Posts

Showing posts from September, 2013

Japan's luxury fruit masters grow money on trees

Tokyo:  With melons that sell for the price of a new car and grapes that go for more than $100 a pop, Japan is a country where perfectly-formed fruit can fetch a fortune.  An industry of fruit boutiques has defied Japan's sluggish economy to consistently offer luscious and lavishly tended produce for hefty prices - and it is always in demand.  In July, a single bunch of "Ruby Roman" grapes reportedly sold for 400,000 yen ($4,000), making the plump, crimson berries worth a staggering 11,000 yen each.  Every May, a pair of canteloupe melons grown in the north of Hokkaido is auctioned off. They regularly fetch the price of a modest new car. The hammer fell on this year's pair at a cool 1.6 million yen. While such cases are at the extreme end, top-notch fruit is a valuable commodity in the world of business and as a seasonal gift, signifying just how much importance the giver attaches to the relationship. "Most of our products are for gif...

ವೃದ್ಧ ಭಾರತ

Image
ನಮ್ಮ ಭಾರ ಹೊತ್ತವರು ನಮಗೆ ಭಾರವೇ? ಉದ್ಯೋಗ, ನವಜೀವನದ ನಿರೀಕ್ಷೆಯಲ್ಲಿ ರಾಜಧಾನಿ ಸೇರಿರುವ ಮಕ್ಕಳು. ಹಳ್ಳಿಯಲ್ಲೇ ಉಳಿದು ವರ್ಷಕ್ಕೊಮ್ಮೆ ಮಕ್ಕಳ ಆಗಮನ ಎದುರು ನೋಡುತ್ತಾ ದಿನ ಎಣಿಸುತ್ತಿರುವ ವೃದ್ಧರು. ರಾಜಧಾನಿಯಲ್ಲಿದ್ದರೂ, ಬೇರೆ ಮನೆ ಮಾಡಿ ತಮ್ಮ ಸಂಸಾರದಲ್ಲಿ ಮಗ್ನರಾಗಿರುವ ಮಕ್ಕಳು. ಮನೆ ಮುಂದೆ ಅಪರಿಚಿತರು ಬಂದು ಕ್ಷಣ ನಿಂತರೂ ಭೀತಿಯಿಂದ, ಅಸುರಕ್ಷಿತ ಭಾವನೆಯಿಂದ ತಲ್ಲಣಿಸುವ ಪ್ರಾಯದ ಪೋಷಕರು. ವೃದ್ಧಾಶ್ರಮದಲ್ಲಿ ದಿನ ಕಳೆಯುತ್ತಿರುವ ಜೀವಗಳು. ಇದು ಇಂದಿನ ಭಾರತದ ಚಿತ್ರಣ. ಆರೋಗ್ಯ ಸೇವೆಗಳ ಹೆಚ್ಚಳದಿಂದಾಗಿ, ಮರಣಗಳ ಅನುಪಾತ ಕಡಿಮೆಯಾಗಿದೆ. ಹೀಗಾಗಿ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತೋಷದ ಸಂಗತಿಯೇ. ಆದರೆ ವೃದ್ಧರನ್ನು ಅನುಪಯುಕ್ತರೆಂದು ಪರಿಗಣಿಸಿ ಮೂಲೆಪಾಲು ಮಾಡುವ ಸಂಸ್ಕೃತಿಯೂ ಹೆಚ್ಚುತ್ತಿದೆ ಎಂಬುದು ಆತಂಕದ ಸಂಗತಿ. ಒಂದು ಸಮೀಕ್ಷೆಯಂತೆ, ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 2010ರಲ್ಲಿ ಒಟ್ಟು ಜನಸಂಖ್ಯೆಯ ಶೇ.8ರಷ್ಟಿತ್ತು. 2050ರಲ್ಲಿ ಅದು ಶೇ.19 ಹೆಚ್ಚಾಗಲಿದೆ. ಸಂಖ್ಯೆ 320 ದಶಲಕ್ಷ ತಲುಪುವ ಸಾಧ್ಯತೆಯಿದೆ. ಇದು ವಿಶ್ವಸಂಸ್ಥೆಯ ಲೆಕ್ಕಾಚಾರ. ಭಾರತದಲ್ಲಿ ಈಗ 81 ದಶಲಕ್ಷ ವೃದ್ಧರಿದ್ದಾರೆ. ಅದರಲ್ಲಿ ದೆಹಲಿಯಲ್ಲಿಯೇ 11 ಲಕ್ಷ ಜನರಿದ್ದಾರಂತೆ. ಶೇ.40 ರಷ್ಟು ಹಿರಿಯರು ತಮ್ಮ ಕುಟುಂಬಗಳಿಂದ ದೂರ ವಾಸಿಸುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಕೇವ...

ಸಿದ್ದರಾಮಯ್ಯನವರೇ ಸದಾ ಫಾರಿನ್ ಟೂರ್ ಮಾಡಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಚೀನಾದಿಂದ ವಾಪಸ್ ಬಂದಿದ್ದಾರೆ. ತಮ್ಮ ಪ್ರವಾಸ ಅನುಭವಗಳನ್ನು ಅವರು ಸ್ನೇಹಿತರ ಮುಂದೆ, ಪತ್ರಕರ್ತರ ಮುಂದೆ ರಸವತ್ತಾಗಿ ಬಣ್ಣಿಸಿದ್ದಾರೆ. ಮೂಲತಃ ಸಿದ್ದರಾಮಯ್ಯ ವಿದೇಶಿ ವ್ಯಾಮೋಹಿಯೇನಲ್ಲ. ಅವರ ಬೇರಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ಹಾಗೆಂದು ವಿದೇಶ ಪ್ರವಾಸ ಮಾಡಿಲ್ಲ ಅಂತಲ್ಲ. ಅವರು ಚೀನಾಕ್ಕೆ ಹೊರಡುತ್ತಾರೆ ಎಂದು ಗೊತ್ತಾದಾಗ ಅವರ ರಾಜಕೀಯ ವಿರೋಧಿಗಳು, 'ಮುಖ್ಯಮಂತ್ರಿಗಳು ಇನ್ನೂ ಜಿಲ್ಲಾ ಪ್ರವಾಸವನ್ನೇ ಮಾಡಿಲ್ಲ. ಮುಖ್ಯಮಂತ್ರಿಯಾಗಿ ಇನ್ನೂ ಬೆಂಗಳೂರು ನಗರ ಪ್ರದಕ್ಷಿಣೆಯನ್ನೇ ಮಾಡಿಲ್ಲ. ಆಗಲೇ ವಿದೇಶ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ. ಸಿದ್ದರಾಮಯ್ಯನವರ ಆದ್ಯತೆಗಳೇನು ಎಂಬುದು ಇದರಿಂದ ಗೊತ್ತಾಗುತ್ತದೆ' ಎಂದು ಟೀಕೆ ಮಾಡಿದರು. ಈ ಟೀಕಾಕಾರರ ಮಾತುಗಳನ್ನು ಕೇಳಿ, ಅದನ್ನು ಗಂಭೀರವಾಗಿ ಪರಿಗಣಿಸಿ ಸಿದ್ದರಾಮಯ್ಯನವರು ಈ ವಿದೇಶ ಪ್ರವಾಸವನ್ನು ರದ್ದುಗೊಳಿಸಿ ಬಿಡುತ್ತಾರಾ ಎಂದುಕೊಂಡಿದ್ದೆ. ಆದರೆ ಅವರು ಹಾಗೆ ಮಾಡಲಿಲ್ಲ. ಮುಖ್ಯಮಂತ್ರಿಯವರು ವರ್ಲ್ಡ್ ಎಕನಾಮಿಕ್ ಫೋರಂನ ಸಮಾವೇಶದಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ಹೋಗಿದ್ದರು. ಇದು ನಿಜಕ್ಕೂ ಪ್ರತಿಷ್ಠಿತ ಸಮಾವೇಶ. ಈ ಸಂದರ್ಭದಲ್ಲಿ ಪಾಲ್ಗೊಳ್ಳಲು ಭಾರತದ ಎಷ್ಟು ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿತ್ತೋ ಗೊತ್ತಿಲ್ಲ. ಆದರೆ ನಮ್ಮ ಮುಖ್ಯಮಂತ್ರಿಗಳಿಗೆ ಈ ಆಮಂತ್ರಣ ಸಿಕ್ಕಿದ್ದು ಹೆಮ್ಮೆಯ ಸಂಗತಿ. ಜಗತ್ತಿನ ಬಹುರಾಷ್ಟ್ರೀಯ ಕಂ...

ಸಿದ್ದರಾಮಯ್ಯನವರೇ ನಮಗಾಗಿ ಈ ಪುಸ್ತಕ ಓದುತ್ತೀರಾ?

'ಸಿದ್ದರಾಮಯ್ಯನವರೇ, ಸದಾ ಫಾರಿನ್ ಟೂರ್ ಮಾಡಿ' ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಕಳೆದ ವಾರದ ಅಂಕಣದಲ್ಲಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎಂಬ ಹೆಸರನ್ನು ಪ್ರಸ್ತಾಪಿಸಿದ್ದೆನಷ್ಟೆ. ಈ ಹೆಸರನ್ನು ನೀವು ಕೇಳುವ ಸಾಧ್ಯತೆ ತೀರಾ ಕಡಿಮೆ. ಈ ಹೆಸರು ನಿಮ್ಮಲ್ಲಿ ಯಾವುದೇ ಭಾವನೆಯನ್ನು ಮೂಡಿಸಲಾರದು. ಹೆಚ್ಚೆಂದರೆ ಇದು ಒಬ್ಬ ಮುಸ್ಲಿಂ ಅಥವಾ ಅರಬ್ ವ್ಯಕ್ತಿಯ ಹೆಸರು ಎಂದಷ್ಟೇ ನೀವು ಭಾವಿಸಬಹುದು. ಅದೇ 'ದುಬೈ' ಎಂದು ಹೇಳಿದರೆ, ನಿಮ್ಮ ಮನಸ್ಸಿನಲ್ಲಿ ಹತ್ತಾರು ಚಿತ್ರಣಗಳು ಮೂಡೀತು. ಆ ಹೆಸರನ್ನು ಯಾರು ಕೇಳಿಲ್ಲ ಹೇಳಿ. ದುಬೈಗೆ ಹೋಗಿ ಬಂದವರು ಸಹ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಹೆಸರನ್ನು ಕೇಳಿರುವ ಸಾಧ್ಯತೆ ಅಷ್ಟಕಷ್ಟೆ. ಆದರೆ ಆಧುನಿಕ ದುಬೈ ಎಂಬ ಮಾಯಾನಗರಿಯ ನಿರ್ಮಾತೃ ಇದೇ ವ್ಯಕ್ತಿ ಎಂದರೆ ಅಚ್ಚರಿಯಾದೀತು. ಒಬ್ಬ ವ್ಯಕ್ತಿಯ ದೂರದರ್ಶಿತ್ವ ಹಾಗೂ ಧೀಮಂತನಾಯಕತ್ವ ಹೇಗೆ ಒಂದು ನಗರವನ್ನು ಜಗತ್ತಿನ ಭೂಪಟದಲ್ಲಿ ಪ್ರಮುಖವಾಗಿ ಸ್ಥಾಪಿಸಬಹುದು ಎಂಬುದಕ್ಕೆ ಮಕ್ತೌಮ್ ಜೀವಂತ ನಿದರ್ಶನ. ನಾನು ಇತ್ತೀಚೆಗೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಬರೆದ My vision: Challenges in the Race for Excellence ಎಂಬ ಪುಸ್ತಕವನ್ನು ಓದುತ್ತಿದ್ದೆ. ದುಬೈ ವಿಮಾನ ನಿಲ್ದಾಣದ ಪುಸ್ತಕದಂಗಡಿಯಲ್ಲಿ ಈ ಕೃತಿಯ ಮೈದಡವುತ್ತಿದ್ದಾಗ ಒಂದು ವಾಕ್ಯವನ್ನು ಗಮನಿಸಿದೆ-'ಆಫ್ರಿಕಾದ ಕಾಡಿನಲ್ಲಿರುವ ಕೃಷ್...

ಸಣ್ಣ ಆಲೋಚನೆಯ ದೊಡ್ಡ ಸಮಾಜ ಸುಧಾರಣೆಗಳು

Image
  ಸಾರಿಕಾ ಪನ್ವಾರ್ ಅದು ಗುಡ್ಡಗಾಡು ಪ್ರದೇಶ. ಕಿತ್ತು ತಿನ್ನುವ ಬಡತನದ ಕಾರಣದಿಂದಾಗಿಯೇ ಅಲ್ಲಿನ ಬಹುತೇಕ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು. ತಮಗೆ ಅರಿವಿಲ್ಲದೆಯೇ ಎಚ್‌ಐವಿ ಪಾಸಿಟಿವ್‌ನಿಂದ ಬಳಲುತ್ತಿದ್ದ ಅವರು ಇತರರಿಗೂ ಅದನ್ನು ಪಸರಿಸುತ್ತಿದ್ದರು. ಎಚ್‌ಐವಿ ಪಾಸಿಟಿವ್‌ಗೆ ತುತ್ತಾಗಿದ್ದ ಸಾವಿರಾರು ಜನರಲ್ಲಿ ಬಹುತೇಕರು 25ರ ಒಳಗಿನ ವಯೋಮಾನದವರು. ಮೌಢ್ಯತೆ ಮತ್ತು ಕಂದಾಚಾರದ ಈ ಪ್ರದೇಶಕ್ಕೆ ತೆರಳಿದ 28ರ ಯುವತಿ ಸಾರಿಕ ಕೇವಲ ಎರಡೇ ವರ್ಷಗಳಲ್ಲಿ ಈ ಪ್ರದೇಶದ ಇಡೀ ಚಿತ್ರಣವನ್ನೇ ಬದಲಿಸಿದರು. ಹೌದು. ಹಿಮಾಚಲ ಪ್ರದೇಶದ ಕಂಗ್ರಾ ಕಣಿವೆಯಲ್ಲಿ ಸಾರಿಕ ಆರೋಗ್ಯದ ಮಂತ್ರ ಜಪಿಸಿದರು. ಇದರ ಫಲವಾಗಿ ಏರುಗತಿಯಲ್ಲಿದ್ದ ಎಚ್‌ಐವಿ ಪ್ರಕರಣಗಳು ಎರಡೇ ವರ್ಷದಲ್ಲಿ ಗಣನೀಯವಾಗಿ ಇಳಿಕೆಯಾದವು. ಹಳ್ಳಿ ಹಳ್ಳಿಗೂ ತೆರಳಿ ಮಹಿಳೆಯರನ್ನು ಭೇಟಿ ಮಾಡಿ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸಿದರು. ಈ ಕಣಿವೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನೆರವಿನಿಂದ 80 ಕ್ಕೂ ಹೆಚ್ಚು ರೆಡ್ ರಿಬ್ಬನ್ ಕ್ಲಬ್‌ಗಳನ್ನು ತೆರೆದು ಅಲ್ಲಿ ಎಚ್‌ಐವಿ ಪೀಡಿತರಿಗೆ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನೀಡಿದರು. ಸಾವಿರಾರು ರೋಗಿಗಳು ಚಿಕಿತ್ಸೆಯಿಂದ ಚೇತರಿಸಿಕೊಂಡರು. ಇವರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಸರ್ಕಾರದ ವತಿಯಿಂದ ಆರ್ಥಿಕ ನೆರವು ಒದಗಿಸಿದರು. ಮೂಲ ಸೌಕರ್ಯಗಳ ಒದಗಿಸಿ ಅವರ ಜೀವನಕ್ಕೂ ನೆರವಾದರು ಸಾರಿಕಾ...

ಅಭಿವೃದ್ಧಿಯೋ ಅಧಃಪತನವೋ?

ದೆ ಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪು ಮೂವತ್ತು ವರ್ಷಗಳಷ್ಟು ಸುದೀರ್ಘ ಕಾಲ ನರ್ಮದಾ ಕಣಿವೆಯ ಉದ್ದಗಲಕ್ಕೂ ನಡೆದಾಡಿತು. ಶ್ರಮ ಬೇಡಿದ ನಡಿಗೆ ಅದು; ಸುಖಾಸುಮ್ಮನೆ ಸಂತೋಷಕ್ಕೆಂದು ನಡೆದದ್ದಲ್ಲ. ನರ್ಮದಾ ಕಣಿವೆಯಲ್ಲಿ ಸರ್ಕಾರ ನಿರ್ಮಿಸಲು ಹೊರಟಿದ್ದ ಬೃಹತ್ ಜಲ ವಿದ್ಯುತ್ ಹಾಗೂ ನೀರಾವರಿ ಯೋಜನೆಗಳಿಂದ ಪರಿಸರದ ಮೇಲೆ ಆಗುವ ಸಂಭವನೀಯ ಪರಿಣಾಮಗಳನ್ನು ಖುದ್ದು ಅಧ್ಯಯನ ಮಾಡುವುದು, ಜೊತೆಗೆ ಕಣಿವೆಯ ನೈಸರ್ಗಿಕ, ಸಾಂಸ್ಕೃತಿಕ ಸಂಪತ್ತನ್ನು ಕಂಡು ದಾಖಲಿಸುವುದು ಆ ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆಯಾಗಿತ್ತು. ತಮ್ಮ ಪ್ರವಾಸವನ್ನು ಆಧರಿಸಿ ಅವರು ವರದಿಯೊಂದನ್ನು ಸಿದ್ಧಪಡಿಸಿದರು. ಅದರ ಒಂದಷ್ಟು ಅಂಶಗಳು ಲಂಡನ್ನಿನ `ಎಕಾಲಜಿಸ್ಟ್' ಮತ್ತು ಮುಂಬೈನ `ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ'ಯಲ್ಲಿ (ಇಪಿಡಬ್ಲ್ಯು) ಪ್ರಕಟಗೊಂಡವು. ಹೇರಳವಾದ ಮಾಹಿತಿಯನ್ನು ತುಸು ಕೊರೆ ಎನ್ನಬಹುದಾದ ಗದ್ಯಶೈಲಿಯಲ್ಲಿ ವಿದ್ಯಾರ್ಥಿಗಳು ಬರೆದಿದ್ದರು. ಪರಿಗಣನೆಗೆ ಯೋಗ್ಯವಾದ, ಆಸಕ್ತಿಕರ ಐತಿಹಾಸಿಕ ಮಾಹಿತಿ ಅದು. ಮುಂಬೈನಲ್ಲಿ ಹೋರಾಟಗಾರ್ತಿಯಾಗಿ ಆಗ ಗುರುತಿಸಿಕೊಂಡಿದ್ದ ಮೇಧಾ ಪಾಟ್ಕರ್ ಇಪಿಡಬ್ಲ್ಯುನಲ್ಲಿ ಪ್ರಕಟವಾದ ಲೇಖನ ಓದಿದ ನಂತರ ನರ್ಮದಾ ಕಣಿವೆಯ ಕಡೆಗೆ ಚಳವಳಿಯ ಉದ್ದೇಶ ಇಟ್ಟುಕೊಂಡು ಹೊರಟರು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯು 30 ದೊಡ್ಡ ಅಣೆಕಟ್ಟುಗಳು ಹಾಗೂ 135 ಮಧ್ಯಮ ಗಾತ್ರದ ಅಣೆಕಟ್ಟುಗಳ ನಿರ್ಮಾಣವನ್ನು ಒಳಗೊಂಡಿತ್ತು...