ಚೈತನ್ಯ ಚಿಮ್ಮಿಸಿದ ಗ್ರಾಮ ಚೇತನ
ಪಾರಂಪರಿಕ ಕೃಷಿ ವಿಧಾನದಿಂದ ನಷ್ಟ ಅನುಭವಿಸಿ ಕೃಷಿಗೆ ವಿದಾಯ ಹೇಳಿದ್ದ, ಊರಿನ ಜಗಲಿ ಕಟ್ಟೆಯಲ್ಲಿ ಕಾಲಹರಣ ಮಾಡುತ್ತಿದ್ದ, ಕೂಲಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ರೈತಾಪಿ ವರ್ಗದ ಮೊಗದಲ್ಲೀಗ ಸಂತಸದ ಕಳೆ...
ಐವತ್ತು ರೂಪಾಯಿಗಾಗಿ ಪರದಾಡುತ್ತಿದ್ದವರು ಇಂದು ಕುಳಿತಲ್ಲಿಯೇ 50 ಸಾವಿರ ರೂಪಾಯಿ ಸೇರಿಸಬಲ್ಲಷ್ಟು ಶಕ್ತರಾಗಿದ್ದಾರೆ.
ಹೌದು. ಇಂಥದ್ದೊಂದು ಚಮತ್ಕಾರ ನಡೆದಿರುವುದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮತ್ತು ಕಲಘಟಗಿ ತಾಲ್ಲೂಕಿನ 22 ಗ್ರಾಮಗಳಲ್ಲಿ. ಎರಡೂವರೆ ಸಾವಿರಕ್ಕೂ ಮಿಕ್ಕಿದ ರೈತರು ಆರ್ಥಿಕ ಸ್ವಾವಲಂಬಿಗಳಾಗಿ ಹಿರಿಹಿರಿ ಹಿಗ್ಗುತ್ತಿದ್ದಾರೆ. ಇದಕ್ಕೆ ಕಾರಣ ಮಹಾತ್ಮ ಗಾಂಧಿ ಅವರ ಕನಸನ್ನು ನನಸು ಮಾಡಿರುವ ಭಾರತೀಯ ಆಗ್ರೋ ಇಂಡಸ್ಟ್ರೀಸ್ ಫೌಂಡೇಶನ್ (ಬೈಫ್) ಎಂಬ ಸರ್ಕಾರೇತರ ಸಂಸ್ಥೆಯ ಎಂಟು ವರ್ಷಗಳ ಶ್ರಮ. ಅದರ ಫಲವಾಗಿ ಸ್ಥಾಪನೆಗೊಂಡ ‘ಗ್ರಾಮ ಚೇತನ’.
1996–-2004ರವರೆಗೆ ಈ ಸಂಸ್ಥೆ ಇಂಥ ಮಹತ್ತರ ಸಾಧನೆಗಾಗಿ ಹಗಲಿರುಳೂ ಶ್ರಮಿಸಿದೆ, ಶ್ರಮಿಸುತ್ತಿದೆ. ಇದರ ಫಲವಾಗಿ ಇಂದು ರೈತರು ವಿವಿಧ ರೀತಿಯ ಕೃಷಿ ಪದ್ಧತಿ, ಹೈನುಗಾರಿಕೆ, ಮಳೆಯಾಶ್ರಿತ ರೇಷ್ಮೆಕೃಷಿ, ಮಣ್ಣು ಮತ್ತು ನೀರು ಸಂರಕ್ಷಣೆ, ಸಾವಯವ ಕೃಷಿ, ಜನ ಸಂಘಟನೆ, ಎರೆಗೊಬ್ಬರ ತಯಾರಿ ಇತ್ಯಾದಿ ಕೃಷಿ ಚಟುವಟಿಕೆಯಲ್ಲಿ ಸಾಧನೆಯ ಉತ್ತುಂಗ ಏರಿದ್ದಾರೆ.
ರೈತರಿಗೆ ತರಬೇತಿ ಮತ್ತು ಕಲಿಕೆಗೆ ಅವಕಾಶ ಮಾಡಿಕೊಟ್ಟು ಜೀವನೋಪಾಯಕ್ಕೆ ಇಲ್ಲಿ ಚಾಲನೆ ನೀಡಲಾಗಿದೆ. ಕುಟುಂಬದ ಸಂಪನ್ಮೂಲ, ಸ್ಥಳ, ಮಾರುಕಟ್ಟೆಯ ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು ಕುಟುಂಬ ಮಟ್ಟದ ಮೈಕ್ರೋಪ್ಲಾನ್ (ಎಂಎಲ್ಪಿ) ಜಾರಿಗೆ ತರಲಾಗಿದೆ. ಈ ಮೂಲಕ ಅವರು ಕೃಷಿಯಲ್ಲಿ ತೊಡಗುವಂತೆ ಮಾಡಲಾಗಿದೆ.
ಇದರಿಂದ ಎಂಟು ವರ್ಷಗಳ ಅವಧಿಯಲ್ಲಿ ಧಾರವಾಡ ಜಿಲ್ಲೆಯೊಂದರಲ್ಲಿಯೇ 734 ನೀರು ಸಂಗ್ರಹಣ ಗುಂಡಿ ತೋಡಲಾಗಿದೆ. ಸುಮಾರು ಎಂಟು ಲಕ್ಷ ಅರಣ್ಯ ಸಸ್ಯಗಳನ್ನು, ಸುಮಾರು 73 ಸಾವಿರ ತೋಟಗಾರಿಕಾ ಸಸ್ಯಗಳನ್ನು ಬೆಳೆಸಲಾಗಿದೆ. ಈ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಿ, ಮಣ್ಣಿನ ಸವಕಳಿ ಕಡಿಮೆ ಮಾಡುವುದರ ಮೂಲಕ ಫಲವತ್ತತೆ ಕಾಪಾಡಿ ರೈತರ ಆದಾಯಕ್ಕೂ ಹಾದಿ ತೋರಲಾಗಿದೆ. ಮಿಶ್ರ ಬೆಳೆ ವಿಧಾನದ ಮೂಲಕ ರೈತರು ಲಾಭಗಳಿಸಿದ್ದಾರೆ. ರೈತರಿಗೆ ವಿವಿಧ ಮೂಲಗಳಿಂದ ಆದಾಯ ಹೆಚ್ಚಿತಲ್ಲದೇ ಊರಿನಲ್ಲಿ ಕಾಲಹರಣ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಯಿತು. ಜೀವನ ಶೈಲಿಯೂ ಬದಲಾಯಿತು. ಈ ಎಲ್ಲ ಯೋಜನೆಗಳಿಗೂ ಶೇ 100ರಷ್ಟು ಪ್ರೋತ್ಸಾಹಧನ ದೊರೆತಿದೆ.
ಹೊಸ ಕೇಂದ್ರದ ಉಗಮ
ತಮ್ಮ ಬದುಕಿಗೆ ಹೊಸ ಭಾಷೆ ಬರೆದ ‘ಬೈಫ್’ಗೆ ಬೀಳ್ಕೊಡುವ ಇಚ್ಛೆ ರೈತರಿಗೆ ಇರಲಿಲ್ಲ. ಇತರ ರೈತರಿಗೂ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿ ತರಬೇತಿ ಕೇಂದ್ರ ತೆರೆಯುವ ಯೋಚನೆ ಮೂಡಿತು. ಸರ್ವೋದಯ ಮಹಾಸಂಘ 6.5 ಲಕ್ಷ ರೂಪಾಯಿ ಸಹಾಯ ಮಾಡಿದರೆ, ಬೈಫ್ ಸಂಸ್ಥೆ 9.5 ಲಕ್ಷ ರೂಪಾಯಿ ನೀಡಿದೆ. ಸಂಗ್ರಹವಾದ ಹಣದಲ್ಲಿ ‘ಗ್ರಾಮ ಚೇತನ’ ಕೇಂದ್ರ ಸ್ಥಾಪನೆಗೊಂಡಿದೆ.
ಸರ್ವೋದಯ ಮಹಾ ಸಂಘದ ಮೂಲಕ ಆಯ್ದ ಕೆಲವು ಸದಸ್ಯ ಕುಟುಂಬಗಳಿಗೆ ಆರೋಗ್ಯ, ಗೃಹ ಮತ್ತು ವಿದ್ಯಾ ನಿಧಿ ಎಂದು ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಗೊಳಗಾಗುವ ರೋಗಿಗೆ ವರ್ಷದಲ್ಲಿ ಐದು ಸಾವಿರ ರೂಪಾಯಿ, ಸದಸ್ಯರ ಕುಟುಂಬದ ಮಕ್ಕಳ ಉನ್ನತ ವ್ಯಾಸಂಗಕ್ಕೆ 10 ಸಾವಿರದವರೆಗೆ ಧನ ಸಹಾಯ ನೀಡಲಾಗುತ್ತಿದೆ. ಮನೆ ನಿರ್ಮಿಸಲು ಮುಂದಾಗುವ ಕುಟುಂಬಕ್ಕೆ 5ರಿಂದ 15 ಸಾವಿರ ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ.
ತರಬೇತಿ ಕೇಂದ್ರದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ, ತರಗತಿ ನಡೆಸಲು ಕೇಂದ್ರಗಳಿದ್ದು, ಇಲ್ಲಿ ಬಂದು ಉಳಿದುಕೊಳ್ಳುವವರು ಹಣ ಪಾವತಿಸಬೇಕು. ಸ್ವಸಹಾಯ ಸಂಘದ ಪುಸ್ತಕಗಳ ಮಾರಾಟ, ಮಾವು ಮತ್ತು ಸಪೋಟ ಕಾಯಿಗಳನ್ನು ರೈತರಿಂದ ಖರೀದಿಸಿ ಮಾರಾಟ ಮಾಡುವುದು, ಹುಲ್ಲು ಮಾರಾಟ, ಸಿರಿ ಧಾನ್ಯಗಳ ಮಾರಾಟ, ಎರೆ ಹುಳ ಗೊಬ್ಬರ ಮಾರಾಟ, ತಳಿ ಅಭಿವೃದ್ಧಿ ಕೇಂದ್ರದ ಮೂಲಕ ಬರುವ ಹಣದಿಂದ ತರಬೇತಿ ಸಂಸ್ಥೆ ನಡೆಸಲಾಗುತ್ತಿದೆ.
ಪ್ರತಿ ವರ್ಷ ಗಿಡಗಳನ್ನು ನೆಡುವ ಮೂಲಕ ಹಸಿರು ಹಬ್ಬ ಆಚರಿಸಲಾಗುತ್ತಿದೆ. ತಾವೇ ತಯಾರಿಸಿದ ಬಗೆ ಬಗೆಯ ಆಹಾರಗಳನ್ನು ಹಂಚಿ ತಿನ್ನುವ ಸ್ನೇಹದ ಜಾತ್ರೆ, ಹಸುಗಳ ಪ್ರದರ್ಶನ ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಈ ಗ್ರಾಮಗಳ ರೈತರನ್ನು ಬೆಸೆಯುವ ಕೆಲಸ ನಡೆಯುತ್ತಿದೆ.
ಸಂಪರ್ಕಕ್ಕೆ ಎನ್.ಯು.ಬುಲ್ಲಾ 9980160819.
ಸಂಘದ ಹುಟ್ಟು
‘ಮೊದಲಿಗೆ ಈ ಗ್ರಾಮಗಳ ಜನತೆ ಸಂಸ್ಥೆಯ ಅಧಿಕಾರಿಗಳನ್ನು ನಂಬುತ್ತಲೇ ಇರಲಿಲ್ಲ. ತಮ್ಮ ಜೀವನ ಸುಧಾರಿಸಲು ಬಂದಿರುವುದಾಗಿ ತಿಳಿಸಿದರೂ ಜನರು ಅದಕ್ಕೆ ಸ್ಪಂದಿಸುತ್ತಿರಲಿಲ್ಲ. ಊರಿನ ಶಾಲೆ ಮತ್ತು ಜಗಲಿ ಕಟ್ಟೆ ಬಳಿ ಅಡುಗೆ ಮಾಡಿಕೊಂಡು ಅದೆಷ್ಟೋ ದಿನ ಕಳೆದಿದ್ದೇವೆ. ನಂತರ ಎಲ್ಲರೂ ನಮ್ಮ ಮಾತನ್ನು ನಂಬಿದರು’ ಎಂದು ಆರಂಭಿಕ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಸಂಸ್ಥೆಯ ಜೊತೆ ದುಡಿದಿರುವ ರೈತ ಬಿ.ಕೆ. ಹಿರೇಮಠ.
‘ಆರ್ಥಿಕವಾಗಿ ಹಿಂದುಳಿದವರನ್ನು ಸಬಲರನ್ನಾಗಿಸುವ ಉದ್ದೇಶ ನಮ್ಮದಾಗಿತ್ತು. ಇದಕ್ಕಾಗಿ ಪ್ರತಿ ಕುಟುಂಬದಿಂದ ಒಬ್ಬರಂತೆ 1,0-15 ಮಂದಿಯನ್ನೊಳಗೊಂಡ ಸ್ವ ಸಹಾಯ ಸಂಘ ಸ್ಥಾಪಿಸಿದೆವು. ಇದರ ಜೊತೆ 22 ಗ್ರಾಮಗಳಲ್ಲಿ ಮಹಿಳಾ ಮತ್ತು ಪುರುಷರ ಸಂಘಗಳು, 161 ಸ್ವಸಹಾಯ ಸಂಘಗಳು ರಚನೆಗೊಂಡವು. ಪ್ರತಿ ಗ್ರಾಮದ ಸ್ವಸಹಾಯ ಸಂಘಗಳ ಉಸ್ತುವಾರಿಗಾಗಿ ‘ಗ್ರಾಮ ವಿಕಾಸ ಸಮಿತಿ’ ರಚಿಸಲಾಯಿತು. ಇವುಗಳ ಮೇಲುಸ್ತುವಾರಿಗಾಗಿ ‘ಸರ್ವೋದಯ ಮಹಾಸಂಘ’ ಜನ್ಮತಾಳಿತು ಎನ್ನುವ ಬೈಫ್ ಸಂಯೋಜಕ ಎನ್.ಯು. ಬುಲ್ಲಾ, ರಾಜ್ಯದ ಮಟ್ಟಿಗೆ ರೈತರಿಂದಲೇ ಸ್ಥಾಪಿಸಲ್ಪಟ್ಟ ಸಹಕಾರಿ ಸಂಘ ಇದೇ ಮೊದಲು ಎನ್ನುತ್ತಾರೆ.
ಕೃಪೆ:ಪ್ರಜಾವಾಣಿ
ಪಾರಂಪರಿಕ ಕೃಷಿ ವಿಧಾನದಿಂದ ನಷ್ಟ ಅನುಭವಿಸಿ ಕೃಷಿಗೆ ವಿದಾಯ ಹೇಳಿದ್ದ, ಊರಿನ ಜಗಲಿ ಕಟ್ಟೆಯಲ್ಲಿ ಕಾಲಹರಣ ಮಾಡುತ್ತಿದ್ದ, ಕೂಲಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ರೈತಾಪಿ ವರ್ಗದ ಮೊಗದಲ್ಲೀಗ ಸಂತಸದ ಕಳೆ...
ಐವತ್ತು ರೂಪಾಯಿಗಾಗಿ ಪರದಾಡುತ್ತಿದ್ದವರು ಇಂದು ಕುಳಿತಲ್ಲಿಯೇ 50 ಸಾವಿರ ರೂಪಾಯಿ ಸೇರಿಸಬಲ್ಲಷ್ಟು ಶಕ್ತರಾಗಿದ್ದಾರೆ.
ಹೌದು. ಇಂಥದ್ದೊಂದು ಚಮತ್ಕಾರ ನಡೆದಿರುವುದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮತ್ತು ಕಲಘಟಗಿ ತಾಲ್ಲೂಕಿನ 22 ಗ್ರಾಮಗಳಲ್ಲಿ. ಎರಡೂವರೆ ಸಾವಿರಕ್ಕೂ ಮಿಕ್ಕಿದ ರೈತರು ಆರ್ಥಿಕ ಸ್ವಾವಲಂಬಿಗಳಾಗಿ ಹಿರಿಹಿರಿ ಹಿಗ್ಗುತ್ತಿದ್ದಾರೆ. ಇದಕ್ಕೆ ಕಾರಣ ಮಹಾತ್ಮ ಗಾಂಧಿ ಅವರ ಕನಸನ್ನು ನನಸು ಮಾಡಿರುವ ಭಾರತೀಯ ಆಗ್ರೋ ಇಂಡಸ್ಟ್ರೀಸ್ ಫೌಂಡೇಶನ್ (ಬೈಫ್) ಎಂಬ ಸರ್ಕಾರೇತರ ಸಂಸ್ಥೆಯ ಎಂಟು ವರ್ಷಗಳ ಶ್ರಮ. ಅದರ ಫಲವಾಗಿ ಸ್ಥಾಪನೆಗೊಂಡ ‘ಗ್ರಾಮ ಚೇತನ’.
1996–-2004ರವರೆಗೆ ಈ ಸಂಸ್ಥೆ ಇಂಥ ಮಹತ್ತರ ಸಾಧನೆಗಾಗಿ ಹಗಲಿರುಳೂ ಶ್ರಮಿಸಿದೆ, ಶ್ರಮಿಸುತ್ತಿದೆ. ಇದರ ಫಲವಾಗಿ ಇಂದು ರೈತರು ವಿವಿಧ ರೀತಿಯ ಕೃಷಿ ಪದ್ಧತಿ, ಹೈನುಗಾರಿಕೆ, ಮಳೆಯಾಶ್ರಿತ ರೇಷ್ಮೆಕೃಷಿ, ಮಣ್ಣು ಮತ್ತು ನೀರು ಸಂರಕ್ಷಣೆ, ಸಾವಯವ ಕೃಷಿ, ಜನ ಸಂಘಟನೆ, ಎರೆಗೊಬ್ಬರ ತಯಾರಿ ಇತ್ಯಾದಿ ಕೃಷಿ ಚಟುವಟಿಕೆಯಲ್ಲಿ ಸಾಧನೆಯ ಉತ್ತುಂಗ ಏರಿದ್ದಾರೆ.
ರೈತರಿಗೆ ತರಬೇತಿ ಮತ್ತು ಕಲಿಕೆಗೆ ಅವಕಾಶ ಮಾಡಿಕೊಟ್ಟು ಜೀವನೋಪಾಯಕ್ಕೆ ಇಲ್ಲಿ ಚಾಲನೆ ನೀಡಲಾಗಿದೆ. ಕುಟುಂಬದ ಸಂಪನ್ಮೂಲ, ಸ್ಥಳ, ಮಾರುಕಟ್ಟೆಯ ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು ಕುಟುಂಬ ಮಟ್ಟದ ಮೈಕ್ರೋಪ್ಲಾನ್ (ಎಂಎಲ್ಪಿ) ಜಾರಿಗೆ ತರಲಾಗಿದೆ. ಈ ಮೂಲಕ ಅವರು ಕೃಷಿಯಲ್ಲಿ ತೊಡಗುವಂತೆ ಮಾಡಲಾಗಿದೆ.
ಇದರಿಂದ ಎಂಟು ವರ್ಷಗಳ ಅವಧಿಯಲ್ಲಿ ಧಾರವಾಡ ಜಿಲ್ಲೆಯೊಂದರಲ್ಲಿಯೇ 734 ನೀರು ಸಂಗ್ರಹಣ ಗುಂಡಿ ತೋಡಲಾಗಿದೆ. ಸುಮಾರು ಎಂಟು ಲಕ್ಷ ಅರಣ್ಯ ಸಸ್ಯಗಳನ್ನು, ಸುಮಾರು 73 ಸಾವಿರ ತೋಟಗಾರಿಕಾ ಸಸ್ಯಗಳನ್ನು ಬೆಳೆಸಲಾಗಿದೆ. ಈ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಿ, ಮಣ್ಣಿನ ಸವಕಳಿ ಕಡಿಮೆ ಮಾಡುವುದರ ಮೂಲಕ ಫಲವತ್ತತೆ ಕಾಪಾಡಿ ರೈತರ ಆದಾಯಕ್ಕೂ ಹಾದಿ ತೋರಲಾಗಿದೆ. ಮಿಶ್ರ ಬೆಳೆ ವಿಧಾನದ ಮೂಲಕ ರೈತರು ಲಾಭಗಳಿಸಿದ್ದಾರೆ. ರೈತರಿಗೆ ವಿವಿಧ ಮೂಲಗಳಿಂದ ಆದಾಯ ಹೆಚ್ಚಿತಲ್ಲದೇ ಊರಿನಲ್ಲಿ ಕಾಲಹರಣ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಯಿತು. ಜೀವನ ಶೈಲಿಯೂ ಬದಲಾಯಿತು. ಈ ಎಲ್ಲ ಯೋಜನೆಗಳಿಗೂ ಶೇ 100ರಷ್ಟು ಪ್ರೋತ್ಸಾಹಧನ ದೊರೆತಿದೆ.
ಹೊಸ ಕೇಂದ್ರದ ಉಗಮ
ತಮ್ಮ ಬದುಕಿಗೆ ಹೊಸ ಭಾಷೆ ಬರೆದ ‘ಬೈಫ್’ಗೆ ಬೀಳ್ಕೊಡುವ ಇಚ್ಛೆ ರೈತರಿಗೆ ಇರಲಿಲ್ಲ. ಇತರ ರೈತರಿಗೂ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿ ತರಬೇತಿ ಕೇಂದ್ರ ತೆರೆಯುವ ಯೋಚನೆ ಮೂಡಿತು. ಸರ್ವೋದಯ ಮಹಾಸಂಘ 6.5 ಲಕ್ಷ ರೂಪಾಯಿ ಸಹಾಯ ಮಾಡಿದರೆ, ಬೈಫ್ ಸಂಸ್ಥೆ 9.5 ಲಕ್ಷ ರೂಪಾಯಿ ನೀಡಿದೆ. ಸಂಗ್ರಹವಾದ ಹಣದಲ್ಲಿ ‘ಗ್ರಾಮ ಚೇತನ’ ಕೇಂದ್ರ ಸ್ಥಾಪನೆಗೊಂಡಿದೆ.
ಸರ್ವೋದಯ ಮಹಾ ಸಂಘದ ಮೂಲಕ ಆಯ್ದ ಕೆಲವು ಸದಸ್ಯ ಕುಟುಂಬಗಳಿಗೆ ಆರೋಗ್ಯ, ಗೃಹ ಮತ್ತು ವಿದ್ಯಾ ನಿಧಿ ಎಂದು ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಗೊಳಗಾಗುವ ರೋಗಿಗೆ ವರ್ಷದಲ್ಲಿ ಐದು ಸಾವಿರ ರೂಪಾಯಿ, ಸದಸ್ಯರ ಕುಟುಂಬದ ಮಕ್ಕಳ ಉನ್ನತ ವ್ಯಾಸಂಗಕ್ಕೆ 10 ಸಾವಿರದವರೆಗೆ ಧನ ಸಹಾಯ ನೀಡಲಾಗುತ್ತಿದೆ. ಮನೆ ನಿರ್ಮಿಸಲು ಮುಂದಾಗುವ ಕುಟುಂಬಕ್ಕೆ 5ರಿಂದ 15 ಸಾವಿರ ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ.
ತರಬೇತಿ ಕೇಂದ್ರದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ, ತರಗತಿ ನಡೆಸಲು ಕೇಂದ್ರಗಳಿದ್ದು, ಇಲ್ಲಿ ಬಂದು ಉಳಿದುಕೊಳ್ಳುವವರು ಹಣ ಪಾವತಿಸಬೇಕು. ಸ್ವಸಹಾಯ ಸಂಘದ ಪುಸ್ತಕಗಳ ಮಾರಾಟ, ಮಾವು ಮತ್ತು ಸಪೋಟ ಕಾಯಿಗಳನ್ನು ರೈತರಿಂದ ಖರೀದಿಸಿ ಮಾರಾಟ ಮಾಡುವುದು, ಹುಲ್ಲು ಮಾರಾಟ, ಸಿರಿ ಧಾನ್ಯಗಳ ಮಾರಾಟ, ಎರೆ ಹುಳ ಗೊಬ್ಬರ ಮಾರಾಟ, ತಳಿ ಅಭಿವೃದ್ಧಿ ಕೇಂದ್ರದ ಮೂಲಕ ಬರುವ ಹಣದಿಂದ ತರಬೇತಿ ಸಂಸ್ಥೆ ನಡೆಸಲಾಗುತ್ತಿದೆ.
ಪ್ರತಿ ವರ್ಷ ಗಿಡಗಳನ್ನು ನೆಡುವ ಮೂಲಕ ಹಸಿರು ಹಬ್ಬ ಆಚರಿಸಲಾಗುತ್ತಿದೆ. ತಾವೇ ತಯಾರಿಸಿದ ಬಗೆ ಬಗೆಯ ಆಹಾರಗಳನ್ನು ಹಂಚಿ ತಿನ್ನುವ ಸ್ನೇಹದ ಜಾತ್ರೆ, ಹಸುಗಳ ಪ್ರದರ್ಶನ ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಈ ಗ್ರಾಮಗಳ ರೈತರನ್ನು ಬೆಸೆಯುವ ಕೆಲಸ ನಡೆಯುತ್ತಿದೆ.
ಸಂಪರ್ಕಕ್ಕೆ ಎನ್.ಯು.ಬುಲ್ಲಾ 9980160819.
ಸಂಘದ ಹುಟ್ಟು
‘ಮೊದಲಿಗೆ ಈ ಗ್ರಾಮಗಳ ಜನತೆ ಸಂಸ್ಥೆಯ ಅಧಿಕಾರಿಗಳನ್ನು ನಂಬುತ್ತಲೇ ಇರಲಿಲ್ಲ. ತಮ್ಮ ಜೀವನ ಸುಧಾರಿಸಲು ಬಂದಿರುವುದಾಗಿ ತಿಳಿಸಿದರೂ ಜನರು ಅದಕ್ಕೆ ಸ್ಪಂದಿಸುತ್ತಿರಲಿಲ್ಲ. ಊರಿನ ಶಾಲೆ ಮತ್ತು ಜಗಲಿ ಕಟ್ಟೆ ಬಳಿ ಅಡುಗೆ ಮಾಡಿಕೊಂಡು ಅದೆಷ್ಟೋ ದಿನ ಕಳೆದಿದ್ದೇವೆ. ನಂತರ ಎಲ್ಲರೂ ನಮ್ಮ ಮಾತನ್ನು ನಂಬಿದರು’ ಎಂದು ಆರಂಭಿಕ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಸಂಸ್ಥೆಯ ಜೊತೆ ದುಡಿದಿರುವ ರೈತ ಬಿ.ಕೆ. ಹಿರೇಮಠ.
‘ಆರ್ಥಿಕವಾಗಿ ಹಿಂದುಳಿದವರನ್ನು ಸಬಲರನ್ನಾಗಿಸುವ ಉದ್ದೇಶ ನಮ್ಮದಾಗಿತ್ತು. ಇದಕ್ಕಾಗಿ ಪ್ರತಿ ಕುಟುಂಬದಿಂದ ಒಬ್ಬರಂತೆ 1,0-15 ಮಂದಿಯನ್ನೊಳಗೊಂಡ ಸ್ವ ಸಹಾಯ ಸಂಘ ಸ್ಥಾಪಿಸಿದೆವು. ಇದರ ಜೊತೆ 22 ಗ್ರಾಮಗಳಲ್ಲಿ ಮಹಿಳಾ ಮತ್ತು ಪುರುಷರ ಸಂಘಗಳು, 161 ಸ್ವಸಹಾಯ ಸಂಘಗಳು ರಚನೆಗೊಂಡವು. ಪ್ರತಿ ಗ್ರಾಮದ ಸ್ವಸಹಾಯ ಸಂಘಗಳ ಉಸ್ತುವಾರಿಗಾಗಿ ‘ಗ್ರಾಮ ವಿಕಾಸ ಸಮಿತಿ’ ರಚಿಸಲಾಯಿತು. ಇವುಗಳ ಮೇಲುಸ್ತುವಾರಿಗಾಗಿ ‘ಸರ್ವೋದಯ ಮಹಾಸಂಘ’ ಜನ್ಮತಾಳಿತು ಎನ್ನುವ ಬೈಫ್ ಸಂಯೋಜಕ ಎನ್.ಯು. ಬುಲ್ಲಾ, ರಾಜ್ಯದ ಮಟ್ಟಿಗೆ ರೈತರಿಂದಲೇ ಸ್ಥಾಪಿಸಲ್ಪಟ್ಟ ಸಹಕಾರಿ ಸಂಘ ಇದೇ ಮೊದಲು ಎನ್ನುತ್ತಾರೆ.
ಕೃಪೆ:ಪ್ರಜಾವಾಣಿ
Comments
Post a Comment