Posts

Showing posts from February, 2014

KAVALEDURGA FORT

Kavaledurga is a magnificent fort located on a hill at an altitude of 5,056 feet (1,541 m), situated in Shivamogga District in Karnataka. The place can be reached by a 16 km drive from Thirthahalli. Other important places close by are: Thirthahalli Thirthahalli is a taluk head quarters, amidst dense forest and is about 65 Kms. from Shimoga Rameshwara Temple is located on the bank of river Tunga and attracts tourist and pilgrims for holy bath during the month of January every year. Agumbe Agumbe is at a distance of about 80Kms. from Shimoga via Thirthahalli . This is a famous place for viewing sunset. Abbey falls is nearby Agumbe. Kuppahalli This situated at a distance of about 16 Kms. east of Thirthahalli and 81 Kms. from Shimoga. This is fascinating locality which is the birth place of the great poet "KUVEMPU". There is the famous spot here know as Kavishilla where where the poet in his young days used it sit and contemplate. Ambuteertha This is 10 Kms. from Thirthahalli...

ಮಾಳ ಕಾಡಿನ ರಸಕವಳ,ಮಲ್ಯಾಡಿಯಲ್ಲಿ ಪಕ್ಷಿಗಳ ಕಲರವ

Image
ಮಾಳ ಪಶ್ಚಿಮ ಘಟ್ಟದ ತಡಿಯ ಪುಟ್ಟ ತೊಟ್ಟಿಲು, ಬಗಲಲ್ಲಿ ಸಾವಿರಾರು ಜೀವರಾಶಿಗಳನ್ನು, ಪುಟ್ಟ ತೊರೆಗಳನ್ನು ಹೊತ್ತುಕೊಂಡ ಕಾರ್ಕಳ ತಾಲೂಕಿಗೆ ನವಿಲುಗರಿಯಂತಿರೋ ಮಾಳ ಸೌಂದರ್ಯರಾಶಿಗೆ ಅಣಿಯಿಲ್ಲದ ಪುಟ್ಟ ಗ್ರಾಮ. ಮಲೆನಾಡಿನ ಹಸಿರ ಕೇಶ ರಾಶಿಯ ತಪ್ಪಲ್ಲಲ್ಲಿರೋ ಮಾಳದ ಕಾಡ ದಾರಿ, ನೀರ ಹಾದಿ, ಹಸಿರಬೆಟ್ಟ ಎಲ್ಲವೂ ಚಾರಣಿಗರ ಸ್ವರ್ಗ. ಕಾಡಲ್ಲಿ ಪ್ರಕೃತಿಯೊಂದಿಗೆ ಕಾಡೇಗೂಡೇ ಆಡಬೇಕೆನ್ನುವವರಿಗೆ ಮಾಳದ ಚಾರಣ ಬಿಟ್ಟೆನೆಂದರೂ ಬಿಡದ ಮಾಯೆ. ಕಣ್ಣು ಹಾಸಿದ್ದಲ್ಲಿ ಕಾಡುವ ಗಿಡಗಂಟಿಗಳನ್ನು ದಾಟುತ್ತಾ, ಹಾದಿಯೇ ಕಾಣದ ಹುಲ್ಲುರಾಶಿಗಳ ನಡುವೆ ದಾರಿ ಮಾಡಿಕೊಳ್ಳುತ್ತಾ, ಹಕ್ಕಿಗಳ ಕೊರಳ ದನಿಗೆ ತಲೆದೂಗುತ್ತಾ, ಮಾಳದ ಕಾಡ ಹಾದಿ ಹೊಕ್ಕರೆ ಮನಸ್ಸು ನಿರಾಳವಾಗುತ್ತದೆ. ಹರಿಯುವ ಜಲಪಾತದ ವಾದ್ಯ ಸಂಗೀತ ಕಿವಿಗೆ ದಯಪಾಲಿಸುತ್ತದೆ. ಮಾಳ ಕಾಡಿನಲ್ಲಿ ಮೂರುದಿಕ್ಕಿಗೆ ಮೂರು ಜಲಪಾತಗಳು ಬಳಕುತ್ತಾ ಹರಿಯುತ್ತಿರುವುದು ಹಸಿರ ಒಲೆಯಲ್ಲಿ ಕೆನೆ ಹಾಲು ಉಕ್ಕಿದಂತೆ ಕಾಣುತ್ತದೆ. ದಾನಗುಂಡಿ ಜಲಪಾತ, ಕುರೆಂಗಲ್ ಜಲಪಾತ, ಪಶ್ಚಿಮಘಟ್ಟದ ಮೇಲ್ಮೈಯಿಂದ ಜಿಗಿಜಿಗಿದು ಮಲೆನಾಡಿಗೆ ಸೇರುತ್ತದೆ. 500-600 ಅಡಿ ಎತ್ತರದಿಂದ ಕುಣಿಯುತ್ತಾ ಬಂಡೆಗಲ್ಲಿಗೆ ನೂರ್ಮಡಿದು ಬಂದು ರಾಚುವ ದಾನಗುಂಡಿಯ ಧ್ಯಾನಕ್ಕೆ ಎದೆಯರಳಿ ಐಸ್ ಕ್ಯಾಂಡಿಯಾದೀತು. ಕೂಗಳತೆ ದೂರದಿಂದ ನೀರಧಾರೆಯನ್ನು ನೋಡುತ್ತಿದ್ದರೆ ನಿಜಕ್ಕೂ ದುಂಡುಮಲ್ಲಿಗೆ ಮಳೆಗರೆಯುತ್ತಿದೆಯೇನೋ ಅನ್ನಿಸಿ ಒಂದರೆ ಕ್ಷಣ ...

ಪೋಖರಾ ಎಂಬ ಪ್ರೇಮಕಾವ್ಯ

Image
ನೇಪಾಳವು ಭಾರತೀಯರಿಗೆ ಅಪರಿಚಿತವೇನಲ್ಲ, ಭಾರತದ ಒಂದು ರಾಜ್ಯದಂತೆ ಭಾಸವಾಗುವ ನೇಪಾಳದ ಪ್ರವಾಸ ಎಂಥವರನ್ನೂ ಮುದಗೊಳಿಸುತ್ತದೆ. ನೇಪಾಳಕ್ಕೆ ಹೋಗಿಬರುವುದೂ ಅಷ್ಟೇ ಸುಲಭ. ಯಾವುದೇ ವೀಸಾದ ಅವಶ್ಯಕತೆಯಿರುವುದಿಲ್ಲ. ನೇಪಾಳಕ್ಕೆ ಬರುವ ಪ್ರತಿ ಪ್ರವಾಸಿಗನ ಮೊದಲ ಊರು ರಾಜಧಾನಿ ಕಠ್ಮಂಡುವಾದರೆ, ಎರಡನೇ ಭೇಟಿ ಪೋಖರಾಗೆ ಆಗಿರುತ್ತದೆ. ಪೋಖರಾ ನಗರ ಹಿಮಾಲಯದ ಪ್ರೇಮಕಾವ್ಯ, ದೃಶ್ಯಕಾವ್ಯ ಎಲ್ಲವೂ ಆಗಿದೆ. ಹಿಮಾಲಯದ ಚೆಲುವೆಲ್ಲವನ್ನೂ ಮೈಗೂಡಿಸಿಕೊಂಡಂತೆ ಕಾಣುವ ಪೋಖರಾ ನೇಪಾಳದ ಎರಡನೇ ದೊಡ್ಡ ನಗರ. ಆದರೂ ನಗರೀಕರಣದ ಭರಾಟೆ ಅಷ್ಟಾಗಿ ತಾಕಿಲ್ಲ. ನೇಪಾಳದ ಪಶ್ಚಿಮ ಭಾಗದ ಗಂಡಕಿ ವಿಭಾಗದ ಕಾಸ್ಕಿ ಜಿಲ್ಲೆಯ ಜಿಲ್ಲಾ ಮುಖ್ಯ ಕೇಂದ್ರವೂ ಆಗಿರುವ ಪೋಖರಾ, ರಾಜಧಾನಿ ಕಠ್ಮಂಡುವಿನಿಂದ 200 ಕಿ.ಮೀ. ದೂರವಿದೆ. ಜಗತ್ತಿನ ಅತೀ ಎತ್ತರದ ಹತ್ತು ಪರ್ವತ ಶ್ರೇಣಿಗಳಲ್ಲಿ ಮೂರು ಈ ನಗರದ ಸುತ್ತಮುತ್ತ ಇವೆ. ಅವೇ ಅನ್ನಪೂರ್ಣ, ಧವಳಗಿರಿ ಮತ್ತು ಮನಸ್ಲೂ ಶ್ರೇಣಿಗಳು. ಅದರಲ್ಲೂ ನಗರವು ಅನ್ನಪೂರ್ಣ ಶ್ರೇಣಿಯ (ಚಾರಣ) ಮಾರ್ಗಗಳು ಇಲ್ಲಿಂದ ಪ್ರಾರಂಭವಾಗುತ್ತದೆ. ಹಿಮಾಲಯವು ಅತ್ಯಂತ ರೋಮಾಂಚನಕಾರಿ ಅನುಭವ ನೀಡುವ ಚಾರಣ, ಪರ್ವತಾರೋಹಣ, ಪ್ಯಾರಾಗ್ಲೈಡಿಂಗ್, ರಿವರ್ ರ‌್ಯಾಫ್ಟಿಂಗ್‌ನಂಥ ಸಾಹಸಗಳ ತಾಣವಾಗಿದೆ. ಇಲ್ಲಿ ಸದಾ ಮಳೆ ಸುರಿಯುವುದರಿಂದ ಸುತ್ತಮುತ್ತಲಿನ ನದಿಗಳು ವರ್ಷವಿಡೀ ಭೋರ್ಗರೆಯುತ್ತ ರಭಸವಾಗಿ ಹರಿಯುತ್ತವೆ. ಹಾದಿಯುದ್ದಕ್ಕೂ ಹತ್ತಾರೂ ಜಲಪಾತಗಳನ್ನು...

ಹೊರಳು ನೋಟ: ಮೈಸೂರು ವಿವಿ ರೂಪುಗೊಂಡ ಬಗೆ

ವಿಶ್ವವಿದ್ಯಾಲಯದ ಪರಿಕಲ್ಪನೆ ಸಾಕಾ ರ ಗೊಂಡು ಎರಡು ದಶಕಗಳಾಗಿವೆ. ಆದರೆ ತೊಂಬತ್ತೆಂಟು ವರ್ಷಗಳ ಮೊದಲೇ ಮೈಸೂರು ಸಂಸ್ಥಾನದಲ್ಲಿ ಕನ್ನಡ ವಿ ವಿ ಸ್ಥಾಪನೆ ಸಂಬಂಧ ಗಂಭೀರ ಚಿಂತನ-ಮಂಥನ ನಡೆದಿತ್ತು. 1916ರ ಜೂನ್ 29 ರಂದು ಮೈಸೂರಿನ ಅಂದಿನ ದಿವಾನರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು, ಮೈಸೂರು ಯೂನಿವರ್ಸಿಟಿ ಮಸೂದೆ ಯನ್ನು ಅಂದಿನ ವಿಧಾನ ಪರಿಷತ್‌ನಲ್ಲಿ ಮಂಡಿಸಿದಾಗ ನಡೆದ ಚರ್ಚೆ ಹಾಗೂ ಸಂವಾದದಲ್ಲಿ ಅನೇಕ ಸದಸ್ಯರು ಕನ್ನಡ ವಿವಿ ಯೊಂದನ್ನು ಸ್ಥಾಪಿಸಬಾರದೇಕೆ ಎಂಬ ಆಶಯ ವ್ಯಕ್ತಪಡಿಸಿದ್ದರು. ಮೈಸೂರು ಸಂಸ್ಥಾನದ ಒಟ್ಟು ಜನಸಂಖ್ಯೆ 61ಲಕ್ಷ. ಇಷ್ಟೊಂದು ಜನಸಂಖ್ಯೆಯ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಿ ಒಂದು ವಿ ವಿ ಇಲ್ಲ. ಇಂಗ್ಲೆಂಡಿನಲ್ಲಿ ಎರಡೂವರೆ ದಶಲಕ್ಷ ಜನ ಸಂಖ್ಯೆಗೆ ಒಂದೊಂದು ವಿವಿಗಳಿವೆ. ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಹತ್ತು ಸಾವಿರ ಜನಸಂಖ್ಯೆಗೊಂದರಂತೆ ವಿವಿಗಳಿವೆ. ಆದರೆ, ಅರವತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮೈಸೂರು ಸಂಸ್ಥಾನದಲ್ಲಿ ಜ್ಞಾನ ವಿಕಸನಕ್ಕೆ ಪೂರಕವಾದ ಒಂದು ವಿವಿ ಇಲ್ಲದಿರುವುದು ನಿಜಕ್ಕೂ ದುರದೃಷ್ಟಕರ. ಮೈಸೂರು ಸಂಸ್ಥಾನದಲ್ಲಿ ಸಾಕ್ಷರತೆ ಪ್ರಮಾಣ ನಿಜಕ್ಕೂ ಕಡಿಮೆ ಇದೆ. 1881ರಲ್ಲಿ ಶಿಕ್ಷಣಕ್ಕಾಗಿ ಕೇವಲ ಮೂರು ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರೆ, 1914-15ರ ಅವಧಿಯಲ್ಲಿ 21ಲಕ್ಷ ರೂಪಾಯಿ ವೆಚ್ಚ ಮಾಡಲಾ ಗುತ್ತಿದೆ. 1881ರ ಅವಧಿಯಲ್ಲಿ 129 ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪ...

Problems of taking road accident injured person to Hospital & Police Papers

SOME SUGGESTIONS TO OVERCOME IT I hope, my last article was useful to concern persons. The below is not the article on special issue but I give below my observations and request the concerned Government Authority , Advocates, NGO , Social Worker to take necessary action and initiative to solve the below problems for the comforts and awareness of Indian Citizen. When there is accident on city road or highway, the passers by vehicles do not stop to help the injured person, just everybody see it and go ahead saying “Kaun Police Ki Zanzat Me Pade “Here, people want to help the injured person but they avoid due to harassment of Police, if they take the injured person at near by hospital. I have read in Newspaper few years back that the law has been amended in this regard and there will be no questionnaire to the person who brings such road accident person at the hospital. But, I doubt that if there is such amendment in law, the police still continue the same old procedure to ask ...

ಸಾಮಾಜಿಕ ಉದ್ಯಮ: ‘ಸಖಾ’ ಗಾಲಿಯ ಮೇಲೆ ಬಡ ಮಹಿಳೆಯರ ಬದುಕು

Image
ಖ್ಯಾತ ನಟ ಅಮೀರ್ ಖಾನ್ ದೆಹಲಿಗೆ ಬಂದಿಳಿದರೆ ಯಾವುದೇ ಲಕ್ಷುರಿ ವಾಹನ ದಲ್ಲಿ ತಿರುಗಾಡುವುದಿಲ್ಲ. ಆವರು ಉಪಯೋಗಿ ಸುವುದು 'ಸಖಾ ವಿಂಗ್ಸ್' ಅವರ ಟಾಕ್ಸಿ ಸೇವೆಯನ್ನೇ. 'ಸತ್ಯಮೇವ ಜಯತೆ' ಟಿವಿ ಸರಣಿ ಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ನಿರ್ದೇಶಿಸಿದ ಎಪಿಸೋಡಿನಲ್ಲಿ ಮೀನು ವಡೇರಾ ಅವರು ಶುರು ಮಾಡಿರುವ 'ಸಖಾ ವಿಂಗ್ಸ್' ಬಗ್ಗೆ ವೀಕ್ಷಕರಿಗೆ ಮನದಟ್ಟು ಮಾಡಿಕೊಟ್ಟ ಅಮೀರ್ ಖಾನ್, ''ನಾನು ದೆಹಲಿಗೆ ಬಂದಾಗಲೆಲ್ಲ ಉಪಯೋಗಿಸು ವುದು ಸಖಾದ ವರ ಟಾಕ್ಸಿ ಸೇವೆಯನ್ನೇ,'' ಎಂದಿದ್ದರು. ಆ ಮಾತನ್ನು ಉಳಿಸಿಕೊಂಡು ಬಂದಿದ್ದಾರೆ. ಸಖಾದ ವಿಶೇಷತೆ ಏನು? ಮಹಿಳೆಯರು ಒಂಟಿ ಯಾಗಿ ಓಡಾಡಲು ಹೆದರಿಕೊಳ್ಳ ಬೇಕಾಗಿರುವ ದೆಹಲಿಯ ವಾತಾ ವರಣ ದಲ್ಲಿ, ದೇಶದಲ್ಲೇ ಪ್ರಥಮ ಬಾರಿಗೆ ಮಹಿಳೆಯರಿ ಗಾಗಿಯೆ ಮಹಿಳೆಯರೇ ನಡೆಸುವ ಟಾಕ್ಸಿ ಸೇವೆ ಸಖಾ. ಇದನ್ನು ಶುರು ಮಾಡಿದವರು ಸಾಮಾಜಿಕ ಕಾಳಜಿಯುಳ್ಳ ಉದ್ಯಮಿ ಮೀನು ವಡೇರಾ. ನಡೆ ನುಡಿಯಲ್ಲಿ ಬಹಳ ಸರಳ. ವ್ಯಕ್ತಿತ್ವ ಕೂಡ ಸಾಮಾನ್ಯ ರಂತೆ ಕಂಡುಬಂದರೂ, ಸಖಾದ ಸ್ಥಾಪಕಿ ಮೀನು ವಡೇರಾ ಅವರ ಕಥೆ ಅದ್ಭುತ ಯಶಸ್ಸಿನದು. ಅವರ ನಗುಮುಖದ ಹಿಂದೆ ದಿಟ್ಟ ಸಂಕಲ್ಪವಿದೆ. ಕೆಲವು ದಿನಗಳ ಹಿಂದಷ್ಟೇ ನಾನು ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದೆ. ಅವರು ನಡೆದು ಬಂದ ದಾರಿ, ಸ್ಥಾಪಿಸಿರುವ ಸಂಸ್ಥೆ , ಇದಕ್ಕೆ ಬೇಕಾದ ಸಹಕಾರ, ಜನರ ಮನ್ನಣೆ ಪಡೆಯಲು ಪಡಬೇ...

ನೆಲದಡಿಯ ಅಣೆಕಟ್ಟು

Image
ನೆಕಾರಟ್ ನದಿ ಪಾತ್ರದಲ್ಲೇ ಕಟ್ಟಿದ ‘ಶೈಜಾಫ್ ಡ್ಯಾಂ’ ಪಕ್ಷಿನೋಟ ದಕ್ಷಿಣ ಇಸ್ರೇಲಿನ ‘ಅರವಾ ಮರುಭೂಮಿ’ಯಲ್ಲಿ ಕರೆದೊಯ್ಯುತ್ತಿದ್ದ ಸಹಕಾರ ಕೃಷಿ ಸಮಿತಿ ಮುಖ್ಯಸ್ಥ ಶಮಿ ಬರ್ಕಾನ್ ‘ಪಕ್ಕದಲ್ಲಿ ಕಾಣಿಸುತ್ತಿರುವುದು ಶೈಜಾಫ್ ಡ್ಯಾಂ’ ಎಂದು ತೋರಿಸಿದರು. ಅತ್ತ ಕಡೆ ನೋಡಿದಾಗ ಎಕರೆಗಟ್ಟಲೇ ವಿಸ್ತೀರ್ಣದಲ್ಲಿ ಟಾರ್ಪಾಲಿನ್ (ತಾಡಪತ್ರೆ) ಹಾಕಿದ್ದು ಬಿಟ್ಟರೆ ಬೇರಾವ ಅಣೆಕಟ್ಟು ಕಾಣಿಸಲಿಲ್ಲ. ಸ್ವಲ್ಪ ಸಮಯದಲ್ಲಿ ವಾಹನ ಮಣ್ಣಿನ ದಿಬ್ಬವೊಂದನ್ನು ಏರಿ, ಬೆಟ್ಟದ ತುದಿಯಲ್ಲಿ ನಿಂತಿತು. ಇಳಿದು ಕೆಳಗೆ ನೋಡಿದಾಗಲೂ ಟಾರ್ಪಾಲಿನ್ ಹಾಸಿದ ಪ್ರದೇಶ ಹೊರತುಪಡಿಸಿದರೆ ಬೇರಾವ ಜಲಾಶಯವೂ ಗೋಚರಿಸಲಿಲ್ಲ. ‘ಶೈಜಾಫ್ ಡ್ಯಾಂ’ ಎಂದು ಶಮಿ ಬರ್ಕಾನ್ ಅದರತ್ತಲೇ ಬೊಟ್ಟು ಮಾಡಿ ತೋರಿಸಿದರು. ಇದು ನೀರನ್ನು ಸಂಗ್ರಹಿಸಿಟ್ಟುಕೊಂಡ ಜಲಾಶಯ ಎಂದಾಗಲಷ್ಟೇ ಅದರ ಸ್ವರೂಪ ಗೊತ್ತಾಯಿತು. ಅಣೆಕಟ್ಟು ಎಂದರೆ ನದಿಗೆ ಅಡ್ಡಲಾಗಿ ಕಟ್ಟಿದ ಎತ್ತರದ ಗೋಡೆ ಎಂಬ ಭಾವನೆ ಮೂಡುತ್ತದೆ. ಆದರೆ ಇದು ನದಿಪಾತ್ರದೊಳಗಿನ ಅಣೆಕಟ್ಟು. ಎತ್ತರವಲ್ಲ; ಆಳ ಇರುವಂಥದು! ನೆಲದಲ್ಲೇ ಆಳವಾಗಿ ಈ ಅಣೆಕಟ್ಟು ನಿರ್ಮಿಸಿದ ಕಾರಣ? ಮತ್ತದೇ ನೀರಿನ ಕೊರತೆ. ಇಸ್ರೇಲಿನ ಉತ್ತರ ಭಾಗದ ಜನವಸತಿ ಪ್ರದೇಶಗಳು ಸಮುದ್ರದಿಂದ ತೆಗೆದು ಸಂಸ್ಕರಿಸಿದ ಅಥವಾ ‘ಗೆಲಿಲೀ’ ಸರೋವರದ ನೀರನ್ನು ಪಡೆಯುತ್ತವೆ. ಇದನ್ನು ಬಳಸಿದ ಬಳಿಕ ಸಂಸ್ಕರಿಸಿ, ಆ ಭಾಗದ ಕೃಷಿಗೆ ಬಳಸುತ್ತಾರೆ. ಆದರೆ ದಕ್ಷಿಣದ (...

ಹೆಂಗಸರೇಕೆ ಗಂಡನಿಗೆ ಮೋಸ ಮಾಡ್ತಾರೆ?

Image
ಹೆಂಡತಿಯರು ಮೋಸ ಮಾಡಲು 5 ಕಾರಣಗಳು, ಟಾಪ್ 10 ಸೀಕ್ರೆಟ್ ಅದು ಕೋರ್ಟ್ ರೂಂ. ಕಟಕಟೆಯಲ್ಲಿ ನಿಂತವಳು 32 ವರ್ಷದ ಮಹಿಳೆ. ಬೆಂಗಳೂರಿನಲ್ಲಿ ನಾಲ್ಕೈದು ವರ್ಷದ ಹಿಂದೆ ನಡೆದ ಡೈವೊರ್ಸ್ ಕೇಸಿನ ವಿಚಾರಣೆಯಿದು. ಗಂಡನ ಪರ ವಕೀಲರು ಆಕೆಗೆ ಕೇಳುತ್ತಾರೆ. 'ನೀವು ಬೇರೆ ಗಂಡಸಿನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಹೌದಾ?' 'ಹೌದು' ಆಕೆ ಧೈರ್ಯವಾಗಿ ಒಪ್ಪಿಕೊಳ್ಳುತ್ತಾಳೆ. 'ಯಾಕೆ ಗಂಡನಿಗೆ ಮೋಸ ಮಾಡಿದಿರಿ?' 'ಯಾಕಂದ್ರೆ ಅವರು ಯಾವಾಗ್ಲೂ ಆಫೀಸ್ ಕೆಲಸದಲ್ಲಿ ಬ್ಯುಸಿಯಾಗಿರ್ತಿದ್ರು. ಮನೆಯಲ್ಲಿ ನನಗೆ ಒಬ್ಬಳಿಗೇ ಬೋರ್ ಆಗ್ತಿತ್ತು!' ನ್ಯಾಯಾಧೀಶರೂ ಸೇರಿದಂತೆ ಇಡೀ ಕೋರ್ಟ್ ಹಾಲ್ ದಂಗಾಗಿತ್ತು. ಗಂಡನಿಗೆ ಮೋಸ ಮಾಡಲು ಇದೂ ಒಂದು ಕಾರಣವಾ? ಆಗಿರಬಹುದು. ಏಕೆಂದರೆ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಅವಳನ್ನು ಸೃಷ್ಟಿಸಿದ ಬ್ರಹ್ಮನಿಗೂ ಸಾಧ್ಯವಾಗಿಲ್ಲವಂತೆ. ಇನ್ನು ನರಮನುಷ್ಯನಿಗೆ ಸಾಧ್ಯವೇ? ಆ ಕೇಸನ್ನು ಸಾಮಾನ್ಯವಾಗಿ ಎಲ್ಲಾ ಡೈವೊರ್ಸ್ ಪ್ರಕರಣಗಳಲ್ಲೂ ಮಾಡುವಂತೆ ಫ್ಯಾಮಿಲಿ ಕೋರ್ಟ್‌ಗೆ ವರ್ಗಾಯಿಸಲಾಯಿತು. ಅಲ್ಲಿ ಗಂಡ-ಹೆಂಡತಿ ಒಂದಾಗಿ ಬಾಳಲು ಆರು ತಿಂಗಳು ಟೈಮ್ ಕೊಟ್ಟು ನೋಡಲಾಯಿತು. ಅವರಿಬ್ಬರೂ ಒಂದಾಗಲಿಲ್ಲ. ನಂತರ ಡೈವೊರ್ಸ್ ಮಂಜೂರಾಯಿತು. ಯಾವಾಗಲೂ ಆಫೀಸ್ ಕೆಲಸದಲ್ಲಿ ಬ್ಯುಸಿಯಾಗಿ ಹೆಂಡತಿಯನ್ನು 'ಚೆನ್ನಾಗಿ ನೋಡಿಕೊಳ್ಳದ ತಪ್ಪಿಗೆ' ಗಂಡ ...