Posts

Showing posts from October, 2013

ಕಟ್ಟದ ಕೆರೆಗೆ ಮೂರು ಬಾರಿ ಪರಿಹಾರ !

ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. ‘Education makes a good man better, but it makes a badman worse’ ಎಂದು.  ಇದು ಇಂಗ್ಲಿಷ್‌ನ ಗಾದೆಯೋ ಅಥವಾ ರೋಮನ್‌ ತತ್ತ್ವಜ್ಞಾನಿಯ ಹೇಳಿಕೆಯೋ ಎಂಬುದರ ಕುರಿತು ಜಿಜ್ಞಾಸೆ ಇದೆ. ಈ ಮಾತು ಎಷ್ಟು ಜನರಿಗೆ ಅನ್ವಯಿಸುತ್ತದೆ ಎಂಬುದು ವೈಯಕ್ತಿಕ ಅನುಭವಕ್ಕೆ ಬಿಟ್ಟ ವಿಚಾರ. ಆದರೆ, ಆಡಳಿತ ಕ್ಷೇತ್ರದಲ್ಲಿ ಇದು ಬಹಳಷ್ಟು ಜನರಿಗೆ ಅನ್ವಯಿಸುತ್ತದೆ. ಅದನ್ನೇ ಸ್ವಲ್ಪ ವಿಸ್ತರಿಸಿ ಕೆಟ್ಟವರ ಕೈಗೆ ಅಧಿಕಾರ ಸಿಕ್ಕರೆ ಅವರು ಅತೀ ದುಷ್ಟರಾಗುತ್ತಾರೆ. ಒಳ್ಳೆಯವರ ಕೈಗೆ ಅಧಿಕಾರ ಸಿಕ್ಕರೆ ಅವರು ಉತ್ತಮವಾಗಿ ಕಾರ್ಯ ನಿರ್ವ ಹಿಸುತ್ತಾರೆ ಎಂದು ಹೇಳಬಹುದು. ಮುಖ್ಯ ಕಾರ್ಯದರ್ಶಿಗಳ ಹುದ್ದೆಗೆ ಏರುವಷ್ಟು ಪ್ರತಿಭೆ ಇದ್ದವರೂ ಲೋಕಾಯುಕ್ತ ದಾಳಿಗೆ ಒಳಗಾಗು ವಷ್ಟರ ಮಟ್ಟಿಗೆ ಅವ್ಯವಹಾರಗಳಲ್ಲಿ ತೊಡಗಿ ಜೈಲಿಗೆ ಹೋಗುವ ಪರಿಸ್ಥಿತಿ ತಂದುಕೊಳ್ಳುತ್ತಾರೆ. ದೇಶದಲ್ಲೇ ಪ್ರತಿಷ್ಠಿತವಾದ ಐ.ಐ.ಟಿ.ಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ಐ.ಎ.ಎಸ್‌.ನಲ್ಲಿ ಉತ್ತಮ ಶ್ರೇಣಿಯಲ್ಲಿ ಆಯ್ಕೆಯಾಗಿ ಬಂದವರೂ ಭ್ರಷ್ಟತೆಯಲ್ಲಿ ತೊಡಗಿ, ಸರ್ಕಾರಿ ಆಡಳಿತದ ಸಂಪ್ರದಾಯಗಳನ್ನು ಗಾಳಿಗೆ ತೂರಿ, ಸಂಕಷ್ಟಕ್ಕೆ ಸಿಲುಕುತ್ತಾರೆ. ಬಹಳಷ್ಟು ಜನ ಮೇಧಾವಿ ಎಂಜಿನಿಯರ್‌ಗಳದು ಕೂಡ ಇದೇ ಹಣೆಬರಹ. ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಈ ರೀತಿ ಅಧಿಕಾರಿಗಳು ಕಾಣಸಿಗುತ್ತಾರೆ. ಬಹಳಷ್ಟು ಜನ ಕಡುಬಡತನದಿಂದ ಬಂದು ಕಷ್ಟದಲ್ಲಿ ಶಿಕ್ಷಣ ಪಡೆದು,...

TOP TEN National park in India

1. Keoladeo Ghana National Park Bharatpur, Rajasthan Better known as the Bharatpur Bird Sanctuary in Bharatpur, Rajasthan, the Keoladeo Ghana National Park is an ornithologist's paradise. According to its website, the national park is home to over 230 species of birds and was declared a protected sanctuary in 1971. Once the hunting ground for the maharajas of Bharatpur, the park was the venue for the annual duck shoots held in honour of the British viceroys. While the princely states were permitted to shoot after Independence, these rights were revoked after 1972 and a decade later grazing was banned in the park which led to violent clashes between the local communities and the government. The park was declared a World Heritage Site in 1985. 2. Jim Corbett National Park Uttarakhand Probably the most inviting place for nature lovers living in and around Delhi, the Jim Corbett National Park owes its name to the legendary British hunter, conservationist, author...

ಸಾಧನೆ, ಕನಸುಗಳಿಗೆ ಮುಗಿಲೇ ಮಿತಿ ಎಂಬ ಮಕ್ತೌಮ್ ಮಾರ್ಗ

Image
'ಸಾಧ್ಯವಾದರೆ ಆ ಪುಸ್ತಕ ಓದಿ. ನಮಗಾಗಿ, ರಾಜ್ಯದ ಜನತೆಗಾಗಿ ಆ ಕೃತಿಯನ್ನು ಓದಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡು ವಾರಗಳ ಹಿಂದೆ ಒಂದು ಪುಟ್ಟ ಹಾಗೂ ಆಪ್ತ ಸಲಹೆ ನೀಡಿದ್ದೆ. ಆ ಪುಸ್ತಕವನ್ನು ಅವರು ಓದಿದರೋ, ಬಿಟ್ಟರೋ ಗೊತ್ತಿಲ್ಲ. ಒಂದು ವೇಳೆ ಅವರು ಅದನ್ನು ಓದಿದರೆ, ಓದಿದ್ದೇನೆಂದು ಹೇಳಬೇಕಿಲ್ಲ. ಅವರ ಮಾತು, ಕೃತಿ, ಆದ್ಯತೆ, ಚಿಂತನೆ, ಆಲೋಚನೆಗಳೇ ಬದಲಾಗುತ್ತವೆ. ಅದರಲ್ಲಿ ಸಂದೇಹವೇನಿಲ್ಲ. ಮುಖ್ಯಮಂತ್ರಿಯಾದವರಿಗೆ ಪುಸ್ತಕ ಓದಲು, ಬರೆಯಲೂ ಸಮಯ ಸಿಗುವುದಿಲ್ಲ. ಓದಬೇಕೆಂದು ಬಯಸಿದರೂ ಜನ ಬಿಡುವುದಿಲ್ಲ. ಸದಾ ಅವರ ಮನೆಯ ಸುತ್ತಲೂ ನಿಂತಿರುತ್ತಾರೆ. ಮುಖ್ಯಮಂತ್ರಿಯಾದವರಿಗೆ 'ಮನೆಗೆ ಬರಬೇಡಿ' ಎಂದು ಜನರಿಗೆ ಹೇಳಲಾಗುವುದಿಲ್ಲ. ಜನ ಜಂಗುಳಿ, ಕಾರ್ಯಕ್ರಮ, ಭಾಷಣ, ಮೀಟಿಂಗ್, ಗಣ್ಯರ ಭೇಟಿ ನಡುವೆ ಒಂದು ಪುಟ್ಟ ಏಕಾಂತವನ್ನು ಸೃಷ್ಟಿಸಿಕೊಳ್ಳಲಾಗುವುದಿಲ್ಲ. ಈ ಎಲ್ಲ ಸಂಗತಿಗಳು ಗೊತ್ತಿಲ್ಲ ಎಂದಲ್ಲ. ಆದರೂ ತುಸು ಸವುಡು ಮಾಡಿಕೊಂಡು ದುಬೈ ಎಂಬ ಮಾಯಾನಗರಿ, ಆಧುನಿಕ ದೇಶ, ಪ್ರಯೋಗ ನಗರವನ್ನು ಕಟ್ಟಿದ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಬರೆದ My Vision:Challenges in the Race for Excellence ಎಂಬ ಪುಸ್ತಕವನ್ನು ಓದಿ ಎಂದಿದ್ದೆ. ಕಾರಣ ಇಷ್ಟೆ. ಒಂದು ಊರನ್ನು ಹೇಗೆ ಕಟ್ಟಬೇಕು, ಜನರ ಚಿಂತನೆಯನ್ನು ಅಣಿಗೊಳಿಸುವುದು ಹೇಗೆ, ಈ ಕೆಲಸಕ್ಕೆ ಜನರನ್ನು ತೊಡಗಿಸುವುದೆಂತು...

ಸೋತ ಫೈಲಿನ್, ಸಲಾಂ ಹಿಂದುಸ್ಥಾನ್!

Image
ಪ್ರವಾಹ-ದುರಂತಗಳಲ್ಲಿ ನಿರ್ವಹಣೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಸರ್ಕಾರ- ಆಡಳಿತ ವ್ಯವಸ್ಥೆಯನ್ನು ನಾವು ಸಾಕಷ್ಟು ಬಾರಿ ಬಯ್ದುಕೊಂಡಿದ್ದೇವೆ. ಆದರೆ ಮೊನ್ನೆ ಫೈಲಿನ್ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು ಇಚ್ಛಾಶಕ್ತಿ ಇದ್ದರೆ ನಮ್ಮಲ್ಲೂ ಪವಾಡಗಳು ಸಾಧ್ಯ ಎಂಬುದನ್ನು ಸಾಬೀತಾಗಿಸಿದೆ. ನಕಾರಾತ್ಮಕ ಸಂಗತಿಗಳ ವಿಮರ್ಶೆಗೆ ಸಾಕಷ್ಟು ಸಮಯ ಎತ್ತಿಡುವ ನಾವು, ಇಂಥ ಸಕಾರಾತ್ಮಕ ಸಂಗತಿಗಳನ್ನು ಸಂಭ್ರಮಿಸುವುದೂ ಅಗತ್ಯ. ದೇಶವೊಂದರ ಅಂತಃಶಕ್ತಿಯನ್ನು ಪೊರೆಯುವುದಕ್ಕೆ ಇಂಥ ಪ್ರಶಂಸೆ ಪೂರಕ. ಹಾಗೆಂದೇ ರಾಯಿಟರ್ಸ್ ಸುದ್ದಿಸಂಸ್ಥೆಯ ನೀತಾ ಭಲ್ಲಾ ಅವರ ವಿಶ್ಲೇಷಣೆ ಇಲ್ಲಿದೆ. ನೈಸರ್ಗಿಕ ದುರಂತವೊಂದನ್ನು ಎದುರಿಸುವುದಕ್ಕೆ ಸಿದ್ದತೆ ಹೇಗಿರಬೇಕು ಎಂಬ ನಿಟ್ಟಿನಲ್ಲಿ ಮನಮೆಚ್ಚುವ ಕಾರ್ಯಶೈಲಿಯೊಂದು ಅನಾವರಣಗೊಂಡಿದೆ. 2004ರಲ್ಲಿ ದೇಶಕ್ಕೆ ಅಪ್ಪಳಿಸಿದ್ದ ಸುನಾಮಿ ಸುಮಾರು 10 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿತ್ತು. ಆ ವಿದ್ಯಮಾನವೇ ನಂತರದ ವರ್ಷಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸುವುದಕ್ಕೆ ಪ್ರೇರೇಪಿಸಿತು ಎನ್ನುತ್ತಾರೆ ವಿಪತ್ತು ನಿರ್ವಹಣಾ ಪರಿಣತರು ಮತ್ತು ಕಾರ್ಯಕರ್ತರು. ಆಂಧ್ರ ಪ್ರದೇಶ ಹಾಗೂ ಒಡಿಶಾವನ್ನು ಅಪ್ಪಳಿಸಿದ ಫೈಲಿನ್ ಚಂಡಮಾರುತವು ಕಳೆದ 14 ವರ್ಷಗಳಲ್ಲಿ ಭಾರತವು ಎದುರಿಸಿದ್ದ ಅತ್ಯಂತ ಅಪಾಯಕಾರಿ ಆಘಾತ. ಕೃಷಿಭೂಮಿಗಳೆಲ್ಲ ನೀರಿನಲ್ಲಿ ಮುಳುಗಿವೆ. ಮ...

ಸೋಮಾರಿಯ ಕೃಷಿ ಕಥನ

Image
ನನ್ನ ಕಥೆ ಬಿ.ಎನ್.ನಂದೀಶ್ ಬಿ.ಎನ್.ನಂದೀಶ್ ಸ್ವಿಟ್ಜರ್ಲೆಂಡಿನ ಫ್ರಿಕ್ ಎಂಬ ಹಳ್ಳಿಯಲ್ಲಿದ್ದ ಕೃಷಿ ಸಂಶೋಧನಾ ಸಂಸ್ಥೆಯ (ಎಫ್ಐಬಿಎಲ್) ಆಹ್ವಾನದ ಮೇರೆಗೆ ತೆರಳಿದ್ದ ನಾನು, ಸಮೀಪದಲ್ಲಿದ್ದ ಐಷಾರಾಮಿ ಹೋಟೆಲ್‌ನಲ್ಲಿ ವಿಶ್ರಾಂತಿಗೆಂದು ಹಾಗೇ ಕುರ್ಚಿಗೆ ಒರಗಿದಾಗ, ನನ್ನ ಹಳ್ಳಿಯೂ, ನನ್ನನ್ನು ‘ಸೋಮಾರಿ’ ಎಂದು ಮೂದಲಿಸುತ್ತಿದ್ದ ಜನರೂ ನೆನಪಾದರು. ಹತ್ತು ವರ್ಷಗಳ ಅವಧಿಯಲ್ಲಿ ಅನಾಮಧೇಯ ಸ್ಥಿತಿಯಿಂದ ಕೊರಿಯಾ, ಸ್ವಿಟ್ಜರ್ಲೆಂಡ್‌ಗೆ ಕರೆದುಕೊಂಡು ಬಂದ ನನ್ನ ದ್ವಿದಳ ಧಾನ್ಯಕ್ಕೆ ಕೃತಜ್ಞತೆ ಸಲ್ಲಿಸದೇ ಇರಲಿಕ್ಕಾದೀತೆ? ಸ್ನೇಹಿತರು, ರೈತರು ನನ್ನನ್ನು ಕರೆಯುವುದು ‘ಲೆಗ್ಯೂಮ್ ನಂದೀಶ್’ ಎಂದೇ. ಲೆಗ್ಯೂಮ್ ಅಂದರೆ ಮತ್ತೇನಿಲ್ಲ; ಒಂದೇ ಕಾಳು ಎರಡು ಹೋಳಾಗುವ ಧಾನ್ಯ, ಜೋಳ. ನನ್ನ ಕೃಷಿ ವಿಧಾನದಲ್ಲಿ ದ್ವಿದಳ ಧಾನ್ಯದ್ದೇ ದರ್ಬಾರು. ‘ಭತ್ತ, ಅಡಿಕೆ ಬೆಳೆಯುವ ಈತ ಒಂದಿಲ್ಲೊಂದು ಕೆಲಸ ಮಾಡುತ್ತಿರಬೇಕಾಗಿದ್ದನ್ನು ಬಿಟ್ಟು ಹೀಗೆ ದೇಶ ಸುತ್ತುತ್ತಾನಲ್ಲ!’ ಎಂಬ ಜನರ ಮೆಚ್ಚುಗೆ ಹಾಗೂ ಉದ್ಗಾರದ ಹಿಂದೆ ‘ಲೆಗ್ಯೂಮ್’ ಚಮತ್ಕಾರ ಅಡಗಿದೆ. ನಾನೇನೂ ಹೊಸತನ್ನು ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿಯೇ ‘ಲೆಗ್ಯೂಮ್ ಮ್ಯಾಜಿಕ್’ನ ರಹಸ್ಯ ಬಿಚ್ಚಿಡುತ್ತೇನೆ. ನನ್ನದು ಕೃಷಿ ಕುಟುಂಬ. ಏಳನೇ ತರಗತಿವರೆಗೆ ದಾವಣಗೆರೆ ಹಾಗೂ ಅಲ್ಲಿಂದ ಪಿಯುಸಿವರೆಗೆ ಶಿವಮೊಗ್ಗದಲ್ಲಿ ಓದು. ಎಲ್ಲ ಬಿಟ್ಟು 1998ರಲ್ಲಿ ನಮ್ಮ ಹಳ್ಳಿ ಚ...

Religious tension in Pakistan as Muslims dig up Hindu grave

Tue, Oct 08 08:27 AM EDT ISLAMABAD (Reuters) - A crowd of Islamic fundamentalists dug up the grave of a Hindu man in Pakistan, police said on Tuesday, in the latest sign of growing religious tension in the increasingly unstable province of Sindh. Shouting "Allahu Akbar", or "God is greatest", the crowd dug out the body and dragged it through the streets of the southern town of Pangrio in a dispute over the location of the grave. "Tensions are still running high, but we are in control of the situation," district police chief Shaukat Ali Khatian said. "The incident was caused by some clerics of the extremist outfit of Ahle Sunaat Wal Jamaat, but later other Muslims joined in and dug up the body and threw it away." Hindus and Muslims have lived side by side and shared graveyards in Sindh for centuries, but tension has been on the rise recently as extremists make increasingly aggressive inroads into the rural parts of the province. Sin...

ಕನ್ನಡದ ಕಾರ್ಬೆಟ್:ಪರಿಸರ ಪ್ರೇಮಿ ಗಂಗಾಧರ ಕಲ್ಲೂರರ ಕಥೆ

Image
70ಕ್ಕೂ ಹೆಚ್ಚು ಬಾರಿ ಹಿಮಾಲಯ ಸುತ್ತಿದ ಪ್ರೊ. ಗಂಗಾಧರ ಕಲ್ಲೂರು, ದೇಶದ ನಾನಾ ಅರಣ್ಯಗಳ ಬಗ್ಗೆ ಸ್ಪಷ್ಟ ಮತ್ತು ನಿಖರ ಮಾಹಿತಿಗಳ ಕಣಜ. 52ರ ಹರೆಯದಲ್ಲೂ ಇವರದ್ದು ಕುಗ್ಗದ ಉತ್ಸಾಹ. ಯುವಕರನ್ನೆ ನಾಚಿಸುವಂಥ ಚಾರಣ ಪ್ರಿಯ. ಹಾವುಗಳನ್ನು ಕ್ಷಣಾರ್ಧದಲ್ಲೆ ಹಿಡಿದು ಅದರ ಜಾತಕ ಹೇಳುವ ಉರಗ ತಜ್ಞ. 1200ಕ್ಕೂ ಹೆಚ್ಚು ಚಾರಣ (ಟ್ರೆಕ್ಕಿಂಗ್), 70ಕ್ಕೂ ಹೆಚ್ಚು ಬಾರಿ ಹಿಮಾಲಯ ಪ್ರವಾಸ ಕೈಗೊಂಡ ಸಾಧನೆ ಇವರದ್ದು. ಇಂಥ ಅಪರೂಪದ ಸಾಹಸಿ ಧಾರವಾಡದ ಪ್ರೊ. ಗಂಗಾಧರ ಕಲ್ಲೂರು. ಇವರು ಕೇವಲ ಪ್ರವಾಸಿಗ ಅಲ್ಲ. ಹಿಮಾಲಯ ಮತ್ತು ದೇಶದ ವಿವಿಧ ಅಭಯಾರಣ್ಯಗಳ ಬಗ್ಗೆ ಸ್ಪಷ್ಟ ಮತ್ತು ನಿಖರವಾದ ಮಾಹಿತಿ ಹೊಂದಿದ ಮಾಹಿತಿಗಳ ಕಣಜ. ಉತ್ತರ ಕರ್ನಾಟಕ ಭಾಗದಲ್ಲಿ ಚಿರಪರಿಚಿತರಾದ ಕಲ್ಲೂರು, ಪ್ರಾಣಿಪ್ರಿಯರು. 15ನೇ ವರ್ಷದಿಂದಲೇ ಟ್ರೆಕ್ಕಿಂಗ್ ಟ್ರಿಕ್ಸ್ ಕಲಿತವರು. ಅಲ್ಲಿಂದ ಇಲ್ಲಿವರೆಗೆ ಕಾಡು ಸುತ್ತುತ್ತಲೇ ಇದ್ದಾರೆ. 1990ರಲ್ಲಿ ಇವರು ಕೈಗೊಂಡ ಕನ್ಯಾಕುಮಾರಿಯಿಂದ ಹಿಮಾಲಯದ ಗಡವಾಲ್ ವರೆಗಿನ ಸೈಕಲ್ ಪ್ರವಾಸ ಇವುಗಳಲ್ಲೆಲ್ಲ ಅತಿ ವಿಶಿಷ್ಟ ಮತ್ತು ದೊಡ್ಡದಾದ ಪ್ರವಾಸ. ಅದರ ಉದ್ದ ಬರೋಬ್ಬರಿ 72 ಸಾವಿರ ಕಿಲೋಮೀಟರ್! ದಟ್ಟ ಅಭಯಾರಣ್ಯ, ಪಶ್ಚಿಮ ಘಟ್ಟಗಳ ಬೆಟ್ಟ, ಗುಡ್ಡಗಳ ಅತಿ ಕಡಿದಾದ ಕಾಲುದಾರಿ, ಕಲ್ಲು ಬಂಡೆಗಳು ಇವರಿಗೆ ಅತಿ ಸುಲಭ ದಾರಿಗಳು. ಇತ್ತೀಚಿಗೆ ಉತ್ತರ ಭಾರತದಲ್ಲಿ ಜಲ ಪ್ರಳಯದ ಸಂದರ್ಭ ಮಾನಸ ಸರೋವರಕ್ಕೆ 33 ...