ಕಂಕಾರಿಯಾ ಮಾದರಿಯನ್ನು ನಾವೂ ಅನು'ಮೋದಿ'ಸೋಣ
ಸರ್ದಾರ್ ಸರೋವರದಿಂದ ನೀರು ಸರಿಸುಮಾರು 280 ಕಿ. ಮೀ. ನಷ್ಟು ದೂರದ ಪ್ರಯಾಣ ಬೆಳೆಸುತ್ತದೆ. ಉದ್ದಕ್ಕೂ ಇರುವ ಸಣ್ಣಪುಟ್ಟ ಕೆರೆಗಳನ್ನು ತುಂಬಿಯೇ ನೀರು ಮುಂದಕ್ಕೆ ಹೋಗುವಂತೆ ಯೋಜಿಸಲಾಗಿದೆ. ಜತೆಗೆ ಕನೇವಲ್ ಹಾಗೂ ಪರೇಜ್ ಕೆರೆಗಳೂ ತುಂಬುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಅನಾಯಾಸವಾಗಿ ಏರಿಕೆ ಕಂಡು ಬಂದಿದೆ. ಹಿಂದೊಮ್ಮೆ ಗುಜರಾತ್ನ ನೀರಾವರಿ ಮತ್ತು ಕೃಷಿ ರಂಗದಲ್ಲಾದ ಅಭಿವೃದ್ಧಿಯ ಬಗ್ಗೆ ನನ್ನ ಅಂಕಣದಲ್ಲಿ ಬರೆದಿದ್ದಾಗ ನಮ್ಮ ಬುದ್ಧಿ(?)ಜೀವಿಗಳೆನಿಸಿದ ಕೆಲವರು ಚೇಳು ಕಡಿಸಿಕೊಂಡಂತೆ ಎಗರಿ ಬಿದ್ದಿದ್ದರು. ಅದೇನೋ ಕೆಲವರಿಗೆ ಗುಜರಾತ್ ಅಂದರೆ ಅದು ಗೋಧ್ರಾ ಸುತ್ತಮುತ್ತಲಿನ ಘಟನೆಗಳು, ಮೋದಿ ಎಂದರೆ ಹಿಂದುತ್ವ ಎಂದಷ್ಟೇ ಆಗಿಬಿಟ್ಟಿದೆ. ಅದರ ಹೊರತಾಗಿ ಗುಜರಾತ್ ಅನ್ನು ಒಂದು ರಾಜ್ಯವಾಗಿ, ಮೋದಿಯನ್ನು ಒಬ್ಬ ಆಡಳಿತಗಾರ, ಮುಖ್ಯಮಂತ್ರಿಯಾಗಿ ನೋಡಿಯೇ ಇಲ್ಲ. ಹೀಗಾಗಿ ಅಲ್ಲಿನ ಅಭಿವೃದ್ಧಿ ಯಾವಾಗಲೂ ಕೆಲವರಿಗೆ ಮಾನದಂಡವಾಗುವುದೇ ಇಲ್ಲ. ಹೋಗಲಿ ಬಿಡಿ, ರಾಜಕೀಯದ ಮಾತುಗಳು. ಆದರೆ ಅದರ ಹೊರತಾಗಿ ನಿಜಕ್ಕೂ ಗುಜರಾತ್ ಏಕೆ ಮಾದರಿಯಾಗಿ ನಿಲ್ಲುತ್ತದೆ ಎಂಬುದಕ್ಕೆ ಕಾರಣಗಳನ್ನು ನಿರಾಕರಿಸುವಂತೆಯೇ ಇಲ್ಲ. ಗುಜರಾತ್ ಅತ್ಯಂತ ಕಡಿಮೆ ಮಳೆ ಬೀಳುವ ರಾಜ್ಯ. ಅಲ್ಲಿ ಅಭಿವೃದ್ಧಿ ಎಂದರೆ ಅದೊಂದು ಸಾಹಸ. ಅದರಲ್ಲೂ ಕೃಷಿ ಮತ್ತು ನೀರಾವರಿಯಲ್ಲಿನ ಒಂದೊಂದು ಹೆಜ್ಜೆಯೂ ಒಂದೊಂದು ಮೈಲುಗಲ್ಲೆನಿಸುತ್ತದೆ....