ಸಿರಿಮನೆ ಫಾಲ್ಸ್,ಕಪ್ಪಡಿಯ ಗದ್ದುಗೆ,ಹೊನ್ನೆಮರಡು
ಸುಮಾರು 80 ಅಡಿ ಮೇಲಿನಿಂದ ಬಂಡೆಗಳ ಮಧ್ಯೆ ಬಳುಕುತ್ತಾ ಮಿಂಚಿನ ಬಳ್ಳಿಯಂತೆ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ನಿಲ್ಲುವುದೆಂದರೆ ಅದೊಂದು ಅನಿರ್ವಚನೀಯ ಅನುಭವ. ಮಳೆಗಾಲದಲ್ಲಂತೂ ಇದರ ಅಕ್ಕಪಕ್ಕದಲ್ಲಿ ಸೃಷ್ಟಿಯಾಗುವ ಅನೇಕ ತೊರೆಗಳು ಈ ಜಲಪಾತದ ಸೊಬಗನ್ನು ಮತ್ತಷ್ಟು ಇಮ್ಮಡಿಗೊಳಿಸಿಬಿಡುತ್ತವೆ.
ಶೃಂಗೇರಿಯಿಂದ ಕೇವಲ 15 ಕಿ.ಮೀ. ದೂರದ ಕಿಗ್ಗಾದಲ್ಲಿದೆ ಸಿರಿಮನೆ ಜಲಪಾತ. ಪುಟ್ಟ ಜಲಪಾತವಾದರೂ ಇದರ ವೈಯಾರಕ್ಕೆ ಮನಸೋಲದವರಿಲ್ಲ. ಜೊತೆಗೆ ಸಾಹಸಿಗರಿಗೆ ತನ್ನನ್ನು ಮೇಲ್ಮುಖವಾಗಿ ಹತ್ತಲು ಅಹ್ವಾನವನ್ನೂ ನೀಡುತ್ತದೆ.
ಸಿರಿಮನೆ ಎಂಬುದು ಒಂದು ಮನೆತನದ ಹೆಸರು. ಜಲಪಾತದ ಸಮೀಪವೇ ಸಿರಿಮನೆ ಮನೆತನಕ್ಕೆ ಸಂಬಂಧಿಸಿದ ಕೆಲವು ಮನೆಗಳಿವೆ. ಹಾಗಾಗಿ, ಈ ಜಲಪಾತಕ್ಕೆ 'ಸಿರಿಮನೆ' ಅಂತಲೇ ಹೆಸರು. ಅರಣ್ಯ ಇಲಾಖೆ ಗ್ರಾಮ ಅರಣ್ಯ ಸಮಿತಿ ಮೂಲಕ ಜಲಪಾತ ನಿರ್ವಹಣೆ ಮಾಡುತ್ತಿದೆ. ಎಲ್ಲ ದಿನಗಳಲ್ಲಿ ಇಲ್ಲಿಗೆ ಭೇಟಿ ನಿಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಜಲಪಾತದ ಬುಡದವರೆಗೂ ಮೆಟ್ಟಿಲು ನಿರ್ಮಾಣ ಮತ್ತು ಪ್ರವಾಸಿಗರಿಗೆ ಇತರ ಅಗತ್ಯ ಸೌಲಭ್ಯ ಕಲ್ಪಿಸಿಕೊಟ್ಟಿರುವುದು ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಲು ಕಾರಣಗಳಲ್ಲೊಂದು. ಚಾರಣಪ್ರಿಯರ ಸ್ವರ್ಗ ಈ ಸಿರಿಮನೆ ಜಲಪಾತ ಮತ್ತು ಇಲ್ಲಿನ ಪರಿಸರ.
ಇಲ್ಲಿಗೆ ಬಂದರೆ ಮಗೆಬೈಲು ಜಲಪಾತ, ಕಿಗ್ಗಾದ ಪ್ರಸಿದ್ಧ ಮತ್ತು ಕಾರಣಿಕದ ಋಷ್ಯಶೃಂಗೇಶ್ವರ ದೇವಾಲಯ ನೋಡಬಹುದು. ಸಿರಿಮನೆ ಜಲಪಾತದಿಂದ ಅನತಿ ದೂರದಲ್ಲಿರುವ ಇನೊಂದು ಅಜ್ಞಾತ ಜಲಪಾತವೇ ಮಗೆಬೈಲು.
ಎಚ್ಚರ ವಹಿಸಿ
ಸಿರಿಮನೆ ಪುಟ್ಟ ಜಲಪಾತ. ಇಲ್ಲಿ ಎಷ್ಟು ಉಲ್ಲಾಸವಿದೆಯೋ ಅಷ್ಟೇ ಅಪಾಯವೂ ಇದೆ. ಪಾಚಿ ಕಟ್ಟಿರುವ ಕಲ್ಲುಗಳ ಮೇಲೆ ಕಾಲಿಟ್ಟರೆ ಬಿದ್ದು ಮೈ ಮೂಳೆ ಮುರಿಯುವುದು ಖಚಿತ. ಜೊತೆಗೆ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ನಿರ್ಮಲ ನೀರನ್ನು ಮಲಿನಗೊಳಿಸುತ್ತಿದ್ದಾರೆ. ಒಡೆದ ಗಾಜಿನ ಬಾಟಲಿಗಳ ಚೂರುಗಳು ಚಿಣ್ಣರ ಚಿನ್ನಾಟಕ್ಕೆ ಸಂಚಕಾರ ನೀಡುತ್ತಿವೆ. ಕಸ ಹಾಕಬೇಡಿ ಎಂಬ ನಾಮಫಲಗಳಿಗೆ ಪ್ರವಾಸಿಗರು ಬೆಲೆಕೊಡದೆ ಹೋಗುತ್ತಿದ್ದಾರೆ. ಪ್ರವಾಸ ಕೈಗೊಳ್ಳುವ ಮುನ್ನ ಈ ವಿಷಯಗಳ ಬಗ್ಗೆ ಗಮನಹರಿಸಿ.
ಸಿರಿಮನೆಯವರೆಗೂ ಉತ್ತಮ ಡಾಂಬರು ರಸ್ತೆ ಇದೆ. ಆದರೂ, ಕಿಗ್ಗಾದವರೆಗೆ ಮಾತ್ರ ಬಸ್ ಸೌಕರ್ಯವಿದೆ. ಖಾಸಗಿ ವಾಹನ, ಬಾಡಿಗೆ ಆಟೋ ಇದ್ದಲ್ಲಿ ಕಿಗ್ಗಾದಿಂದ 7 ಕಿ.ಮೀ. ದೂರಕ್ಕೆ ಹೋಗಿ ಜಲಪಾತದ ಸೌಂದರ್ಯ ನೋಡಬಹುದು. ಕಿಗ್ಗಾ ನಂತರ ಕಾಲ್ನಡಿಗೆಯಲ್ಲಿ ಸಾಗುವುದು ಮಜಾ. ಉತ್ತಮ ಕಾಲ್ದಾರಿ, ಹಸಿರು ಪರಿಸರ ಇರುವುದರಿಂದ ಜಲಪಾತ ತಲುಪುವುದೇ ತಿಳಿಯುವುದಿಲ್ಲ. ಆಯಾಸ ಕರಗಿಸಿ ಬಿಡುವ ಶಕ್ತಿ ಸಿರಿಮನೆ ಫಾಲ್ಸ್ ಪರಿಸರಕ್ಕಿದೆ.
ಸ್ವರೂಪಾನಂದ ಎಂ. ಕೊಟ್ಟೂರು
ಕಪ್ಪಡಿಯ ಗದ್ದುಗೆ

ಕಪ್ಪಡಿ ಎಂದಾಕ್ಷಣ ನೆನಪಿಗೆ ಬರುವುದು ಹನ್ನೆರಡನೆ ಶತಮಾನದ ಶರಣರ ನೇತಾರ ಮಹಾಮಾನವತಾವಾದಿ ಬಸವಣ್ಣನವರ ಕಪ್ಪಡಿ ಸಂಗಮ. ಮೈಸೂರು ಜಿಲ್ಲೆಯ ಎಡತೊರೆಯಿಂದ (ಈಗಿನ ಕೆ.ಆರ್.ನಗರದಿಂದ) ಚುಂಚನಕಟ್ಟೆಗೆ ಹೋಗುವ ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ. ದೂರ ಕ್ರಮಿಸಿದರೆ ಹೆಬ್ಬಾಳು ಎಂಬ ಊರು ಸಿಗುತ್ತದೆ. ಆ ಊರಿನ ಎದುರು ಭಾಗದ ರಸ್ತೆಯಲ್ಲಿ ಮೂರು ಕಿ.ಮೀ.ದೂರ ಕ್ರಮಿಸಿದರೆ ಮಂಟೇಸ್ವಾಮಿಯವರ ಶಿಷ್ಯರಾದ ರಾಚಪ್ಪಾಜಿ ಹಾಗೂ ತಂಗಿ ಚನ್ನಮ್ಮಾಜಿಯವರು ನೆಲೆಯಾದ ಗದ್ದುಗೆ ಇದೆ.
ಕಾವೇರಿ ನದಿ ದಂಡೆಯಲ್ಲಿರುವ ಈ ಕ್ಷೇತ್ರದಲ್ಲೆಗ ಜಾತ್ರೆಯ ಸಂಭ್ರಮ. ಪ್ರತಿ ಶಿವರಾತ್ರಿಯಿಂದ ಯುಗಾದಿಯವರೆಗೆ ವಿಶೇಷ ಪೂಜೆಗಳು ನೆರವೇರುತ್ತದೆ. ಈ ಕ್ಷೇತ್ರದ ಸುತ್ತಲೂ ಗದ್ದೆ ಬಯಲು ಹೊಂದಿಕೊಂಡಂತೆ ಹಚ್ಚ ಹಸಿರಿನ ತೋಪುಗಳಿಂದ ಆವರಿಸಿದೆ. ನಿತ್ಯ ನಿರ್ಮಲ ಸೊಬಗಿನ ಆಗರವಾದ ಪ್ರಶಾಂತ ವಾತಾವರಣದಲ್ಲಿನ ಪರಮ ಪವಿತ್ರ ತಪೋಭೂಮಿ.
ಆ ದಿವ್ಯ ನೆಲೆ ಶರಣ ರಾಚಪ್ಪಾಜಿಯವರು ಕೊನೆಯ ದಿನಗಳನ್ನು ಕಳೆದ ಕ್ಷೇತ್ರ. ರಾಚಪ್ಪಾಜಿ ಚನ್ನಮ್ಮನವರ ಗದ್ದುಗೆಯ ಹಿಂದೆ ಉರಿ ಗದ್ದುಗೆಯಿದೆ, ಇದರಿಂದ ಕೆಳಗೆ ಹರಳಯ್ಯನ ಪಾದಗಳಿವೆ. ಒಂದು ತಿಂಗಳು ದೀರ್ಘವಾಗಿ ನಡೆಯುವ ಈ ಜಾತ್ರೆಯನ್ನು ಮಂಟೇಸ್ವಾಮಿ ಸಂಪ್ರದಾಯದ ಅರಸು ಸಂತತಿಯಲ್ಲಿ ಬಂದ ಪ್ರಭುದೇವರಾಜ ಅರಸಿನವರು ಒಂದು ವರ್ಷ ನಡೆಸಿದರೆ, ಅದರ ಮುಂದಿನ ವರ್ಷ ಸರದಿಯಂತೆ ಜ್ಞಾನಪ್ರಕಾಶ ರಾಜೇಅರಸಿನವರು ನಡೆಸಿಕೊಂಡು ಬರುತ್ತಿದ್ದಾರೆ.
ಲಕ್ಷಾಂತರ ಭಕ್ತರನ್ನು ತನ್ನೆಡೆಗೆ ಸೆಳೆದುಕೊಂಡ ರಾಚಪ್ಪಾಜಿಯವರು ನೀಲಗಾರರ ನೆಚ್ಚಿನ ಗುರು ಭಕ್ತಜನ ಕಲ್ಪತರು. ಮಳವಳ್ಳಿ ಮತ್ತು ಬೊಪ್ಪಗೌಡನಪುರದ ಅರಸು ಮನೆತನದವರೇ ಜಾತ್ರೆ ನಡೆಸಿಕೊಂಡು ಬರುತ್ತಾರೆ. ಮಂಟೇಸ್ವಾಮಿ ಸಂಪ್ರದಾಯದ ಮಠಗಳೆಲ್ಲವೂ ಅರಸು ಮನೆತನದವರ ಅಧೀನದಲ್ಲಿದೆ. ಜಾತ್ರೆಯ ಸಂದರ್ಭದಲ್ಲಿ ಮೈಸೂರು ಪ್ರಾಂತ್ಯದ ಸಾವಿರಾರು ಭಕ್ತರು ನಿತ್ಯ ಕ್ಷೇತ್ರದ ಕಾವೇರಿ ನದಿಯಲ್ಲಿ ಮಿಂದು ಭಕ್ತಿ ಗೌರವದಿಂದ ನಡೆದುಕೊಳ್ಳುತ್ತಾರೆ. ಗುರುಗಳು ಉರಿ ಗದ್ದುಗೆಯಲ್ಲಿ ಕುಳಿತಾಗ ಭಕ್ತರು ಉಂಡೆಕಾಯನ್ನು ಕಾಣಿಕೆಯಾಗಿ ನೀಡುತ್ತಾರೆ.
ತೇ.ಸಿ.ವಿಶ್ವೇಶ್ವರಯ್ಯ
ಹೊನ್ನೆಮರದಿಂದಾದ 'ಹೊನ್ನೆಮರಡು'
ಹೊನ್ನೆಮರಡು ಬೆಟ್ಟದ ಮೇಲಿನ ಪುಟ್ಟ ಹಳ್ಳಿ. ಶರಾವತಿ ನದಿಗೆ ಆಣೆಕಟ್ಟು ನಿರ್ಮಿಸಿರುವದರಿಂದಾಗಿರುವ ಜಲಾಶಯ.
ಹೊನ್ನೆಮರಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ 25 ಕಿಮೀ ದೂರದಲ್ಲಿದೆ. ಶರಾವತಿ ನದಿಯ ಹಿನ್ನೀರಿನ ಪ್ರದೇಶ. ಹೊನ್ನೆಮರಡು ನಿಸರ್ಗದ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ವರ್ಷಪೂರ್ತಿ ಭೇಟಿ ನೀಡುತ್ತಾರೆ. ಹತ್ತಿರದಲ್ಲೆ ಜೋಗ
ಜಲಪಾತ, ಕುಪ್ಪಳ್ಳಿ, ಕವಿಶೈಲ, ಗದೆಮನೆಯಂತಹ ಹಲವಾರು ಆಕರ್ಷಣೀಯ ತಾಣಗಳಿವೆ. ಮಾತ್ರವಲ್ಲ ಇದು ಪಕ್ಷಿಪ್ರಿಯರ ಸ್ವರ್ಗವೂ ಹೌದು. ಇಲ್ಲಿ ಬಣ್ಣಬಣ್ಣದ ಚಿಟ್ಟೆಗಳು, ಹಲವು ವಿಧದ ಪಕ್ಷಿಗಳನ್ನು ವೀಕ್ಷಿಸಬಹುದು. ಹೊನ್ನೆಮರದಿಂದಾಗಿ ಇಲ್ಲಿಗೆ 'ಹೊನ್ನೆಮರಡು' ಎಂಬ ಹೆಸರು ಬಂದಿದೆ.
ಹಚ್ಚ ಹಸಿರಿನಿಂದ ಕೂಡಿದ ಅರಣ್ಯದಲ್ಲಿ ಅಹ್ಲಾದಕರ ವಾತಾವರಣ, ಪರಿಶುದ್ಧ ಗಾಳಿಯಲ್ಲಿ ಮಿಂದೆದ್ದು ಬರಬಹುದು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಖುಷಿ ಪಡಬಹುದು. ಶರಾವತಿ ನದಿಗೆ 1965ರಲ್ಲಿ ಆಣೆಕಟ್ಟು ಕಟ್ಟಲಾಗಿದೆ. ಇದು ವಾಟರ್ ಸ್ಪೋರ್ಟ್ಸ್ಗೆ ಫೇಮಸ್. ಇಲ್ಲಿ ನೀರಿನಾಟ,ವಿಂಡ್ ಸರ್ಫಿಂಗ್, ರಿವರ್ ರಾಫ್ಟಿಂಗ್ ಮಾಡಬಹುದು.
ಇಲ್ಲಿ ಸಾಹಸಿ ಕ್ರೀಡೆಗಳನ್ನು ಕೈಗೊಳ್ಳಬಹುದು. ಮಾತ್ರವಲ್ಲ, ಇಲ್ಲಿನ ಹತ್ತಿರದ ಸ್ಥಳಗಳಲ್ಲಿ ಟ್ರೆಕ್ಕಿಂಗ್ ಕೈಗೊಳ್ಳಬಹುದು, ಐತಿಹಾಡಸಿಕ ಸ್ಥಳ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಜಗತ್ಪ್ರಸಿದ್ಧ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.
ಹತ್ತಿರದ ಆಕರ್ಷಣೆಗಳು
ಇದರ ಹೊರತಾಗಿ ಜೋಗ ಜಲಪಾತದ ಹತ್ತಿರದಲ್ಲಿ ತುಂಗಾ ಹಳೆ ಆಣೆಕಟ್ಟು, ಕಾನೂರು ಕೋಟೆ, ಸೇಂಟ್ ಥೋಮಸ್ ಚರ್ಚ್, ಸಕ್ರೆಬೈಲು ಎಲೆಫೆಂಟ್ ಕ್ಯಾಂಪ್, ಕೆಳದಿ ರಾಮೇಶ್ವರ ದೇವಸ್ಥಾನ, ಲಿಂಗನಮಕ್ಕಿ ಜಲಾಶಯ, ಶಿವಪ್ಪ ನಾಯಕ ಅರಮನೆ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಂರಕ್ಷಿತ ಅರಣ್ಯ,.
ಜೋಗ್ ಜಲಪಾತ
ಇದು ಏಷ್ಯಾದ ಐದನೇ ಅತಿ ಎತ್ತರದ ಜಲಪಾತ. ಕರ್ನಾಟಕ ಪಶ್ಚಿಮದಲ್ಲಿರುವ ಪ್ರಾಕೃತಿಕ ಸೌಂದರ್ಯದ ನಡುವೆ ಜೋಗ ಜಲಪಾತದ ರೋಮಾಂಚಕಾರಿ ದೃಶ್ಯ ಅದ್ಭುತ. ಇದು ಶಿವಮೊಗ್ಗದಿಂದ 105ಕಿಮೀ ದೂರದಲ್ಲಿದೆ. ತಲಗುಪ್ಪದಿಂದ 16ಕಿಮೀ ದೂರದಲ್ಲಿದೆ.
ಕವಿಶೈಲ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿದೆ. ಕವಿಮನೆಯಲ್ಲಿ ಕುವೆಂಪು ಬರೆದ ಪುಸ್ತಕಗಳು, ಬಳಸಿದ ವಸ್ತುಗಳ ಸಂಗ್ರಹವಿದೆ.
ತುಂಗಾ ಹಳೆ ಡ್ಯಾಂ
ಶಿವಮೊಗ್ಗದಿಂದ 12ಕಿಮೀ ದೂರದಲ್ಲಿದೆ. ಇದು ಪ್ರಮುಖ ಪಿಕ್ನಿಕ್ ತಾಣವೂ ಹೌದು. ಇದರ ಸುತ್ತಲೂ ಹಸಿರು ಹಸಿರಾದ ಭತ್ತದ ಗದ್ದೆ, ಅಡಕೆ ತೋಟಗಳಿವೆ. ಬಾಬಾಬುಡನ್ ಗಿರಿಯ ಶ್ರೇಣಿಯ ವಿಹಂಗಮ ನೋಟವನ್ನು ನೋಡಬಹುದು.
ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಿಂಹಧಾಮ
ಇದು ತುಂಗಾ ಡ್ಯಾಂ ಹತ್ತಿರದಲ್ಲಿದೆ. ಇಲ್ಲಿ ಅಪರೂಪದ ಹುಲಿ ಮತ್ತು ಸಿಂಹಗಳನ್ನು ನೋಡಬಹುದು.
ಲಿಂಗನಮಕ್ಕಿ ಜಲಾಶಯ
ಜೋಗ್ ಫಾಲ್ಸ್ನಿಂದ 6 ಕಿಮೀ ದೂರದಲ್ಲಿದೆ. ಮಹಾತ್ಮಾ ಗಾಂಧಿ ಹೈಡ್ರೋ ಇಲೆಕ್ಟ್ರಿಕ್ ಪವರ್ ಯೂನಿಟ್ನ್ನು ಒಳಗೊಂಡಿದೆ.
ಧಾರ್ಮಿಕ ಕೇಂದ್ರಗಳು
ರಾಮೇಶ್ವರ ದೇವಸ್ಥಾನ ಮತ್ತು ಸೇಂಟ್ ಥೋಮಸ್ ಚರ್ಚ್ ಇರುವುದು ಇಲ್ಲಿಯೇ. ದೇವಸ್ಥಾನವು ಹೊಯ್ಸಳ-ದ್ರಾವಿಡರ ಕಾಲದ ವಾಸ್ತುಶಿಲ್ಪವನ್ನು ಕಾಣಬಹುದು. ಚರ್ಚ್ ಹದಿನೆಂಟು ಸಾವಿರ ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದ್ದು ಐದು ಸಾವಿರ ಜನ ಒಮ್ಮೆಗೆ ಚರ್ಚ್ ಒಳಗೆ ಸೇರಬಹುದು.
ಕಾನೂರ್ ಫೋರ್ಟ್
ಭಟ್ಕಳದ ಮಾರ್ಗವಾಗಿ ಜೋಗ್ ಫಾಲ್ಸ್ಗೆ ಹೋಗುವ ದಾರಿಯಲ್ಲಿ ಕಾನೂರು ಕೋಟೆ ಸಿಗುತ್ತದೆ. ಕೆಳದಿ ರಾಜವಂಶದ ಕರಿ ಮಾನಿಸೇನ ಅಬ್ಬಕ್ಕ ರಾಣಿ ಕಾಲದಲ್ಲಿ ಇದನ್ನು ನಿರ್ಮಿಸಲಾಯಿತು.
ಸಕ್ರೆಬೈಲು ಆನೆ ಕ್ಯಾಂಪ್: ಶಿವಮೊಗ್ಗದಿಂದ 14 ಕಿಮೀ ದೂರದಲ್ಲಿದೆ.
ಹೋಗೋದು ಹೇಗೆ?
ಹೊನ್ನೆಮರಡು ಬೆಂಗಳೂರಿನಿಂದ 370ಕಿಮೀ ದೂರದಲ್ಲಿದೆ. ಹೊನ್ನೆಮರಡುಗೆ ಉತ್ತಮ ರಸ್ತೆ ಸಂಪರ್ಕವಿದೆ. ಮೊದಲು ಶಿವಮೊಗ್ಗದ ತಲಗುಪ್ಪ ತಲುಪಿ ಅಲ್ಲಿಂದ ಟ್ರೆಕ್ಕಿಂಗ್ ಕೈಗೊಳ್ಳಬಹುದು ಅಥವಾ ಜೀಪ್ ಮೂಲಕ ಹೊನ್ನೆಮರಡು ತಲುಪಬಹುದು.
ಹತ್ತಿರದ ಏರ್ಫೋರ್ಟ್: ಮಂಗಳೂರು
ಹತ್ತಿರದ ರೈಲು ನಿಲ್ದಾಣ: ಸಾಗರ, ಶಿವಮೊಗ್ಗ. ಅಲ್ಲದೇ ಸಾಕಷ್ಟು ಖಾಸಗಿ, ಸರ್ಕಾರಿ ಬಸ್ ಸೌಲಭ್ಯವಿದೆ.
* ಶ್ರೀಕಾಂತ ಎ.
ಸ್ವರೂಪಾನಂದ ಎಂ. ಕೊಟ್ಟೂರು
ಕಪ್ಪಡಿಯ ಗದ್ದುಗೆ
ಕಪ್ಪಡಿ ಎಂದಾಕ್ಷಣ ನೆನಪಿಗೆ ಬರುವುದು ಹನ್ನೆರಡನೆ ಶತಮಾನದ ಶರಣರ ನೇತಾರ ಮಹಾಮಾನವತಾವಾದಿ ಬಸವಣ್ಣನವರ ಕಪ್ಪಡಿ ಸಂಗಮ. ಮೈಸೂರು ಜಿಲ್ಲೆಯ ಎಡತೊರೆಯಿಂದ (ಈಗಿನ ಕೆ.ಆರ್.ನಗರದಿಂದ) ಚುಂಚನಕಟ್ಟೆಗೆ ಹೋಗುವ ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ. ದೂರ ಕ್ರಮಿಸಿದರೆ ಹೆಬ್ಬಾಳು ಎಂಬ ಊರು ಸಿಗುತ್ತದೆ. ಆ ಊರಿನ ಎದುರು ಭಾಗದ ರಸ್ತೆಯಲ್ಲಿ ಮೂರು ಕಿ.ಮೀ.ದೂರ ಕ್ರಮಿಸಿದರೆ ಮಂಟೇಸ್ವಾಮಿಯವರ ಶಿಷ್ಯರಾದ ರಾಚಪ್ಪಾಜಿ ಹಾಗೂ ತಂಗಿ ಚನ್ನಮ್ಮಾಜಿಯವರು ನೆಲೆಯಾದ ಗದ್ದುಗೆ ಇದೆ.
ಕಾವೇರಿ ನದಿ ದಂಡೆಯಲ್ಲಿರುವ ಈ ಕ್ಷೇತ್ರದಲ್ಲೆಗ ಜಾತ್ರೆಯ ಸಂಭ್ರಮ. ಪ್ರತಿ ಶಿವರಾತ್ರಿಯಿಂದ ಯುಗಾದಿಯವರೆಗೆ ವಿಶೇಷ ಪೂಜೆಗಳು ನೆರವೇರುತ್ತದೆ. ಈ ಕ್ಷೇತ್ರದ ಸುತ್ತಲೂ ಗದ್ದೆ ಬಯಲು ಹೊಂದಿಕೊಂಡಂತೆ ಹಚ್ಚ ಹಸಿರಿನ ತೋಪುಗಳಿಂದ ಆವರಿಸಿದೆ. ನಿತ್ಯ ನಿರ್ಮಲ ಸೊಬಗಿನ ಆಗರವಾದ ಪ್ರಶಾಂತ ವಾತಾವರಣದಲ್ಲಿನ ಪರಮ ಪವಿತ್ರ ತಪೋಭೂಮಿ.
ಆ ದಿವ್ಯ ನೆಲೆ ಶರಣ ರಾಚಪ್ಪಾಜಿಯವರು ಕೊನೆಯ ದಿನಗಳನ್ನು ಕಳೆದ ಕ್ಷೇತ್ರ. ರಾಚಪ್ಪಾಜಿ ಚನ್ನಮ್ಮನವರ ಗದ್ದುಗೆಯ ಹಿಂದೆ ಉರಿ ಗದ್ದುಗೆಯಿದೆ, ಇದರಿಂದ ಕೆಳಗೆ ಹರಳಯ್ಯನ ಪಾದಗಳಿವೆ. ಒಂದು ತಿಂಗಳು ದೀರ್ಘವಾಗಿ ನಡೆಯುವ ಈ ಜಾತ್ರೆಯನ್ನು ಮಂಟೇಸ್ವಾಮಿ ಸಂಪ್ರದಾಯದ ಅರಸು ಸಂತತಿಯಲ್ಲಿ ಬಂದ ಪ್ರಭುದೇವರಾಜ ಅರಸಿನವರು ಒಂದು ವರ್ಷ ನಡೆಸಿದರೆ, ಅದರ ಮುಂದಿನ ವರ್ಷ ಸರದಿಯಂತೆ ಜ್ಞಾನಪ್ರಕಾಶ ರಾಜೇಅರಸಿನವರು ನಡೆಸಿಕೊಂಡು ಬರುತ್ತಿದ್ದಾರೆ.
ಲಕ್ಷಾಂತರ ಭಕ್ತರನ್ನು ತನ್ನೆಡೆಗೆ ಸೆಳೆದುಕೊಂಡ ರಾಚಪ್ಪಾಜಿಯವರು ನೀಲಗಾರರ ನೆಚ್ಚಿನ ಗುರು ಭಕ್ತಜನ ಕಲ್ಪತರು. ಮಳವಳ್ಳಿ ಮತ್ತು ಬೊಪ್ಪಗೌಡನಪುರದ ಅರಸು ಮನೆತನದವರೇ ಜಾತ್ರೆ ನಡೆಸಿಕೊಂಡು ಬರುತ್ತಾರೆ. ಮಂಟೇಸ್ವಾಮಿ ಸಂಪ್ರದಾಯದ ಮಠಗಳೆಲ್ಲವೂ ಅರಸು ಮನೆತನದವರ ಅಧೀನದಲ್ಲಿದೆ. ಜಾತ್ರೆಯ ಸಂದರ್ಭದಲ್ಲಿ ಮೈಸೂರು ಪ್ರಾಂತ್ಯದ ಸಾವಿರಾರು ಭಕ್ತರು ನಿತ್ಯ ಕ್ಷೇತ್ರದ ಕಾವೇರಿ ನದಿಯಲ್ಲಿ ಮಿಂದು ಭಕ್ತಿ ಗೌರವದಿಂದ ನಡೆದುಕೊಳ್ಳುತ್ತಾರೆ. ಗುರುಗಳು ಉರಿ ಗದ್ದುಗೆಯಲ್ಲಿ ಕುಳಿತಾಗ ಭಕ್ತರು ಉಂಡೆಕಾಯನ್ನು ಕಾಣಿಕೆಯಾಗಿ ನೀಡುತ್ತಾರೆ.
ತೇ.ಸಿ.ವಿಶ್ವೇಶ್ವರಯ್ಯ
ಹೊನ್ನೆಮರದಿಂದಾದ 'ಹೊನ್ನೆಮರಡು'
ಹೊನ್ನೆಮರಡು ಬೆಟ್ಟದ ಮೇಲಿನ ಪುಟ್ಟ ಹಳ್ಳಿ. ಶರಾವತಿ ನದಿಗೆ ಆಣೆಕಟ್ಟು ನಿರ್ಮಿಸಿರುವದರಿಂದಾಗಿರುವ ಜಲಾಶಯ.
ಹೊನ್ನೆಮರಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ 25 ಕಿಮೀ ದೂರದಲ್ಲಿದೆ. ಶರಾವತಿ ನದಿಯ ಹಿನ್ನೀರಿನ ಪ್ರದೇಶ. ಹೊನ್ನೆಮರಡು ನಿಸರ್ಗದ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ವರ್ಷಪೂರ್ತಿ ಭೇಟಿ ನೀಡುತ್ತಾರೆ. ಹತ್ತಿರದಲ್ಲೆ ಜೋಗ
ಜಲಪಾತ, ಕುಪ್ಪಳ್ಳಿ, ಕವಿಶೈಲ, ಗದೆಮನೆಯಂತಹ ಹಲವಾರು ಆಕರ್ಷಣೀಯ ತಾಣಗಳಿವೆ. ಮಾತ್ರವಲ್ಲ ಇದು ಪಕ್ಷಿಪ್ರಿಯರ ಸ್ವರ್ಗವೂ ಹೌದು. ಇಲ್ಲಿ ಬಣ್ಣಬಣ್ಣದ ಚಿಟ್ಟೆಗಳು, ಹಲವು ವಿಧದ ಪಕ್ಷಿಗಳನ್ನು ವೀಕ್ಷಿಸಬಹುದು. ಹೊನ್ನೆಮರದಿಂದಾಗಿ ಇಲ್ಲಿಗೆ 'ಹೊನ್ನೆಮರಡು' ಎಂಬ ಹೆಸರು ಬಂದಿದೆ.
ಹಚ್ಚ ಹಸಿರಿನಿಂದ ಕೂಡಿದ ಅರಣ್ಯದಲ್ಲಿ ಅಹ್ಲಾದಕರ ವಾತಾವರಣ, ಪರಿಶುದ್ಧ ಗಾಳಿಯಲ್ಲಿ ಮಿಂದೆದ್ದು ಬರಬಹುದು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಖುಷಿ ಪಡಬಹುದು. ಶರಾವತಿ ನದಿಗೆ 1965ರಲ್ಲಿ ಆಣೆಕಟ್ಟು ಕಟ್ಟಲಾಗಿದೆ. ಇದು ವಾಟರ್ ಸ್ಪೋರ್ಟ್ಸ್ಗೆ ಫೇಮಸ್. ಇಲ್ಲಿ ನೀರಿನಾಟ,ವಿಂಡ್ ಸರ್ಫಿಂಗ್, ರಿವರ್ ರಾಫ್ಟಿಂಗ್ ಮಾಡಬಹುದು.
ಇಲ್ಲಿ ಸಾಹಸಿ ಕ್ರೀಡೆಗಳನ್ನು ಕೈಗೊಳ್ಳಬಹುದು. ಮಾತ್ರವಲ್ಲ, ಇಲ್ಲಿನ ಹತ್ತಿರದ ಸ್ಥಳಗಳಲ್ಲಿ ಟ್ರೆಕ್ಕಿಂಗ್ ಕೈಗೊಳ್ಳಬಹುದು, ಐತಿಹಾಡಸಿಕ ಸ್ಥಳ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಜಗತ್ಪ್ರಸಿದ್ಧ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.
ಹತ್ತಿರದ ಆಕರ್ಷಣೆಗಳು
ಇದರ ಹೊರತಾಗಿ ಜೋಗ ಜಲಪಾತದ ಹತ್ತಿರದಲ್ಲಿ ತುಂಗಾ ಹಳೆ ಆಣೆಕಟ್ಟು, ಕಾನೂರು ಕೋಟೆ, ಸೇಂಟ್ ಥೋಮಸ್ ಚರ್ಚ್, ಸಕ್ರೆಬೈಲು ಎಲೆಫೆಂಟ್ ಕ್ಯಾಂಪ್, ಕೆಳದಿ ರಾಮೇಶ್ವರ ದೇವಸ್ಥಾನ, ಲಿಂಗನಮಕ್ಕಿ ಜಲಾಶಯ, ಶಿವಪ್ಪ ನಾಯಕ ಅರಮನೆ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಂರಕ್ಷಿತ ಅರಣ್ಯ,.
ಜೋಗ್ ಜಲಪಾತ
ಇದು ಏಷ್ಯಾದ ಐದನೇ ಅತಿ ಎತ್ತರದ ಜಲಪಾತ. ಕರ್ನಾಟಕ ಪಶ್ಚಿಮದಲ್ಲಿರುವ ಪ್ರಾಕೃತಿಕ ಸೌಂದರ್ಯದ ನಡುವೆ ಜೋಗ ಜಲಪಾತದ ರೋಮಾಂಚಕಾರಿ ದೃಶ್ಯ ಅದ್ಭುತ. ಇದು ಶಿವಮೊಗ್ಗದಿಂದ 105ಕಿಮೀ ದೂರದಲ್ಲಿದೆ. ತಲಗುಪ್ಪದಿಂದ 16ಕಿಮೀ ದೂರದಲ್ಲಿದೆ.
ಕವಿಶೈಲ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿದೆ. ಕವಿಮನೆಯಲ್ಲಿ ಕುವೆಂಪು ಬರೆದ ಪುಸ್ತಕಗಳು, ಬಳಸಿದ ವಸ್ತುಗಳ ಸಂಗ್ರಹವಿದೆ.
ತುಂಗಾ ಹಳೆ ಡ್ಯಾಂ
ಶಿವಮೊಗ್ಗದಿಂದ 12ಕಿಮೀ ದೂರದಲ್ಲಿದೆ. ಇದು ಪ್ರಮುಖ ಪಿಕ್ನಿಕ್ ತಾಣವೂ ಹೌದು. ಇದರ ಸುತ್ತಲೂ ಹಸಿರು ಹಸಿರಾದ ಭತ್ತದ ಗದ್ದೆ, ಅಡಕೆ ತೋಟಗಳಿವೆ. ಬಾಬಾಬುಡನ್ ಗಿರಿಯ ಶ್ರೇಣಿಯ ವಿಹಂಗಮ ನೋಟವನ್ನು ನೋಡಬಹುದು.
ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಿಂಹಧಾಮ
ಇದು ತುಂಗಾ ಡ್ಯಾಂ ಹತ್ತಿರದಲ್ಲಿದೆ. ಇಲ್ಲಿ ಅಪರೂಪದ ಹುಲಿ ಮತ್ತು ಸಿಂಹಗಳನ್ನು ನೋಡಬಹುದು.
ಲಿಂಗನಮಕ್ಕಿ ಜಲಾಶಯ
ಜೋಗ್ ಫಾಲ್ಸ್ನಿಂದ 6 ಕಿಮೀ ದೂರದಲ್ಲಿದೆ. ಮಹಾತ್ಮಾ ಗಾಂಧಿ ಹೈಡ್ರೋ ಇಲೆಕ್ಟ್ರಿಕ್ ಪವರ್ ಯೂನಿಟ್ನ್ನು ಒಳಗೊಂಡಿದೆ.
ಧಾರ್ಮಿಕ ಕೇಂದ್ರಗಳು
ರಾಮೇಶ್ವರ ದೇವಸ್ಥಾನ ಮತ್ತು ಸೇಂಟ್ ಥೋಮಸ್ ಚರ್ಚ್ ಇರುವುದು ಇಲ್ಲಿಯೇ. ದೇವಸ್ಥಾನವು ಹೊಯ್ಸಳ-ದ್ರಾವಿಡರ ಕಾಲದ ವಾಸ್ತುಶಿಲ್ಪವನ್ನು ಕಾಣಬಹುದು. ಚರ್ಚ್ ಹದಿನೆಂಟು ಸಾವಿರ ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದ್ದು ಐದು ಸಾವಿರ ಜನ ಒಮ್ಮೆಗೆ ಚರ್ಚ್ ಒಳಗೆ ಸೇರಬಹುದು.
ಕಾನೂರ್ ಫೋರ್ಟ್
ಭಟ್ಕಳದ ಮಾರ್ಗವಾಗಿ ಜೋಗ್ ಫಾಲ್ಸ್ಗೆ ಹೋಗುವ ದಾರಿಯಲ್ಲಿ ಕಾನೂರು ಕೋಟೆ ಸಿಗುತ್ತದೆ. ಕೆಳದಿ ರಾಜವಂಶದ ಕರಿ ಮಾನಿಸೇನ ಅಬ್ಬಕ್ಕ ರಾಣಿ ಕಾಲದಲ್ಲಿ ಇದನ್ನು ನಿರ್ಮಿಸಲಾಯಿತು.
ಸಕ್ರೆಬೈಲು ಆನೆ ಕ್ಯಾಂಪ್: ಶಿವಮೊಗ್ಗದಿಂದ 14 ಕಿಮೀ ದೂರದಲ್ಲಿದೆ.
ಹೋಗೋದು ಹೇಗೆ?
ಹೊನ್ನೆಮರಡು ಬೆಂಗಳೂರಿನಿಂದ 370ಕಿಮೀ ದೂರದಲ್ಲಿದೆ. ಹೊನ್ನೆಮರಡುಗೆ ಉತ್ತಮ ರಸ್ತೆ ಸಂಪರ್ಕವಿದೆ. ಮೊದಲು ಶಿವಮೊಗ್ಗದ ತಲಗುಪ್ಪ ತಲುಪಿ ಅಲ್ಲಿಂದ ಟ್ರೆಕ್ಕಿಂಗ್ ಕೈಗೊಳ್ಳಬಹುದು ಅಥವಾ ಜೀಪ್ ಮೂಲಕ ಹೊನ್ನೆಮರಡು ತಲುಪಬಹುದು.
ಹತ್ತಿರದ ಏರ್ಫೋರ್ಟ್: ಮಂಗಳೂರು
ಹತ್ತಿರದ ರೈಲು ನಿಲ್ದಾಣ: ಸಾಗರ, ಶಿವಮೊಗ್ಗ. ಅಲ್ಲದೇ ಸಾಕಷ್ಟು ಖಾಸಗಿ, ಸರ್ಕಾರಿ ಬಸ್ ಸೌಲಭ್ಯವಿದೆ.
ಹೊನ್ನೆಮರಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ 25 ಕಿಮೀ ದೂರದಲ್ಲಿದೆ. ಶರಾವತಿ ನದಿಯ ಹಿನ್ನೀರಿನ ಪ್ರದೇಶ. ಹೊನ್ನೆಮರಡು ನಿಸರ್ಗದ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ವರ್ಷಪೂರ್ತಿ ಭೇಟಿ ನೀಡುತ್ತಾರೆ. ಹತ್ತಿರದಲ್ಲೆ ಜೋಗ
ಜಲಪಾತ, ಕುಪ್ಪಳ್ಳಿ, ಕವಿಶೈಲ, ಗದೆಮನೆಯಂತಹ ಹಲವಾರು ಆಕರ್ಷಣೀಯ ತಾಣಗಳಿವೆ. ಮಾತ್ರವಲ್ಲ ಇದು ಪಕ್ಷಿಪ್ರಿಯರ ಸ್ವರ್ಗವೂ ಹೌದು. ಇಲ್ಲಿ ಬಣ್ಣಬಣ್ಣದ ಚಿಟ್ಟೆಗಳು, ಹಲವು ವಿಧದ ಪಕ್ಷಿಗಳನ್ನು ವೀಕ್ಷಿಸಬಹುದು. ಹೊನ್ನೆಮರದಿಂದಾಗಿ ಇಲ್ಲಿಗೆ 'ಹೊನ್ನೆಮರಡು' ಎಂಬ ಹೆಸರು ಬಂದಿದೆ.
ಹಚ್ಚ ಹಸಿರಿನಿಂದ ಕೂಡಿದ ಅರಣ್ಯದಲ್ಲಿ ಅಹ್ಲಾದಕರ ವಾತಾವರಣ, ಪರಿಶುದ್ಧ ಗಾಳಿಯಲ್ಲಿ ಮಿಂದೆದ್ದು ಬರಬಹುದು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಖುಷಿ ಪಡಬಹುದು. ಶರಾವತಿ ನದಿಗೆ 1965ರಲ್ಲಿ ಆಣೆಕಟ್ಟು ಕಟ್ಟಲಾಗಿದೆ. ಇದು ವಾಟರ್ ಸ್ಪೋರ್ಟ್ಸ್ಗೆ ಫೇಮಸ್. ಇಲ್ಲಿ ನೀರಿನಾಟ,ವಿಂಡ್ ಸರ್ಫಿಂಗ್, ರಿವರ್ ರಾಫ್ಟಿಂಗ್ ಮಾಡಬಹುದು.
ಇಲ್ಲಿ ಸಾಹಸಿ ಕ್ರೀಡೆಗಳನ್ನು ಕೈಗೊಳ್ಳಬಹುದು. ಮಾತ್ರವಲ್ಲ, ಇಲ್ಲಿನ ಹತ್ತಿರದ ಸ್ಥಳಗಳಲ್ಲಿ ಟ್ರೆಕ್ಕಿಂಗ್ ಕೈಗೊಳ್ಳಬಹುದು, ಐತಿಹಾಡಸಿಕ ಸ್ಥಳ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಜಗತ್ಪ್ರಸಿದ್ಧ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.
ಹತ್ತಿರದ ಆಕರ್ಷಣೆಗಳು
ಇದರ ಹೊರತಾಗಿ ಜೋಗ ಜಲಪಾತದ ಹತ್ತಿರದಲ್ಲಿ ತುಂಗಾ ಹಳೆ ಆಣೆಕಟ್ಟು, ಕಾನೂರು ಕೋಟೆ, ಸೇಂಟ್ ಥೋಮಸ್ ಚರ್ಚ್, ಸಕ್ರೆಬೈಲು ಎಲೆಫೆಂಟ್ ಕ್ಯಾಂಪ್, ಕೆಳದಿ ರಾಮೇಶ್ವರ ದೇವಸ್ಥಾನ, ಲಿಂಗನಮಕ್ಕಿ ಜಲಾಶಯ, ಶಿವಪ್ಪ ನಾಯಕ ಅರಮನೆ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಂರಕ್ಷಿತ ಅರಣ್ಯ,.
ಜೋಗ್ ಜಲಪಾತ
ಇದು ಏಷ್ಯಾದ ಐದನೇ ಅತಿ ಎತ್ತರದ ಜಲಪಾತ. ಕರ್ನಾಟಕ ಪಶ್ಚಿಮದಲ್ಲಿರುವ ಪ್ರಾಕೃತಿಕ ಸೌಂದರ್ಯದ ನಡುವೆ ಜೋಗ ಜಲಪಾತದ ರೋಮಾಂಚಕಾರಿ ದೃಶ್ಯ ಅದ್ಭುತ. ಇದು ಶಿವಮೊಗ್ಗದಿಂದ 105ಕಿಮೀ ದೂರದಲ್ಲಿದೆ. ತಲಗುಪ್ಪದಿಂದ 16ಕಿಮೀ ದೂರದಲ್ಲಿದೆ.
ಕವಿಶೈಲ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿದೆ. ಕವಿಮನೆಯಲ್ಲಿ ಕುವೆಂಪು ಬರೆದ ಪುಸ್ತಕಗಳು, ಬಳಸಿದ ವಸ್ತುಗಳ ಸಂಗ್ರಹವಿದೆ.
ತುಂಗಾ ಹಳೆ ಡ್ಯಾಂ
ಶಿವಮೊಗ್ಗದಿಂದ 12ಕಿಮೀ ದೂರದಲ್ಲಿದೆ. ಇದು ಪ್ರಮುಖ ಪಿಕ್ನಿಕ್ ತಾಣವೂ ಹೌದು. ಇದರ ಸುತ್ತಲೂ ಹಸಿರು ಹಸಿರಾದ ಭತ್ತದ ಗದ್ದೆ, ಅಡಕೆ ತೋಟಗಳಿವೆ. ಬಾಬಾಬುಡನ್ ಗಿರಿಯ ಶ್ರೇಣಿಯ ವಿಹಂಗಮ ನೋಟವನ್ನು ನೋಡಬಹುದು.
ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಿಂಹಧಾಮ
ಇದು ತುಂಗಾ ಡ್ಯಾಂ ಹತ್ತಿರದಲ್ಲಿದೆ. ಇಲ್ಲಿ ಅಪರೂಪದ ಹುಲಿ ಮತ್ತು ಸಿಂಹಗಳನ್ನು ನೋಡಬಹುದು.
ಲಿಂಗನಮಕ್ಕಿ ಜಲಾಶಯ
ಜೋಗ್ ಫಾಲ್ಸ್ನಿಂದ 6 ಕಿಮೀ ದೂರದಲ್ಲಿದೆ. ಮಹಾತ್ಮಾ ಗಾಂಧಿ ಹೈಡ್ರೋ ಇಲೆಕ್ಟ್ರಿಕ್ ಪವರ್ ಯೂನಿಟ್ನ್ನು ಒಳಗೊಂಡಿದೆ.
ಧಾರ್ಮಿಕ ಕೇಂದ್ರಗಳು
ರಾಮೇಶ್ವರ ದೇವಸ್ಥಾನ ಮತ್ತು ಸೇಂಟ್ ಥೋಮಸ್ ಚರ್ಚ್ ಇರುವುದು ಇಲ್ಲಿಯೇ. ದೇವಸ್ಥಾನವು ಹೊಯ್ಸಳ-ದ್ರಾವಿಡರ ಕಾಲದ ವಾಸ್ತುಶಿಲ್ಪವನ್ನು ಕಾಣಬಹುದು. ಚರ್ಚ್ ಹದಿನೆಂಟು ಸಾವಿರ ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದ್ದು ಐದು ಸಾವಿರ ಜನ ಒಮ್ಮೆಗೆ ಚರ್ಚ್ ಒಳಗೆ ಸೇರಬಹುದು.
ಕಾನೂರ್ ಫೋರ್ಟ್
ಭಟ್ಕಳದ ಮಾರ್ಗವಾಗಿ ಜೋಗ್ ಫಾಲ್ಸ್ಗೆ ಹೋಗುವ ದಾರಿಯಲ್ಲಿ ಕಾನೂರು ಕೋಟೆ ಸಿಗುತ್ತದೆ. ಕೆಳದಿ ರಾಜವಂಶದ ಕರಿ ಮಾನಿಸೇನ ಅಬ್ಬಕ್ಕ ರಾಣಿ ಕಾಲದಲ್ಲಿ ಇದನ್ನು ನಿರ್ಮಿಸಲಾಯಿತು.
ಸಕ್ರೆಬೈಲು ಆನೆ ಕ್ಯಾಂಪ್: ಶಿವಮೊಗ್ಗದಿಂದ 14 ಕಿಮೀ ದೂರದಲ್ಲಿದೆ.
ಹೋಗೋದು ಹೇಗೆ?
ಹೊನ್ನೆಮರಡು ಬೆಂಗಳೂರಿನಿಂದ 370ಕಿಮೀ ದೂರದಲ್ಲಿದೆ. ಹೊನ್ನೆಮರಡುಗೆ ಉತ್ತಮ ರಸ್ತೆ ಸಂಪರ್ಕವಿದೆ. ಮೊದಲು ಶಿವಮೊಗ್ಗದ ತಲಗುಪ್ಪ ತಲುಪಿ ಅಲ್ಲಿಂದ ಟ್ರೆಕ್ಕಿಂಗ್ ಕೈಗೊಳ್ಳಬಹುದು ಅಥವಾ ಜೀಪ್ ಮೂಲಕ ಹೊನ್ನೆಮರಡು ತಲುಪಬಹುದು.
ಹತ್ತಿರದ ಏರ್ಫೋರ್ಟ್: ಮಂಗಳೂರು
ಹತ್ತಿರದ ರೈಲು ನಿಲ್ದಾಣ: ಸಾಗರ, ಶಿವಮೊಗ್ಗ. ಅಲ್ಲದೇ ಸಾಕಷ್ಟು ಖಾಸಗಿ, ಸರ್ಕಾರಿ ಬಸ್ ಸೌಲಭ್ಯವಿದೆ.
* ಶ್ರೀಕಾಂತ ಎ.
Comments
Post a Comment