ಕಟ್ಟದ ಕೆರೆಗೆ ಮೂರು ಬಾರಿ ಪರಿಹಾರ !
ಇಂಗ್ಲಿಷ್ನಲ್ಲಿ ಒಂದು ಮಾತಿದೆ. ‘Education makes a good man better, but it makes a badman worse’ ಎಂದು. ಇದು ಇಂಗ್ಲಿಷ್ನ ಗಾದೆಯೋ ಅಥವಾ ರೋಮನ್ ತತ್ತ್ವಜ್ಞಾನಿಯ ಹೇಳಿಕೆಯೋ ಎಂಬುದರ ಕುರಿತು ಜಿಜ್ಞಾಸೆ ಇದೆ. ಈ ಮಾತು ಎಷ್ಟು ಜನರಿಗೆ ಅನ್ವಯಿಸುತ್ತದೆ ಎಂಬುದು ವೈಯಕ್ತಿಕ ಅನುಭವಕ್ಕೆ ಬಿಟ್ಟ ವಿಚಾರ. ಆದರೆ, ಆಡಳಿತ ಕ್ಷೇತ್ರದಲ್ಲಿ ಇದು ಬಹಳಷ್ಟು ಜನರಿಗೆ ಅನ್ವಯಿಸುತ್ತದೆ. ಅದನ್ನೇ ಸ್ವಲ್ಪ ವಿಸ್ತರಿಸಿ ಕೆಟ್ಟವರ ಕೈಗೆ ಅಧಿಕಾರ ಸಿಕ್ಕರೆ ಅವರು ಅತೀ ದುಷ್ಟರಾಗುತ್ತಾರೆ. ಒಳ್ಳೆಯವರ ಕೈಗೆ ಅಧಿಕಾರ ಸಿಕ್ಕರೆ ಅವರು ಉತ್ತಮವಾಗಿ ಕಾರ್ಯ ನಿರ್ವ ಹಿಸುತ್ತಾರೆ ಎಂದು ಹೇಳಬಹುದು. ಮುಖ್ಯ ಕಾರ್ಯದರ್ಶಿಗಳ ಹುದ್ದೆಗೆ ಏರುವಷ್ಟು ಪ್ರತಿಭೆ ಇದ್ದವರೂ ಲೋಕಾಯುಕ್ತ ದಾಳಿಗೆ ಒಳಗಾಗು ವಷ್ಟರ ಮಟ್ಟಿಗೆ ಅವ್ಯವಹಾರಗಳಲ್ಲಿ ತೊಡಗಿ ಜೈಲಿಗೆ ಹೋಗುವ ಪರಿಸ್ಥಿತಿ ತಂದುಕೊಳ್ಳುತ್ತಾರೆ. ದೇಶದಲ್ಲೇ ಪ್ರತಿಷ್ಠಿತವಾದ ಐ.ಐ.ಟಿ.ಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ಐ.ಎ.ಎಸ್.ನಲ್ಲಿ ಉತ್ತಮ ಶ್ರೇಣಿಯಲ್ಲಿ ಆಯ್ಕೆಯಾಗಿ ಬಂದವರೂ ಭ್ರಷ್ಟತೆಯಲ್ಲಿ ತೊಡಗಿ, ಸರ್ಕಾರಿ ಆಡಳಿತದ ಸಂಪ್ರದಾಯಗಳನ್ನು ಗಾಳಿಗೆ ತೂರಿ, ಸಂಕಷ್ಟಕ್ಕೆ ಸಿಲುಕುತ್ತಾರೆ. ಬಹಳಷ್ಟು ಜನ ಮೇಧಾವಿ ಎಂಜಿನಿಯರ್ಗಳದು ಕೂಡ ಇದೇ ಹಣೆಬರಹ. ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಈ ರೀತಿ ಅಧಿಕಾರಿಗಳು ಕಾಣಸಿಗುತ್ತಾರೆ. ಬಹಳಷ್ಟು ಜನ ಕಡುಬಡತನದಿಂದ ಬಂದು ಕಷ್ಟದಲ್ಲಿ ಶಿಕ್ಷಣ ಪಡೆದು,...