Posts

Showing posts from April, 2013

ಮಾಂದಾಲಪಟ್ಟಿ ಬೆಟ್ಟ,ಏಲಗಿರಿ,ತಡಿಯಂಡ ಮೋಳ್

Image
ನಿಸರ್ಗದ ನೈಜ ಸೌಂದರ್ಯದ ಆಸ್ವಾದನೆಗೆ ಇಲ್ಲಿದೆ ಮಾಂದಾಲಪಟ್ಟಿ ಬೆಟ್ಟ * ಸುಖೇಶ್ ಪಡಿಬಾಗಿಲು ಗಾಳಿಪಟ ಚಿತ್ರವೂ ಭಟ್ಟರ ಯಶಸ್ಸಿನ ಚಿತ್ರಗಳ ಹಲವುಗಳಲ್ಲಿ ಒಂದು. ಈ ಚಿತ್ರದಲ್ಲಿ ಗಾಳಿಪಟ ಸೌಂದರ್ಯವನ್ನು ಮೆಚ್ಚಿದಷ್ಟೇ.. ಈ ಚಿತ್ರದಲ್ಲಿನ ಕೆಲವು ದೃಶ್ಯಗಳನ್ನು ಸಿನಿ ಪ್ರೇಕ್ಷಕರು ಮೆಚ್ಚಿದ್ದಾರೆ. ಮನಮೋಹಕ ಪ್ರಕೃತಿ ಸೌಂದರ್ಯವನ್ನು ಹೊಂದಿರು ಈ ಜಾಗವನ್ನು ತಾವೆಂದು ನೋಡಿಲ್ಲ ಎಂದು ಸಾಕಷ್ಟು ಪ್ರವಾಸಿ ಪ್ರಿಯರು ಹೇಳಿದ್ದೂ ಉಂಟು. ಬೆಟ್ಟಗುಡ್ಡಗಳ ಹಿನ್ನೆಲೆಯುಳ್ಳ ಅಂತಹ ಅದ್ಭುತ ಲೊಕೇಶನ್ ಅನ್ನು ಚಿತ್ರತಂಡ ಹುಡುಕಿತ್ತು. ಹೀಗಾಗಿ ಚಿತ್ರದ ಯಶಸ್ಸಿಗೆ ಕಥೆ, ನಿರ್ದೇಶನ, ಪಾತ್ರಧಾರಿಗಳಷ್ಟೇ ಈ ಬೆಟ್ಟ, ಗುಡ್ಡವೂ ಕಾರಣವಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಇಷ್ಟೆಲ್ಲ ಪೀಠಿಕೆಗೆ ಪ್ರವಾಸಿ ತಾಣದ ಪರಿಚಯ ಮಾಡುವುದೇ ಉದ್ದೇಶ. ಹೌದು. ಗಾಳಿಪಟ ಚಿತ್ರವು ತಯಾರಿಸಿರುವ ಈ ಬೆಟ್ಟಗುಡ್ಡಗಳ ತಪ್ಪಲು ಕೊಡಗಿನ ಒಂದು ಪ್ರವಾಸಿ ಕೇಂದ್ರ. ಅಷ್ಟು ಹೆಸರವಾಸಿಯಾಗದಿದ್ದರೂ, ಪ್ರಕೃತಿ ಪ್ರಿಯರಿಗೆ ಬಹುಮೆಚ್ಚುಗೆಯಾದ ಪ್ರದೇಶ. ಮಡಿಕೇರಿಯಿಂದ ಕೆಲವೇ ಕಿಲೋಮೀಟರ್‌ಗಳ ದೂರದಲ್ಲಿ ಇರುವ ಈ ಪ್ರದೇಶಕ್ಕೆ ಸಾಕಷ್ಟು ಪ್ರವಾಸಿಗ ಭೇಟಿ ಕೊಟ್ಟು ತಮ್ಮ ಮನತಣಿಸಿಕೊಳ್ಳುತ್ತಾರೆ. ಅದುವೇ ಮಾಂದಾಲಪಟ್ಟಿ. ಸಿನಿಮಾದಲ್ಲಿ ಮುಗಿಲಪೇಟೆ ಎನ್ನುವ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿತ್ತು. ಆದರೆ, ನಿಜವಾದ ಹೆಸರು ಮಾಂದಾಲಪಟಿ. ಕೊಡುಗು ಜ...

ಆರಂಬೋಲ,ಮಥೆರಾನ್‌

Image
ಬೆಳ್ಳಗೆ ಕಡಲತೀರವನ್ನು ಅಪ್ಪಳಿಸುವ  ಅಲೆಗಳಿಗೆ ಅಬ್ಬರವಿಲ್ಲ. ಕಂಡಷ್ಟು ದೂರ ಮರಿಚೀಕೆ ಸೃಷ್ಟಿಸುವ ಧಾವಂತ  ಮರಳ ಹರಳಿಗಿಲ್ಲ. ತಂಗಾಳಿಗೆ ಬಿಸಿಲಿಗೂ ಬೇಲಿಯಾಗುವ ಬಯಕೆ. ಸಾಗರದ  ಉಪ್ಪಿಗೂ ಸಿಹಿಯಾಗುವ ಕನಸು. ಇದು ಕೇವಲ ಕಲ್ಪನೆಯಲ್ಲ, ಕನಸಿನ ಮಾತೂ ಇಲ್ಲ. ವಾಸ್ತವವೇ ಹಾಗಿದೆ. ಬರೀ ಉಪ್ಪು ಅನ್ನುವ ಸಮುದ್ರದಲ್ಲೂ ಸಿಹಿನೀರಿದೆ. ಮರಳಗುಡ್ಡೆಯ ಮೇಲೂ ಹಸಿರಿನ ಗಿರಿ ಇದೆ. ಇಂತಹದ್ದೊಂದು ಕಡಲ ಕಿನಾರೆಯ ಹೆಸರು ಆರಂಬೋಲ. ಇದು ಪಣಜಿಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ. ಇದು ಗೋವಾದ ಇತರೇ ಬೀಚ್‌ಗಳಿಗಿಂತ ಡಿಫರೆಂಟ್. ಉತ್ತರ ಗೋವಾದಲ್ಲಿರುವ ಇದು ಪ್ರಾಚೀನ ಮತ್ತು ಏಕಾಂತ ಬೀಚ್ ಅಂದೆನಿಸಿದೆ. ಗೇರು ಮರಗಳ ನಡುವೆ ಅಂಕುಡೊಂಕಾದ ರಸ್ತೆ ಮೂಲಕ ಸಂಚರಿಸುವಾಗ ಪ್ರಕೃತಿ ಸೌಂದರ‌್ಯ ಆಸ್ವಾದನೆಯಲ್ಲಿ ನೀವು ಮುಳುಗಿ ಹೋಗುತ್ತೀರ. ಸಮುದ್ರದ ಸುತ್ತಲೂ ಹಸಿರು ಗಿಡಗಳಿಂದ ಮುಚ್ಚಿದ ಗುಡ್ಡ, ನೂರಾರು ವರ್ಷಗಳಿಂದ ನೀರಿನ ನಡುವೆ ಇರುವ ಬೃಹತ್ ಕಲ್ಲಿನ ಬಂಡೆಗಳು ಸಮುದ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಇದು ಕಲ್ಲು ಹಾಗೂ ಮರಳಿನಿಂದ ತುಂಬಿದ ಬೀಚ್ ಅಂದೆನಿಸಿಕೊಂಡಿದೆ. ಒಟ್ಟಾರೆ ನೀರು, ನಿಸರ್ಗದ ನಡುವೆ ಆರಾಮವಾಗಿ ಕಾಲ ಕಳೆಯುವ ತಾಣವಿದು. ಸಿಹಿ ನೀರಿನ ಸರೋವರ ಗೋವಾದ ಉತ್ತರಕ್ಕೆ ಕಲಂಗುಟ ಮತ್ತು ಭಾಗಾ ತೀರಗಳ ಆಚೇಗೆ ಆರಂಬೋಲ ಕಡಲ ತೀರ ನಿಮ್ಮನ್ನು ಸೆಳೆಯುತ್ತದೆ. ಶಾಂತಿ...

ಸೊಗಸಾದ ಸೂರ್ಯೋದಯ

Image
 ಶ್ರೀದೇವಿ ಅಂಬೆಕಲ್ಲು ಸೂರ್ಯೋದಯದ ಹೊಂಬಣ್ಣದ ಬೆಡಗು ಅಂಥದ್ದು. ಕ್ಷಣಕ್ಷಣ ಬದಲಾಗುವ ಸೂರ್ಯನ ಸ್ಥಾನ ಮತ್ತು ಬದಲಾಗುವ ಸೂರ್ಯೋದಯದ ಹೊಂಗಿರಣ ಕಣ್ಣಿಗೆ ಹಬ್ಬ. ಸುಂದರ ಸೂರ್ಯಾಸ್ತಗಳು ಕವಿ ಮನಸ್ಸನ್ನು ತೆರೆಯುತ್ತದೆ. ಅಂತಹ ಪ್ರಕೃತಿ ಕೊಡುಗೆಯನ್ನು ಇಲ್ಲೆಲ್ಲಾ ಕಣ್ತುಂಬಿಕೊಳ್ಳಬಹುದು. 1. ತಾಜ್‌ಮಹಲ್ ವಿಶ್ವದ ಎಂಟು ಅದ್ಭುತಗಳಲ್ಲಿ ಒಂದು. ಷಹಜಾನ್ ನಿರ್ಮಿಸಿದ ತಾಜ್‌ಮಹಲ್‌ನಿಂದ ಸುಂದರ ಸೂರ್ಯೋದಯವನ್ನು ನೋಡಬಹುದು. ಸೂರ್ಯನ ಬಳಕು ಅಮೃತಶಿಲೆಯಿಂದ ನಿರ್ಮಿಸಿದ ತಾಜ್‌ಮಹಲ್ ಮೇಲೆ ಬಿದ್ದಾಗ ತಾಜ್ ಮಹಲ್ ಮಿರಮಿರನೆ ಮಿನುಗುತ್ತದೆ. ತಾಜ್‌ಮಹಲ್‌ನಿಂದ ಗಂಗಾನದಿಯ ದಡದಲ್ಲಿ ಒಂದು ವಾಕ್ ಹೋಗುತ್ತಾ ಅಲ್ಲಿನ ನಯನಮನೋಹರ ದೃಶ್ಯವನ್ನು ಮನದಲ್ಲಿ ಸೆರೆಯಾಗಿಸಿಕೊಳ್ಳಬಹುದು. ಅಂತಹ ಅದ್ಭುತ ಚಿತ್ರಣವದು. 2. ನಗರಕೋಟ್ ನೇಪಾಳ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನಿಂದ ಸೂರ್ಯೋದಯವನ್ನು ನೋಡಬಹುದು. ನೇಪಾಳದ ಲ್ಯಾಂಗ್‌ಟನ್ ವಲಯ ಸುಂದರ ಸೂರ್ಯೋದಯಕ್ಕೆ ಪ್ರಸಿದ್ಧಿ. 3. ಲಂಡನ್‌ನ ಥೇಮ್ಸ್ ನದಿ ಲಂಡನ್‌ಗೆ ಭೇಟಿ ಕೊಟ್ಟಾಗ ಥೇಮ್ಸ್ ನದಿಯ ತಟದಲ್ಲಿ ಬೆಳ್ಳಂ ಬೆಳಗ್ಗೆ ವಾಕ್ ಹೋಗಿ ಬನ್ನಿ. ಅಲ್ಲಿನ ಸೂರ್ಯೋದಯದ ಮಹಿಮೆಯಲ್ಲಿ ಕಳೆದುಹೋಗುತ್ತೀರಿ. ಥೇಮ್ಸ್ ನದಿಗೆ ಕಟ್ಟಲಾಗಿರುವ ವಾಟರ್‌ಲೂ ಬ್ರಿಡ್ಜ್ ಮೇಲೆ ವಾಕ್ ಮಾಡುತ್ತಾ ಎಂಜಾಯ್ ಮಾಡಬಹುದು. 4. ಚೀನಾದ ಮಹಾಗೋಡೆ ಚೀನಾದ ಮಹಾಗೋಡೆಯ ಮೇಲೆ ನಿಂತು ಸೂರ್ಯೋದಯದ ಅದ್...

ಸಿರಿಮನೆ ಫಾಲ್ಸ್,ಕಪ್ಪಡಿಯ ಗದ್ದುಗೆ,ಹೊನ್ನೆಮರಡು

Image
ಸುಮಾರು 80 ಅಡಿ ಮೇಲಿನಿಂದ ಬಂಡೆಗಳ ಮಧ್ಯೆ ಬಳುಕುತ್ತಾ ಮಿಂಚಿನ ಬಳ್ಳಿಯಂತೆ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ನಿಲ್ಲುವುದೆಂದರೆ ಅದೊಂದು ಅನಿರ್ವಚನೀಯ ಅನುಭವ. ಮಳೆಗಾಲದಲ್ಲಂತೂ ಇದರ ಅಕ್ಕಪಕ್ಕದಲ್ಲಿ ಸೃಷ್ಟಿಯಾಗುವ ಅನೇಕ ತೊರೆಗಳು ಈ ಜಲಪಾತದ ಸೊಬಗನ್ನು ಮತ್ತಷ್ಟು ಇಮ್ಮಡಿಗೊಳಿಸಿಬಿಡುತ್ತವೆ. ಶೃಂಗೇರಿಯಿಂದ ಕೇವಲ 15 ಕಿ.ಮೀ. ದೂರದ ಕಿಗ್ಗಾದಲ್ಲಿದೆ ಸಿರಿಮನೆ ಜಲಪಾತ. ಪುಟ್ಟ ಜಲಪಾತವಾದರೂ ಇದರ ವೈಯಾರಕ್ಕೆ ಮನಸೋಲದವರಿಲ್ಲ. ಜೊತೆಗೆ ಸಾಹಸಿಗರಿಗೆ ತನ್ನನ್ನು ಮೇಲ್ಮುಖವಾಗಿ ಹತ್ತಲು ಅಹ್ವಾನವನ್ನೂ ನೀಡುತ್ತದೆ. ಸಿರಿಮನೆ ಎಂಬುದು ಒಂದು ಮನೆತನದ ಹೆಸರು. ಜಲಪಾತದ ಸಮೀಪವೇ ಸಿರಿಮನೆ ಮನೆತನಕ್ಕೆ ಸಂಬಂಧಿಸಿದ ಕೆಲವು ಮನೆಗಳಿವೆ. ಹಾಗಾಗಿ, ಈ ಜಲಪಾತಕ್ಕೆ 'ಸಿರಿಮನೆ' ಅಂತಲೇ ಹೆಸರು. ಅರಣ್ಯ ಇಲಾಖೆ ಗ್ರಾಮ ಅರಣ್ಯ ಸಮಿತಿ ಮೂಲಕ ಜಲಪಾತ ನಿರ್ವಹಣೆ ಮಾಡುತ್ತಿದೆ. ಎಲ್ಲ ದಿನಗಳಲ್ಲಿ ಇಲ್ಲಿಗೆ ಭೇಟಿ ನಿಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಜಲಪಾತದ ಬುಡದವರೆಗೂ ಮೆಟ್ಟಿಲು ನಿರ್ಮಾಣ ಮತ್ತು ಪ್ರವಾಸಿಗರಿಗೆ ಇತರ ಅಗತ್ಯ ಸೌಲಭ್ಯ ಕಲ್ಪಿಸಿಕೊಟ್ಟಿರುವುದು ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಲು ಕಾರಣಗಳಲ್ಲೊಂದು. ಚಾರಣಪ್ರಿಯರ ಸ್ವರ್ಗ ಈ ಸಿರಿಮನೆ ಜಲಪಾತ ಮತ್ತು ಇಲ್ಲಿನ ಪರಿಸರ. ಇಲ್ಲಿಗೆ ಬಂದರೆ ಮಗೆಬೈಲು ಜಲಪಾತ, ಕಿಗ್ಗಾದ ಪ್ರಸಿದ್ಧ ಮತ್ತು ಕಾರಣಿಕದ ಋಷ್ಯಶೃಂಗೇಶ್ವರ ದೇವಾಲಯ ನೋಡಬಹುದು. ಸಿರಿಮನೆ ಜಲಪಾತದಿಂ...

ದಕ್ಷಿಣ ಕಾಶಿ ಮಹಾಕೂಟ,ಕಿಗ್ಗ ಎಂಬ ಸಗ್ಗದ ಸಿರಿ,ಜಮಾಲಾಬಾದ್ ಕಮಾಲ್ ನೋಡಿ

Image
* ಮಹೇಶ ಬಿ.ನರೇಗಲ್ಲ, ಬಾಗಲಕೋಟ ಭಾರತದ ದಕ್ಷಿಣ ಕಾಶಿಯಂದೇ ಪ್ರಸಿದ್ಧವಾಗಿರುವ ಈ ಕ್ಷೇತ್ರ ಬಾದಾಮಿಯಿಂದ 14ಕಿಮೀ ದೂರ ಕ್ರಮಿಸಿದರೆ 'ಮಹಾಕೂಟ' ಸಿಗುತ್ತದೆ. ಪ್ರಾಚೀನ ದೇವಾಲಯಗಳ ಕೂಟವೇ 'ಮಹಾಕೂಟ'. ಇಲ್ಲಿ ನಿರ್ಮಿತವಾದ ಸುಂದರ, ಹಸಿರಿನಿಂದ ಕೂಡಿದ ಬೆಟ್ಟಗಳ ಮಧ್ಯೆ ಗುಡಿಗಳ ಗುಂಪು ಇದೆ. ಜಲ ಹಾಗೂ ವನಸಿರಿಗಳಿಂದ ಕೂಡಿದ ಈ ಕ್ಷೇತ್ರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಾನಾ ದೇವರಗಳು ಒಂದೇ ಆವರಣದಲ್ಲಿ ಮೇಳೈಸಿದ್ದು, ಆವರಣದಾಚೆಗೂ ಒಂದೆರಡು ಗುಡಿಗಳಿವೆ. ಹಸಿರು ಹಾಗೂ ಬೆಟ್ಟಗಳ ಮಧ್ಯೆ ಇರುವ ಮಹಾಕೂಟ ಈ ಭಾಗದ ಜನರಿಗೆ 'ದಕ್ಷಿಣ ಕಾಶಿ'ಯಾಗಿದೆ. ಐತಿಹ್ಯ ಕೋಟಿ ಲಿಂಗಗಳಾಗಲು ಒಂದೇ ಒಂದು ಲಿಂಗ ಕಡಿಮೆಯಾದ ಕಾರಣ ಈ ಕ್ಷೇತ್ರ 'ಕಾಶಿ'ಯಾಗುವ ಅವಕಾಶ ಕಳೆದುಕೊಂಡಿತು ಎಂದು ಹೇಳಲಾಗುತ್ತಿದೆ. ನಾನಾ ಲಿಂಗಗಳ ಕೂಟವಾದ ಇದು 'ಮಹಾಕೂಟ' ಎಂದು ಕರೆಯಲ್ಪಡುತ್ತದೆ. ಇಲ್ಲಿನ ಕಲ್ಯಾಣಿ 'ವಿಷ್ಣು ಪುಷ್ಕರಣಿ' ಎಂದು ಹೆಸರುವಾಸಿಯಾಗಿದೆ. ಶಿವ, ವಿಷ್ಣು, ಗೌರಿ, ಸರಸ್ವತಿ, ವೀರಭದ್ರ, ಇನ್ನಿತರ ದೇವತೆಗಳ ಅಪೂರ್ವ ಶಿಲ್ಪಕಲೆ ನೋಡುಗರನ್ನು ಮೂಕವಿಸ್ಮಯ ಮಾಡುವಂತಿದೆ. ಹೆಸರು ಬಂದಿದ್ದು ಹೀಗೆ... ಮಂಗಲೇಶನ ಶಾಸನವೊಂದು ಇಲ್ಲಿಯ ದೇವರನ್ನು ಮಕುಟೇಶ್ವರನಾಥ ಎಂದು ಹೇಳಲಾಗುತ್ತದೆ. ಅದೇ 'ಮಹಾಕುಟೇಶ್ವರ' ಕ್ರಮೇಣ 'ಮಾಕೂಟೇಶ್ವರ'ನಾಗಿ ನಂತರ ...

ಬನ್ನಿ, ಬದಲಾವಣೆಯ ಕಾಲ ಇದೆನ್ನಿ

Image
ಮತ್ತೆ ಚುನಾವಣೆ ಬಂದಿದೆ. ಆಕರ್ಷಣೆ ಕೇಂದ್ರ ಬಿಂದುವಾಗಿರುವ ಜನಸಾಮಾನ್ಯ ಇನ್ನೊಮ್ಮೆ `ಕೊಡುವವನ' ಪಾತ್ರ ನಿರ್ವಹಿಸಲು ಸಜ್ಜಾಗುತ್ತಿದ್ದಾನೆ. ಕೊಡುವುದನ್ನು ಕೊಡಲೇಬೇಕು; ಆದರೆ ಅದಕ್ಕೆ ಮುನ್ನ ಅತ್ಯಂತ ಜಾಗರೂಕನಾಗಿ, ವಿಶ್ಲೇಷಣಾತ್ಮಕವಾಗಿ, ಪ್ರಜ್ಞಾಪೂರ್ವಕವಾಗಿ ಮತ್ತು ಪ್ರಶ್ನೆಗಳನ್ನು ಒಡ್ಡುವ ಮೂಲಕ `ಕೊಡುವ' ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಹೀಗೆ ಅವನು ಈಗ ಕೊಡುವ ಮತ, ಕರ್ನಾಟಕದ ಮುಂದಿನ ಐದು ವರ್ಷಗಳ ಹಣೆಬರಹವನ್ನಷ್ಟೇ ನಿರ್ಧರಿಸುವುದಿಲ್ಲ; ಇನ್ನೂ ಹೆಚ್ಚು ಕಾಲ ರಾಜ್ಯದ ಸ್ಥಿತಿಗತಿಯ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯಕ್ಕೆ ಏನು ಬೇಕೋ ಅದೆಲ್ಲವನ್ನೂ ಮಾಡಿ ಮುಗಿಸಲು ಐದು ವರ್ಷ ಸಾಕಾಗದೇ ಇರಬಹುದು; ಆದರೆ ಅಲ್ಪಸ್ವಲ್ಪವಾದರೂ ನಾವು ಹೆಮ್ಮೆ ಪಟ್ಟುಕೊಳ್ಳುವಂತಹುದು ಏನಿದೆಯೋ ಅದೆಲ್ಲವನ್ನೂ ಹಾಳು ಮಾಡಿ ಮುಗಿಸಲು ನಿರ್ಲಜ್ಜರಿಗೆ ಇಷ್ಟು ಸಮಯ ಸಾಕು ಎಂಬುದನ್ನು ಜನ ಮರೆಯಬಾರದು. ಕಳೆದ ಕೆಲ ವಾರಗಳಿಂದ ನಾನು ವಿವಿಧ ಕ್ಷೇತ್ರಗಳ ಹಲವಾರು ಜನರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ. ಇವರಲ್ಲಿ ಹಲವರು ಈಗಷ್ಟೇ 18 ವರ್ಷ ತುಂಬಿದ ವಿದ್ಯಾರ್ಥಿಗಳಾಗಿದ್ದು, ಇತ್ತೀಚೆಗೆ ಮತದಾನದ ಹಕ್ಕು ಪಡೆದಿದ್ದಾರೆ. ರಾಜಕಾರಣಿಗಳ ಬಗ್ಗೆ ಹತಾಶ ಮನೋಭಾವ ಹೊಂದಿರುವ ಬಹುತೇಕರು, ಇದೇ ಕಾರಣವನ್ನು ಮುಂದಿಟ್ಟು ಮುಂಬರುವ ಚುನಾವಣೆಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ. ಅವರೆಲ್ಲ ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದ...