ಇಲ್ಲ. ಗುಜರಾತ್ ಅತ್ಯಂತ ಕಡಿಮೆ ಮಳೆ ಬೀಳುವ ರಾಜ್ಯ. ಅಲ್ಲಿ ಅಭಿವೃದ್ಧಿ ಎಂದರೆ ಅದೊಂದು ಸಾಹಸ. ಅದರಲ್ಲೂ ಕೃಷಿ ಮತ್ತು ನೀರಾವರಿಯಲ್ಲಿನ ಒಂದೊಂದು ಹೆಜ್ಜೆಯೂ ಒಂದೊಂದು ಮೈಲುಗಲ್ಲೆನಿಸುತ್ತದೆ....

Team ISRO: Making India proud, again

The Indian Space Research Organisationscripted history when its Rs 450-crore Mars Orbiter Mission took off from Sriharikota spaceport for a 780 million-kilometre journey to the Red Planet on November 5 Over 1,000-odd scientists, led by their chief K Radhakrishnan, worked tirelessly for years to turn the ambitious mission into a reality. The 10-month journey, which began on November 5, is expected to reach the Martian atmosphere in the third week of September 2014. The spacecraft will cover 400 million kilometres in 300 days before reaching the Martian atmosphere. Incidentally, fewer than 25 of the spacecraft sent by other countries have been able to complete the entire journey to Mars. Let’s doff our hats to the amazing members of Team ISRO who helped India achieve yet another milestone in the great beyond. Some of the key members of team ISRO are: K Radhakrishnan: ISRO chairman, secretary in Department of Space M Annadurai: Programme director, Mars Orbiter Mission...

ರಸ್ತೆ ನಿರ್ಮಾಣದಲ್ಲಿ ವೈಜ್ಞಾನಿಕ ಬಡತನ

Image
ರೋಡ್ ಇಂಜಿನಿಯರಿಂಗ್. ಭಾರತದ ಮಟ್ಟಿಗೆ ಬಹುಶಃ ಈ ಪದಕ್ಕೆ ಅರ್ಥವೇ ಇಲ್ಲ. ಕಾರಣ ನಮ್ಮಲ್ಲಿ ಯಾವುದೇ ರಸ್ತೆ 2-3 ವರ್ಷಕ್ಕಿಂತ ಹೆಚ್ಚಿಗೆ ತೇಪೆ ಕಾಣದೇ ಬಾಳಿದ್ದಿಲ್ಲ. ರಸ್ತೆಗೂ ಇಂಜಿನಿಯರ್ ಬೇಕಾ ಎನ್ನುವ ಗುತ್ತಿಗೆದಾರರೇ ನಮ್ಮಲ್ಲಿ ಜಾಸ್ತಿ. ಇವತ್ತು ಭಾರತದಲ್ಲಿ ರಸ್ತೆಗಳ ಸ್ಥಿತಿ ಅಧೋಗತಿಗೆ ಇಳಿದಿದ್ದರೆ ತೀರ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸುತ್ತಿರುವುದೇ ಕಾರಣ. (ನಮ್ಮವರೇ ವಿದೇಶದಲ್ಲಿ ನಿರ್ಮಿಸಿರುವ ಹುವಾಂಗ್ ಹೆದ್ದಾರಿ. ಇವತ್ತು ಹದಿನೈದು ವರ್ಷಗಳ ನಂತರವೂ ಕನ್ನಡಿಯಂತಿದೆ) ಅಸಲಿಗೆ ಅತಿ ಹೆಚ್ಚಿನ ಅರ್ಥಿಕ ವ್ಯವಸ್ಥೆಯನ್ನು ಹದಗೆಡಿಸುತ್ತಿರುವುದು ಮತ್ತು ಬಜೆಟ್ನಲ್ಲಿ ಸರ್ಕಾರಕ್ಕೆ ಅತಿ ಹೆಚ್ಚಿನ ಹೊರೆಯಾಗುತ್ತಿರುವುದು ರಸ್ತೆಗೆ ಹರಿಸುವ ಹಣವಾದರೆ, ಅದೇ ನಮ್ಮ ಗುತ್ತಿಗೆದಾರರಿಗೂ/ ನಾಯಕರಿಗೂ ನಿರಂತರ ಆಮದನಿಯ ಸೈಡ್ ರೋಡು. ಅಷ್ಟಕ್ಕೂ ನಮ್ಮ ದೇಶದಲ್ಲಿ ಮಾತ್ರ ಯಾಕೆ ಹೀಗೆ ರಸ್ತೆಗಳು ಹದಗೆಟ್ಟು ಹೋಗುತ್ತವೆ? ಯಾಕೆ ನಮ್ಮಲ್ಲಿ ದಶಕಗಳ ಕಾಲ ಬಾಳುವಂತಹ ರಸ್ತೆಗಳನ್ನು ನಿರ್ಮಿಸಲಾಗುತ್ತಿಲ್ಲ. ಒಂದೇ ಒಂದು ರಾಷ್ಟ್ರೀಯ ಹೆದ್ದಾರಿ ಕೂಡಾ ಕನಿಷ್ಟ ಐದು ವರ್ಷವಾದರೂ ತೇಪೆ ಕಾಣದೇ ಯಾಕೆ ಉಳಿಯುತ್ತಿಲ್ಲ? ಇದೇ ಶಿರಾಡಿ ಘಾಟ್ ರಸ್ತೆ ಇಲ್ಲಿಯವರೆಗೂ ಎಷ್ಟೇ ರೀಪೇರಿ ಮತ್ತು ನಿರ್ವಹಣೆ ಮಾಡಿದರೂ ಮಳೆಗಾಲದ ಅವಧಿಗೂ ಮೊದಲೇ ತೋಪೆದ್ದು ಹೋಗೋದು ಯಾಕೆ? ಇವತ್ತು ಕರ್ನಾಟಕದ ಎಷ್ಟು ಕಾಲೇಜುಗಳಲ್ಲಿ ರೋಡ್ ಇಂಜಿನಿಯ...