Posts

Showing posts from June, 2013

ಎಲ್ಲೆಲ್ಲೂ ಹಸಿರು ಯಳಂದೂರು ತಾಲ್ಲೂಕು

Image
ಹಸಿರಿನಿಂದ ಕಂಗೊಳಿಸುತ್ತಿರುವ ಯಳಂದೂರು ಕೆರೆ ಎತ್ತ ನೋಡಿದರೂ ಹಸಿರು ದಿಬ್ಬಣ, ಬೆಟ್ಟಗುಡ್ಡಗಳ ಸೌಂದರ್ಯ. ಎಲ್ಲೆಲ್ಲೂ ವಿಶಾಲವಾಗಿರೋ ಕೆರೆಗಳು, ಇದರ ಮಧ್ಯೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಸಂಪದ್ಭರಿತವಾಗಿ ಬೆಳೆದ ಪೈರು, ಸದಾ ಸುಗ್ಗಿಕಾಲದ ವಾತಾವರಣ... ಒಟ್ಟಾರೆ ಇಡೀ ತಾಲ್ಲೂಕು ಹಸಿರು ಸೀರೆಯುಟ್ಟ ನಾರಿಯಂತೆ ಕಂಗೊಳಿಸುತ್ತಿದೆ. ಊರಿಗೊಂದು ಕೆರೆ, ಕೇರಿಗೊಂದು ಕಲ್ಯಾಣಿ, ಮನೆಗೊಂದು ಬಾವಿ... ಅಬ್ಬಾ ಇದೆಲ್ಲಾ ಇತಿಹಾಸದಲ್ಲಿ ಓದಿದ ನೆನಪು. ಇವುಗಳನ್ನೆಲ್ಲ ಈಗ ಹುಡುಕಲು ಹೊರಟರೆ ತಾಲ್ಲೂಕಿಗೊಂದು ಕೆರೆ ಸಿಗುವುದೂ ಅಪರೂಪ. ಆದರೆ ಈ ಸನ್ನಿವೇಶಕ್ಕೆ ವಿರುದ್ಧ ಎಂಬಂತೆ ಇಲ್ಲೊಂದು ತಾಲ್ಲೂಕಿನಲ್ಲಿ ಕೆರೆ ಇಲ್ಲದ ಗ್ರಾಮಗಳೇ ಇಲ್ಲ. ಸದಾ ಈ ಕೆರೆಗಳಲ್ಲಿ ನೀರು ತುಂಬಿರುತ್ತದೆ, ಅಲ್ಲದೆ ಇಲ್ಲಿನ ರೈತರ ಜೀವನಾಡಿಯಾಗಿದೆ. ಅದೇ ರಾಜ್ಯದ ಗಡಿಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕು. ಯಳಂದೂರು ತಾಲ್ಲೂಕಿನಲ್ಲಿ 33 ಗ್ರಾಮಗಳಿದ್ದು, 33ಕ್ಕೂ ಹೆಚ್ಚು ಕೆರೆಗಳಿವೆ. ಪ್ರತಿಯೊಂದು ಹಳ್ಳಿಯಲ್ಲೂ ಸಾವಿರಾರು ಎಕರೆಯಲ್ಲಿ ಹರಡಿಕೊಂಡಿರುವ ವಿಶಾಲವಾದ ಕೆರೆಗಳಿವೆ. ಹಲವು ಗ್ರಾಮಗಳಲ್ಲಿ ನೂರಾರು ಎಕರೆಯ ಎರಡು ಮೂರು ಕೆರೆಗಳಿವೆ. ಎಲ್ಲ ಕಾಲದಲ್ಲೂ ಈ ಕೆರೆಗಳಲ್ಲಿ ನೀರು ತುಂಬಿರುವುದು ಮತ್ತೊಂದು ವಿಶೇಷ. ತಾಲ್ಲೂಕಿನ ಅಗರ ಕೆರೆ ರಾಜ್ಯದ ಅತಿ ಹೆಚ್ಚು ವಿಸ್ತಾರವಾದ ಕೆರೆಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ. ಅ...

ನಿತ್ಯ ಹರಿದ್ವರ್ಣದ ವಾಲ್‌ಪರೈ

Image
ಒಂದರ ಪಕ್ಕ ಒಂದು ಸಾಲಾಗಿ ಕುಳಿತ ಚಿಗುರು ಹಸಿರು, ತೆಳು ಹಸಿರು, ಮಾಗಿದ ಹಸಿರು ಗುಚ್ಛಗಳು. ಅವುಗಳಿಂದ ಬೀಸುವ ತಂಗಾಳಿ ಮತ್ತು ದಾರಿಯುದ್ದಕ್ಕೂ ಸಿಗುವ ಅಚ್ಚ ಹಸಿರು ಸಿರಿ ಅನುಭವಿಸಲು ವಾಲ್‌ಪರೈ ಗಿರಿಧಾಮಕ್ಕೆ ತೆರಳಬೇಕು. ಚಹಾ ಮತ್ತು ಕಾಫಿಯ ಗುತ್ತು ಗುತ್ತು ಹಸಿರು ಗಿಡಗಳ ಸಾಲುಗಳನ್ನೇ ಹೊತ್ತಿರುವ ವಾಲ್‌ಪರೈ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಗೆ ಸೇರಿದ್ದು. ಸಮುದ್ರ ಮಟ್ಟದಿಂದ 1,193 ಮೀಟರ್ ಎತ್ತರದಲ್ಲಿ ಇರುವ ಈ ಗಿರಿಧಾಮ ಪಶ್ಚಿಮ ಘಟ್ಟದ ಅಣ್ಣಾಮಲೈ ಬೆಟ್ಟ ಸಾಲುಗಳಲ್ಲಿ ಒಂದು. ಇಲ್ಲಿ ಮೊದಲು ಕಾಫಿ ತೋಟ ಆರಂಭಿಸಿದವರು (1846) ರಾಮಸ್ವಾಮಿ ಮೊದಲಿಯಾರ್. 1875ರಲ್ಲಿ ವೇಲ್ಸ್‌ನ ರಾಜಕುಮಾರ ಭಾರತಕ್ಕೆ ಬಂದಾಗ ಈ ಸುಂದರ ಗಿರಿಧಾಮವನ್ನು ಸಿದ್ಧಗೊಳಿಸಲು ಅಪ್ಪಣೆಯಾಯಿತು. ಆಗ ಅಲ್ಲಿ ವಸತಿಗೃಹಗಳನ್ನು ಮತ್ತು ಅಲ್ಲಿಗೆ ತಲುಪಲು ರಸ್ತೆ ಸಂಪರ್ಕವನ್ನು ನಿರ್ಮಿಸಲಾಯಿತು. ಆದರೆ ರಾಜಕುಮಾರನ ಆಗಮನ ರದ್ದಾಯಿತು. ಅಲ್ಲಿ ನಿರ್ಮಾಣವಾದ ರಸ್ತೆ ಸಂಪರ್ಕ ಮತ್ತು ವಸತಿಗೃಹಗಳನ್ನು ಬ್ರಿಟಿಷ್ ಅಧಿಕಾರಿಗಳು ಬಳಸತೊಡಗಿದರು. ಕಾರ್ವರ್ ಮಾರ್ಷ್ ಎಂಬ ಅಧಿಕಾರಿ ಅಲ್ಲಿ ಕಾಫಿ ಮತ್ತು ಚಹಾ ತೋಟಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿದರು. ಇದೀಗ ಅಲ್ಲಿ ಖಾಸಗಿ ಮತ್ತು ಸರ್ಕಾರಿ ಚಹಾ ಮತ್ತು ಕಾಫಿ ತೋಟಗಳಿವೆ. ಜೊತೆಗೆ ಖಾಸಗಿ ಮತ್ತು ಸರ್ಕಾರಿ ವಸತಿ ಗೃಹಗಳು ಕೈಬೀಸಿ ಕರೆಯುತ್ತವೆ. ಇಂಥ ಸುಂದರ ಸುಸಜ್ಜಿತ ಗಿರಿಧಾಮಕ್ಕೆ ತಲುಪುವಾಗ 40 ಹ...

10 things you should know about Wimbledon and its traditions

Almost all tennis players have a dream of playing on Wimbledon's Centre Court and winning the trophy there. Here's probably why they harbour this ambition: 1. Wimbledon is the is the oldest tennis tournament in the world and has been played since 1877. It is considered to be the most prestigious of all the four Grand Slams. 2. This is the only tournament that is still played on the sport's original surface-grass. Earlier, the Australian Open and US Open that are played on hard court now and French Open that is played on clay were played on grass. Hence, tennis is called lawn tennis.  3. Player have to strictly wear white at the tournament. The rules state, "No solid mass of colouring; little or no dark or bold colours; no fluorescent colours; preference towards pastel colours...and all other items of clothing including hats, socks and shoes to be almost entirely white." Roger Federer who sported orange soles to his shoes during his first round match w...

ಗಂಗಾಮಾತೆಯ ಉಳಿಸಲು 'ಕಟ್ಟೆ'ಕಡೆಯ ಪ್ರಯತ್ನ

ನಿಮಗೆ ನೆನಪಿರಬಹುದು, ಕಳೆದ ಜೂನ್ 14ರಂದು ಅನ್ಯಾಯವಾಗಿ ಸಂತರೊಬ್ಬರು ಈ ಪುಣ್ಯಭೂಮಿಯಲ್ಲಿ ಪ್ರಾಣಕಳೆದುಕೊಂಡರು. ಹಾಗೆ ಅವರು ಪ್ರಾಣತ್ಯಾಗ ಮಾಡಿದ್ದು ನಮ್ಮ ಪುಣ್ಯನದಿ ಗಂಗೆಗಾಗಿ. ಅದು ಆತ್ಮಹತ್ಯೆಯಲ್ಲ, ಆತ್ಮಾಹುತಿ. ಈವರೆಗೆ ಪಾಪಿಗಳ ಶವಗಳಿಗೆ ಮಾತ್ರ ಮುಕ್ತಿ ದೊರಕಿಸುತ್ತಿದ್ದ ಗಂಗೆ ಇದರೊಂದಿಗೆ ಮೊದಲಬಾರಿಗೆ ಜೀವಂತ ವ್ಯಕ್ತಿಯೊಬ್ಬನಿಗೆ ವಿಶಿಷ್ಟ ರೀತಿಯಲ್ಲಿ ಮುಕ್ತಿ ದೊರಕಿಸಿಕೊಟ್ಟಿದ್ದಳು. ಹೌದು, ಗಂಗಾ ತಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ನದಿಯ ಶುದ್ಧೀಕರಣಕ್ಕೆ ಆಗ್ರಹಿಸಿ  ಸತತ 115 ದಿನ ಉಪವಾಸ ಕುಳಿತ ಉತ್ತರಾಖಂಡ್ ರಾಜ್ಯದ ಹರಿದ್ವಾರದ ಸನ್ಯಾಸಿ ಸ್ವಾಮಿ ನಿಗಮಾನಂದರಿಗೆ ಸಿಕ್ಕ ಉತ್ತರ ಸಾವು! ನಾಚಿಕೆಯಾಗಬೇಕಿತ್ತು ನಮಗೆ. ಆದರೆ, ಸರಕಾರಕ್ಕೆ ಅದು ದೊಡ್ಡ ವಿಚಾರವಾಗಲೇ ಇಲ್ಲ. ಏಕೆಂದರೆ ಆ ಸಂತನ ಸಾವು ಸ್ವಲ್ಪ ಸುದ್ದಿಯಾಯಿತು ಎಂಬುದನ್ನು ಬಿಟ್ಟರೆ ಮೊದಲಾಗಲೀ ಆನಂತರವಾಗಲೀ ನಮಗೆ ಏನೂ ಅನ್ನಿಸಲೇ ಇಲ್ಲ. ಗಂಗೆಯ ಒಡಲಲ್ಲಿ ಅರೆ ಬೆಂದ ಹೆಣಗಳೂ ಎಂದಿನಂತೆಯೇ ತೇಲಿ ಹೋಗುತ್ತಲೇ ಇವೆ. ಗಣಿಗಾರಿಕೆ, ಗಂಗೆಯ ಹರಿವಿಗೆ ಅಡ್ಡಲಾಗಿ ಮನಬಂದಂತೆ ಒಡ್ಡುಗಳ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಅತ್ಯಾಚಾರಗಳೂ ಮುಂದುವರಿದೇ ಇವೆ. ಇದಕ್ಕಿಂತ ವಿಪಯರ್ಯಾಸ ಬೇರೇನಿದೆ? ಹಠಕ್ಕೆ ಬೀಳದೇ, ಪ್ರತಿಭಟನೆಗೆ ಇಳಿಯದೇ ಏನೂ ಆಗುವುದಿಲ್ಲವೇ ಅಥವಾ ಕೊನೇಪಕ್ಷ ಒಂದು ಜೀವಕ್ಕೆ ನಾವು ಕಟ್ಟುವ ಬೆಲೆ ಇಷ್ಟೇ ಏನು? ನಮ್ಮನ್ನು ಆಳುತ...

ಸಾವಿನ ಭಯದಲ್ಲೇ ಬರೆದ ಹಸಿರಿನ ಭಯಾಗ್ರಫಿ

G ÁÚsÚß ¥ÚËÚOÚ¥Ú ÕM¦«Ú ÈÚáÛ}Úß. @¥æàM¥Úß ¦«Ú ÁÛeæÞM¥Úà ºÚ¾ÚáÛÀ, ÑÚMVÚtVÚÁæàM¦Væ ÔæàÁÚn¥Ú§ÁÚß. eæàÞÔÛséVÚ×Ú ¬ÈÚáÛ%y GWXÄÇ¥æÞ ÑÛW}Úß¡. ¦«Ú¦M¥Ú ¦«ÚOæQ @ÈÚÁÚß d«Ú¯Ã¾ÚßÁÛVÚß~¡¥Ú§ÁÚß. ¬ÞÂVÛW ËÚ}Ú®ÚþÚß}Ú„ «Úsæ¾Úßß~¡}Úß¡. H«Û¥ÚÁÚà ÈÚáÛt ÔÚØÙVÚÁÚ …¥ÚßOÚ«Úß„ ÔÚÑÚ«Úß ÈÚáÛsÚÅæÞ†æÞOæM… ÔÚpÚ OÚno ÔæàÁÚn¥Ú§ÁÚÈÚÁÚß. ®ÚþÚß}Ú„ AM¥æàÞÄ«Ú¥Ú ÑÚ‡ÁÚà®Ú ®Úsæ¥ÚßOæàMt}Úß¡. dÄ^Ú×ÚÈÚØVæ d«Ú †æM…ÄÈÚã Ôæ^Úß`~¡}Úß¡. }ÚÁÚßyºÛÁÚ}Ú ÑÚMYÚ¥Ú eæàÞÔÛsé ¬ÈÚáÛ%y †Û¿ßM¥Ú †Û¿ßVæ ÔÚ¸¹, ÁÛeæÞM¥Úà ÒMVé 'eæàÞÔÛsé †Û†Û' AW¾æßÞ ÔæàÁÚÔæàÉß½¥Ú§ÁÚß.   ¾ÚßËÚÑÚßÓ ÑÚÔÚdÈÛW¾æßÞ ÈæçÂVÚ×Ú«Úß„ ÑÚäÏoÑÚß}Ú¡¥æ. ÈÚß}Úß¡ @M¢Ú ¾ÚßËÚÒÓVæ ÈÛÁÚÑÚߥÛÁÚÁÚà ÔÚÄÈÚÁÚß. ºÚ¾ÚáÛÀÁÚ É^ÛÁÚ¥ÚÄàÇ B¥Úß ÑÚß×ÛÙVÚÆÄÇ. ÔÛVæ ^Ú×ÚÈÚØ¾Úᒀ ÈÚßß×ÚßWOæàMsæÞ ÔæàÁÚn¥Ú§ @ÈÚÂVæ @¥Úß ÈÚßÁÚß ÔÚßno«Ú ¦«Ú. @ÈÚ}Úß¡ ÑÚ߯ÃÞM OæàÞmé%«Ú «ÛÀ¾ÚáÛƒÞËÚ GM.Ò. eæç«é @ÈÚÁÚß ÑÚÂÑÚQ †ælo }Ú®Ú°Æ«Ú VÛÃÈÚßVÚØVæ ÑÚ¤×Ú ®ÚÂÌÞÄ«æVæ AVÚÉßÒ¥Ú§ÁÚß. A ºÛVÚ¥ÚÆÇ Éß~ÉßÞÂ¥Ú VÚ{VÛÂOæ ÉÁÚߥڪ¥Ú ÈæàOÚ¥Ú§Èæß¾Úß ÑÚM…M¨Ú¥Ú ®ÚÃPþæß @¥Úß. A ºÛVÚ¥Ú @®Ú}Û¹M¨ÚÈÚ«æ¬Ò¥Ú ÁÛeæÞM¥Úà ÒMVé ÑÚÔÚdÈÛW¾æßÞ d}æ¾Ú߯Ç...

ರೂಪಾಯಿ ಅಪಮೌಲ್ಯ - ಖರೀದಿ ತುಟ್ಟಿ

Image
ಎಲ್ಲದಕ್ಕೂ ದುಬಾರಿ ಬೆಲೆ ನೀಡಿ ಬಸವಳಿದು ಹೋಗಿರುವ ಭಾರತೀಯ ಗ್ರಾಹಕನಿಗೆ ಇದೀಗ ಸತತವಾಗಿ `ರೂಪಾಯಿ ಅಪಮೌಲ್ಯ'ಗೊಳ್ಳುತ್ತಿರುವ ಕಹಿ ಸುದ್ದಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಿರಂತರ ಹಣದುಬ್ಬರದಿಂದಾಗಿ ಬೆಲೆ ಏರಿಕೆ ಕಾಣದ ಸರಕು ಬಹುಶಃ ದೇಶದ ಮಾರುಕಟ್ಟೆಯಲ್ಲಿ ಯಾವುದೂ ಇರಲಿಕ್ಕಿಲ್ಲ. ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ದಾಖಲೆ ಪ್ರಮಾಣದಲ್ಲಿ ಸೊರಗಿದ್ದಕ್ಕೆ ಕಾರಣ ಏನು? ಇದರ ಪರಿಣಾಮ ಯಾರ‌ ಯಾರ ಮೇಲೆ ಹೇಗೆ? ಪರಿಹಾರವೇನು? ಈ ಕುರಿತಾದ ಸಮೀಕ್ಷೆಗಳು ಏನು ಹೇಳುತ್ತವೆ. ಈ ಕುರಿತು ಒಂದು ಅವಲೋಕನ ಇಲ್ಲಿದೆ... ಏಪ್ರಿಲ್-ಮೇ ತಿಂಗಳಲ್ಲಿ ಭಾರತೀಯರು ಒಂದು ಅಮೆರಿಕನ್ ಡಾಲರ್‌ಗೆ ರೂ50ರ ಆಸುಪಾಸಿನಲ್ಲಿ  ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ, ಜೂನ್ 21ರಂದು 1 ಡಾಲರ್‌ಗೆ ರೂ60 (59.57) ನೀಡಲೇಬೇಕಾದ ದುಃಸ್ಥಿತಿ ಬಂದ ನಂತರವಂತೂ ಎಲ್ಲ ವರ್ಗದ ಜನರ ಅದರಲ್ಲೂ ಮಧ್ಯಮ ವರ್ಗದವರ, ಬಡವರ ಸಂಕಷ್ಟ ಇಮ್ಮಡಿಯಾಯಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ ರೂಪಾಯಿ ಬೆಲೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವದರಿಂದ ಪೆಟ್ರೋಲಿಯಂ ಉತ್ಪನ್ನಗಳು, ಖಾದ್ಯತೈಲ, ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಳವಾಗುತ್ತದೆ. ಇನ್ನೊಂದೆಡೆ ಬಿಡಿಭಾಗಗಳ ಆಮದು ಅವಲಂಬಿಸಿರುವ ಎಲೆಕ್ಟ್ರಾನಿಕ್ ಮತ್ತಿತರ ಐಷಾರಾಮಿ ವಸ್ತುಗಳೂ ಬಹಳ ದುಬಾರಿಯಾಗಿ ಮಧ್ಯಮ ಪ್ರಮಾಣದ ಆದಾಯವಿರುವ ಗ್ರಾಹಕರ ಖರೀದಿ ಕನಸಿಗೆ ತಣ್ಣೀರು ...

ಸ್ಥಿರಾಸ್ತಿ ಮಸೂದೆ

ಬೆಂಗಳೂರಿನ ಹೊರವಲಯದಲ್ಲಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕೆಲಸ. ಹತ್ತಿರದಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹೆಸರುವಾಸಿಯಾದ ಸಂಸ್ಥೆಯೊಂದು ಐಷಾರಾಮಿ ಅಪಾರ್ಟ್‌ಮೆಂಟನ್ನು ನಿರ್ಮಿಸುತ್ತಿದೆ. ಎಲ್ಲವೂ ಚೆನ್ನಾಗಿದೆ ಎಂದುಕೊಂಡು ಅಪಾರ್ಟ್‌ಮೆಂಟನ್ನು ಖರೀದಿಸಿದರೆ ಆರು ವರ್ಷವಾದರೂ ಅದರ ಕೆಲಸ ಮುಗಿಯುತ್ತಿಲ್ಲ. ಈ ಬಗ್ಗೆ ಆ ಸಂಸ್ಥೆಯ ಬಳಿ ಕೇಳಿದರೆ ಸರ್ಕಾರದ ಕೆಲವು ಇಲಾಖೆಗಳಿಂದ ಪರವಾನಗಿ ದೊರಕಿಲ್ಲ. ಇದು ನಮ್ಮ ಕೈ ಮೀರಿದ ವಿಚಾರ. ಈ ವಿಚಾರವನ್ನು ಒಪ್ಪಂದಲ್ಲಿ ನಮೂದಿಸಿದ್ದೇವೆ ಎಂಬ ಸಿದ್ಧ ಉತ್ತರ ಸಿಗುತ್ತದೆ. ಬೇರೆ ಊರಿನಿಂದ ಬೆಂಗಳೂರಿಗೆ ಬಂದು ಸ್ವಂತ ಮನೆ ಅಥವಾ ಅಪಾರ್ಟ್‌ಮೆಂಟ್ ಖರೀದಿಸುವವರಿಗೆ ಈ ರೀತಿಯ ಒಂದಲ್ಲ ಒಂದು ಕಷ್ಟ ಬರುತ್ತದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಮನೆ ಅಥವಾ ಅಪಾರ್ಟ್‌ಮೆಂಟ್ ಖರೀದಿಸುವುದು ಕಷ್ಟ ಎನ್ನುವುದು ಮೇಲೆ ಪ್ರಸ್ತಾಪಿಸಿದ ಉದಾಹರಣೆಯಿಂದ ಗೊತ್ತಾಗುತ್ತದೆ. ಇದರ ಹೊರತಾಗಿಯೂ ಉದ್ಯೋಗದ ಒತ್ತಡ, ಸಮಯದ ಅಭಾವದಿಂದಾಗಿ ಎಲ್ಲರೂ ಅವಸರದಿಂದ ಮನೆ ಖರೀದಿಸುತ್ತಾರೆ. ಆದರೆ ಕರಾರುಪತ್ರದಲ್ಲಿರುವ ಅಂಶಗಳನ್ನು ಸರಿಯಾಗಿ ಪರಿಶೀಲಿಸಲು ಹೋಗುವುದೇ ಇಲ್ಲ. ಖಾತರಿಯೇ ಇಲ್ಲ! ಇಂಥ ಪರಿಸ್ಥಿತಿಯಲ್ಲಿ ದುಡ್ಡು ಕೊಟ್ಟು ಮನೆ ಯಾವಾಗ ಸಿಗುತ್ತದೆ ಎಂಬ ಖಾತರಿ ಇಲ್ಲ. ಇನ್ನು ಸಾಮಾನ್ಯ ಉದ್ಯೋಗಿ ಬಿಲ್ಡರ್‌ಗಳ ಜತೆ ಹೋರಾಡುವುದು ಹೇಗೆ? ಇನ್ನು ಹಲವು ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಕಂಪನಿಯ ಬ್ರೋಷರ್‌ನಲ್ಲ...

ಪ್ರಜಾವಾಣಿ ಸಂದರ್ಶನ ಜಲ್-ಜನ್ ಜೋಡೊ..

Image
ರಾಜೇಂದ್ರ ಸಿಂಗ್ `ಚೆಕ್ ಡ್ಯಾಂಗೆ ಜನ್ಮ ನೀಡುವ ಗಡ್ಡದ ವ್ಯಕ್ತಿ' ಎಂದೇ ರಾಜಸ್ತಾನದ ತುಂಬಾ ಮನೆಮಾತಾದ ರಾಜೇಂದ್ರ ಸಿಂಗ್, ಪರಿಸರದ ಆರೋಗ್ಯಕ್ಕೆ ಮಿಡಿಯುತ್ತಿರುವ ಆಯುರ್ವೇದ ವೈದ್ಯ. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಈ ಆಧುನಿಕ ಭಗೀರಥ ಈಗ ಜಲ್-ಜನ್ ಜೋಡೊ ಯಾತ್ರೆ ಆರಂಭಿಸಿದ್ದಾರೆ. ಬೆಂಗಳೂರಿಗೆ ಆಗಮಿಸಿದ್ದ ಅವರು `ಪ್ರಜಾವಾಣಿ' ಜತೆ ಮಾತಿಗೆ ಸಿಕ್ಕಾಗ... *` ಭಾರತದ ಜಲ ಪುರುಷ' ಎಂದು ಹೆಸರಾದವರು ನೀವು. ಈ ಕೀರ್ತಿಗೆ ಕಾರಣವಾಗಿದ್ದು ತಾವು ರಾಜಸ್ತಾನದಲ್ಲಿ ಸದ್ದಿಲ್ಲದೆ ನಡೆಸಿದ ಜಲಕ್ರಾಂತಿ. ಮರುಭೂಮಿಯಲ್ಲಿ ಗಂಗೆಯನ್ನು ಕರೆತಂದದ್ದು ಹೇಗೆ? ನೀರಿಲ್ಲದೆ ಯಾವ ಪ್ರಗತಿಯೂ ಸಾಧ್ಯವಿಲ್ಲ. ಆದರೆ, ರಾಜಸ್ತಾನದ ಅರಾವಲಿ ಪರ್ವತ ಶ್ರೇಣಿಯ ಕುಗ್ರಾಮಗಳಲ್ಲಿ ನೀರಿನ ಸುಳಿವೇ ಇರಲಿಲ್ಲ. ಥಾರ್ ಮರುಭೂಮಿಗೆ ಹತ್ತಿರವಾದ ಈ ಪ್ರದೇಶದ ಮೇಲೆ ವರುಣ ಮತ್ತು ಸೂರ್ಯ ಇಬ್ಬರಿಗೂ ಅತಿಯಾದ ಪ್ರೀತಿ. ಹೀಗಾಗಿ ಇಲ್ಲಿಯ ಭೂಮಿ ಮಳೆ ಹನಿಗಳ ಮುಖ ನೋಡುವುದೇ ಅಪರೂಪ. ಬಿದ್ದ ಮಳೆ ನೀರೂ ಪ್ರಖರ ಬಿಸಿಲಿಗೆ ಬಹುಬೇಗ ಆವಿಯಾಗಿ ಬಿಡುತ್ತದೆ. ಜನರಿಗೆ ನೀರು ಪೂರೈಸಲಾಗದೆ ನಿತ್ರಾಣಗೊಂಡು ಮಲಗಿದ್ದ ಚೆಕ್‌ಡ್ಯಾಂ (ಜೋಹಡ್), ಕೆರೆ, ತೊರೆ ಮತ್ತು ನದಿಗಳಿಗೆ ಮರುಜನ್ಮ ನೀಡುವ ಉದ್ದೇಶದಿಂದ ತರುಣ ಭಾರತ ಸಂಘ ಕಟ್ಟಿದೆವು. ನಮ್ಮ ತಂಡ ಅರಾವಲಿ ಕುಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿ ಹೆಚ್ಚಾಗಿ ನೆಲೆಸಿದ್ದ ಗುಜ್ಜರು ಹಾ...