Posts

Showing posts from March, 2014

ಕಾಮದ ಗಾಡಿ ಓಡದು ಏಕೆ?

Image
ಒಂದು ಡಜನ್ ಕಾರಣಗಳು ನೀವು ಅಥವಾ ನಿಮ್ಮ ಸಂಗಾತಿ ಕಾಮಾಸಕ್ತಿಯನ್ನು ಕಳೆದುಕೊಳ್ಳುತ್ತಿದ್ದೀರಾ? ಹಲವಾರು ಬಗೆಯ ಮಾನಸಿಕ ಮತ್ತು ದೈಹಿಕ ಅಂಶಗಳು ಕಾಮದ ಮೇಲೆ ಪರಿಣಾಮ ಬೀರುತ್ತವೆ. ಕಾಮವನ್ನು ತೀರಾ ಕಡಿಮೆ ಮಾಡುವ ಈ ಕೆಲವು ಅಂಶಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತಿವೆಯಾ ನೋಡಿ. 1. ಕಾಮದ ಗಾಡಿ ಓಡದು: ಒತ್ತಡ ನೀವು ಅನೇಕ ಕೆಲಸಗಳನ್ನು ಒತ್ತಡದಲ್ಲಿ ನಿಭಾಯಿಸುವ ಶಕ್ತಿ ಉಳ್ಳವರಾಗಿರಬಹುದು. ಆದರೆ ಒತ್ತಡದಲ್ಲಿ ಕಾಮ ಒತ್ತರಿಸಿ ಬರುತ್ತದೆ ಎನ್ನುವ ಹಾಗೆ ಯಾರಿಗೂ ಆಗದು. ಕೆಲಸದ ಒತ್ತಡ, ಹಣದ ಸಮಸ್ಯೆ, ಮನೆಯಲ್ಲಿರುವ ಅನಾರೋಗ್ಯದವರ ಆರೈಕೆ-ಇತ್ಯಾದಿ ಒತ್ತಡಗಳು ನಿಮ್ಮ ಕಾಮವನ್ನು ಕಡಿಮೆ ಮಾಡಿಬಿಡುತ್ತವೆ. ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಕೆಲವು ತಂತ್ರಗಳನ್ನು ನಿಮ್ಮ ವೈದ್ಯರಿಂದ ಅಥವಾ ಯೋಗಾಸನದ ಶಿಕ್ಷಕರಿಂದ ಪಡೆಯಿರಿ. 2. ಕಾಮದ ಗಾಡಿ ಓಡದು: ಸಂಬಂಧಗಳ ಸಮಸ್ಯೆ ಭಾವನಾತ್ಮಕವಾಗಿ ಹತ್ತಿರವಾಗಿರಬೇಕೆಂದು ಹೆಣ್ಣು ಬಯಸುವಳು. ಅರ್ಥವಿಲ್ಲದ ವಾಗ್ವಾದ, ಕೆಟ್ಟ ಸಂವಹನ, ನಂಬಿಕೆಯ ದ್ರೋಹ ಮತ್ತಿತರ ಅಡೆತಡೆಗಳು ಪ್ರೇಮಕ್ಕೆ ಅಡ್ಡಗೋಡೆಯಾಗಿಬಿಡುತ್ತವೆ. 3. ಕಾಮದ ಗಾಡಿ ಓಡದು: ಆಲ್ಕೋಹಾಲ್ ಯಾವಾಗಲೂ ನಿಮ್ಮನ್ನು 'ಮೂಡ್‌'ಗೆ ತಂದಿಡೋದಿಲ್ಲ! ಹೆಚ್ಚೆಂದರೆ ಕಾಮದ ಬಗ್ಗೆ ಸ್ವಲ್ಪ 'ನಾಚಿಕೆ' ಕಡಿಮೆ ಮಾಡಿ, ಸ್ವಲ್ಪ ಧೈರ್ಯ ಹೆಚ್ಚಿಸಬಹುದಷ್ಟೇ. ಆದರೆ ನಿಮ್ಮ ಕಾಮದ ಆಸಕ್ತಿಯನ್...

ಅಂದು ಮತ ಹಾಕುವ ಮುನ್ನ ಇವನ್ನೆಲ್ಲ ಯೋಚಿಸಿ!

Image
ಚುನಾವಣೆ ಘೋಷಣೆಯಾಗಿದೆ. ನಾವು ಇದನ್ನು 'ಮಹಾಯುದ್ಧ' ಎಂದು ಕರೆದಿದ್ದೇವೆ. ಇದಕ್ಕಿಂತ ಪ್ರಬಲವಾದ, ಎಲ್ಲರಿಗೂ ಅರ್ಥವಾಗುವ ಪದವಿದ್ದಿದ್ದರೆ, ಆ ಹೊತ್ತಿನಲ್ಲಿ ಹೊಳೆದಿದ್ದರೆ ಅದನ್ನೇ ಇಡುತ್ತಿದೆ. World war ಗೆ ನಾವು ಮಹಾಯುದ್ಧ ಎಂದು ಕರೆದಿದ್ದೇವೆ. ಭಾರತದಲ್ಲಿನ ಚುನಾವಣೆ ಅಂದ್ರೆ ಯಾವ ದೃಷ್ಟಿಯಿಂದಲೂ ಅದಕ್ಕಿಂತ ಕಡಿಮೆ ಇರುವುದಿಲ್ಲ. ಇದನ್ನು mother of all battles ಅಂತಾನೂ ಕರೆಯುವುದುಂಟು. ಅದೂ ಸಹ ನಿಜ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಇದರ ವಿರಾಟದರ್ಶನ ವಿಶ್ವಕ್ಕೆ ಮತ್ತೊಮ್ಮೆ ಗೊತ್ತಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು, ಆ ಪಕ್ಷಗಳ ನೇತಾರರು, ಹುರಿಯಾಳುಗಳು, ಕಾರ್ಯಕರ್ತರು ತೆರೆಮರೆಯಲ್ಲಿ ಈ ಹೋರಾಟಕ್ಕೆ ಮೌನವಾಗಿ ಸಜ್ಜಾಗುತ್ತಿದ್ದಾರೆ. ಈ ದೇಶ ಕಂಡು ಕೇಳರಿಯದ ಮತ್ತೊಂದು ಮಹಾಯುದ್ಧಕ್ಕೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ. ಹಾಗಾದರೆ ಈ ಚುನಾವಣೆಯಲ್ಲಿ ನನ್ನ ಪಾತ್ರವೇನು, ನಾನು ಏನು ಮಾಡಬೇಕು, ನನ್ನ ಮುಂದಿರುವ ಸವಾಲುಗಳೇನು, ಆಯ್ಕೆಯೇನು, ಹೊಸ ಸರ್ಕಾರ ರಚನೆಯಲ್ಲಿ ನಾನು ಹೇಗೆ ತೊಡಗಿಸಿಕೊಳ್ಳಬೇಕು. ಈ ಎಲ್ಲ ಪ್ರಶ್ನೆಗಳೂ ನಮ್ಮೆಲ್ಲರ ಮುಂದೆ ಮೂಡಲಾರಂಭಿಸಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ನಾವೆಲ್ಲ ಈ ಚುನಾವಣೆ ಸುಳಿಯಲ್ಲಿ ಸಿಲುಕಿ ತಿರುಗುತ್ತಿರುವ ಈ ಸಂದರ್ಭದಲ್ಲಿ ಇತ್ತೀಚೆಗೆ ನಾನು 'ಫಾರ್ಚೂನ್‌' ಮ್ಯಾಗಜಿನ್‌ನ ಹಿರಿಯ ಸಂಪಾದಕ ಹಿಂದೋಲ್ ಸೇನಗುಪ್ತಾ...

ಡೀಮ್ಡ್‌ ವಿಶ್ವವಿದ್ಯಾಲಯಗಳ ಹಗರಣ ಸೀಟು ಕಬಳಿಸಿದ ಆಡಳಿತ ಮಂಡಸೀಟು ಕಬಳಿಸಿದ ಆಡಳಿತ ಮಂಡಳಿ

Image
ಬೆಂಗಳೂರು: ರಾಜ್ಯದ 9 ಡೀಮ್ಡ್ ವೈದ್ಯ­ಕೀಯ ವಿಶ್ವವಿದ್ಯಾಲಯಗಳು ಒಟ್ಟು 1042 ಸೀಟುಗಳನ್ನು ಸರ್ಕಾರಕ್ಕೆ ನೀಡದೇ ಇರುವ ಪ್ರಕರಣ ಬೆಳಕಿಗೆ ಬಂದಿದೆ. ಕಾಲೇಜು ಆರಂಭಿಸಲು ನಿರಾ­ಕ್ಷೇಪಣಾ ಪತ್ರ ನೀಡುವಾಗ ಶೇ 25ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾಗೆ ಮೀಸ­ಲಿಡಬೇಕು ಎಂಬ ಷರತ್ತು ವಿಧಿಸ­ಲಾಗಿದೆ. ಸರ್ಕಾರದೊಂದಿಗೆ ಒಪ್ಪಂದ ಮಾಡಿ­ಕೊಳ್ಳು­ವಾಗಲೂ ಇದನ್ನು ಸ್ಪಷ್ಟ­ವಾಗಿ ಹೇಳಲಾಗಿದೆ. 2010ರ ಜೂನ್‌ 26ರಂದು ಆದೇಶ ಹೊರಡಿಸಲಾಗಿದೆ.   ಇಷ್ಟಾದರೂ ಈ ಡೀಮ್ಡ್   ವಿಶ್ವ­ವಿದ್ಯಾಲಯಗಳು ಆದೇಶವನ್ನು ಪಾಲಿಸಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. ಸರ್ಕಾರಿ ಕೋಟಾದಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗ­ಬೇಕಾದ ಸೀಟುಗಳನ್ನು ಆಡಳಿತ ಮಂಡಳಿ ಕೋಟಾ ಮೂಲಕ ಕೋಟಿಗಟ್ಟಲೆ ರೂಪಾ­ಯಿಗೆ ಮಾರಾಟ ಮಾಡಿರು­ವುದು ಹಲವು ವರ್ಷಗಳಿಂದ ನಡೆದು ಬಂದಿದೆ ಎಂದು ಅವರು ವಿವರಿಸಿದರು. ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು ಅಲ್ಪಸಂಖ್ಯಾತರಿಗೆ ಸೀಟುಗಳನ್ನು ನೀಡದೆ ಇರುವ ಪ್ರಕರಣ ಬೆಳಕಿಗೆ ಬಂದ ಬೆನ್ನಿಗೇ, ಡೀಮ್ಡ್‌ ವಿಶ್ವವಿದ್ಯಾಲಯಗಳ ಈ ಅಕ್ರಮ  ಬಯಲಾಗಿದೆ. ಕೆ.ಎಸ್‌.ಹೆಗ್ಡೆ ಮೆಡಿಕಲ್‌ ಅಕಾಡೆಮಿ, ಯನಪೋಯ, ಜೆಎಸ್ಎಸ್, ಕಸ್ತೂರ­ಬಾ, ನಿಟ್ಟೆ ವಿಶ್ವವಿದ್ಯಾಲಯ ಶೇ 25ರ ಬದಲು ಶೇ 3ರಿಂದ 4ರಷ್ಟು ಸೀಟು­ಗಳನ್ನು ಮಾತ್ರ ನೀಡಿವೆ.  ಬಿಎಲ್‌ಡಿಇ, ಜೆಎಸ್‌ಎಸ್‌ ವೈದ್ಯ­ಕೀಯ ಕಾಲೇಜ...

ಕಾಸರಕೋಡ್ ಇಕೋ ಬೀಚ್,ಪೊನ್ಮುಡಿ

Image
    ದಣಿದ ಮನಸ್ಸಿಗೊಂದು ವಿಶ್ರಾಂತಿಯ ತಾಣ * ಬಳಕೂರು ವಿ. ಎಸ್ ನಾಯಕ್ ಧರೆಯ ಸೌಂದರ್ಯದ ಮುಕುಟಮಣಿಯಾಗಿ ಮೇಳೈಸಿರುವ ಜಿಲ್ಲೆಯೇ ಉತ್ತರ ಕನ್ನಡ ಒಂದು ಕಾಲದಲ್ಲಿ ಚೆನ್ನಾಬೈರಾದೇವಿ ಆಡಳಿತದ ಸಂದರ್ಭ ಹೊನ್ನಾವರವು ಹೆಚ್ಚಾಗಿ ಕಾಳು ಮೆಣಸನ್ನು ರಫ್ತು ಮಾಡುವ ಪ್ರಮುಖ ಸ್ಥಳವಾಗಿದೆ. ಸರ್ವಧರ್ಮ ಸಮನ್ವಯತೆಗೆ ಒಂದು ಉದಾಹರಣೆಯಾಗಿತ್ತು. ಶಾಂತಿ ಮಂತ್ರವನ್ನು ಉಪದೇಶಿಸುತ್ತಾ ಬಂದ ಜೈನರ ನೆಲೆವೀಡು ಇದಾಗಿತ್ತು. ಇಂದಿನ ಸಂಸ್ಕೃತಿ ಆಧುನಿಕತೆಯ ಭರಾಟೆಯೊಂದಿಗೆ ಸತ್ವ ಕಳೆದುಕೊಂಡರೂ ಹೊನ್ನಾವರವು ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಮೀನುಗಾರಿಕೆಯು ಮುಖ್ಯ ಉದ್ಯೋಗವಾಗಿದ್ದು ಕೃಷಿ ಆಧಾರಿತ ಕುಟುಂಬಗಳು ಇಲ್ಲಿ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಾಣಬಹುದು. ಚೌಪದಿ ಬ್ರಹ್ಮ ದಿನಕರ ದೇಸಾಯಿ ಅವರು ಈ ಜಿಲ್ಲೆಯನ್ನು ಈ ರೀತಿಯಾಗಿ ಹಾಡಿ ಹೊಗಳಿದ್ದಾರೆ. 'ಒಂದು ಬದಿ ಸಹ್ಯಾದ್ರಿ ಇನ್ನೊಂದು ಬದಿ ಕಡಲು/ ನಡುಮಧ್ಯದಲ್ಲಿ ಅಡಿಕೆ ತೆಂಗುಗಳ ಮಡಲು /ಸಿರಿಗನ್ನಡದ ಚಪ್ಪರವೇ ನನ್ನ ಈ ಜಿಲ್ಲೆ /ಇನ್ನೊಮ್ಮೆ ಇಲ್ಲಿ ಹುಟ್ಟಿ ಬರುವೇ ನಾ ಅಲ್ಲೆ' ಎಂದು ಹೇಳಿದ್ದು ಅವರ ಅಭಿಮಾನಕ್ಕೆ ಸಾಕ್ಷಿ. ಸದಾ ನಗುಮುಖದವರು ಜ್ಞಾನಿಗಳು, ಸಹೃದಯರು ತುಂಬಿರುವ ಈ ಜಿಲ್ಲೆಯಲ್ಲಿ ಸೊಬಗಿದೆ ಸೌಂದರ್ಯವಿದೆ. ಅದೇ ಕಾಸರಕೋಡು ಇಕೋ ಬೀಚ್ ಎಂದರೆ ಅತಿಶೋಯಕ್ತಿಯಲ್ಲ . ಹೀಗಿದೆ ಹೊನ್ನಾವರ ಹೊನ್ನಾವರದ ಮೊದಲ ಹೆಸರು ಹೊನ್ನಪುರಿ ನ...