Posts

ಚುಕ್ಕಿಗಳಂಥ ಮಿನುಗು ಕತೆಗಳಲ್ಲಿ ಆಗಸದಗಲ ನೀತಿ!

Image
- ವಿಶ್ವೇಶ್ವರ ಭಟ್ ಜೀವನವೆಂಬುದು ನೀವು ಯಾವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಬಿಸಿಲಿನ ಝಳದೊಂದಿಗೆ ಚುನಾವಣೆಯ ಕಾವೂ ಸೇರಿಕೊಂಡಿದೆ. ರಾಜಕಾರಣಿಗಳೆಲ್ಲ ನಿಮ್ಮ ಮನೆ ಬಾಗಿಲಲ್ಲಿ ಜಮಾಯಿಸಿ ತಮ್ಮ ತಮ್ಮ ಕತೆ ಹೇಳುವ, ಕನಸು ತೋರಿಸುವ ಸಮಯ. ಇವರದ್ದೆಲ್ಲಾ ಕತೆ ಯಾರಿಗೆ ಬೇಕಿದೆ ಎಂಬ ಪ್ರಶ್ನೆ ಥಟ್ಟನೆ ನಿಮ್ಮ ಮನದಲ್ಲಿ ಎದ್ದರೆ ಅದಕ್ಕೆ ನನ್ನ ಅನುಮೋದನೆಯೂ ಇದೆ. ಹಾಗೆಂದೇ ಇಲ್ಲಿ ಬೇರೆಯದೇ ಹರವಿನ ಮೂರು ಕತೆಗಳ ಕೈ ಜಗ್ಗಿದ್ದೇನೆ. -- ಪ್ರಯಾಣಿಕರ ದೋಣಿಯೊಂದು ಬಿರುಗಾಳಿಗೆ ಸಿಲುಕಿ ಛಿದ್ರವಾಯಿತು. ಕೊನೆಯಲ್ಲಿ ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಸಮೀಪದಲ್ಲೇ ಇದ್ದ ಚಿಕ್ಕ ದ್ವೀಪವೊಂದರತ್ತ ಈಜಿ ಬದುಕುಳಿದರು. ಅವರಿಬ್ಬರೂ ಮಿತ್ರರೇ! ಮುಂದೇನು ಮಾಡಬೇಕು ಎನ್ನುವುದು ತೋಚದೆ ದೇವರಿಗೆ ಮೊರೆ ಹೋಗುವುದೇ ಕೊನೆಯ ದಾರಿ ಎಂದವರು ನಿಶ್ಚಯಿಸಿದರು. ಆದರೆ ಯಾರ ಪ್ರಾರ್ಥನೆಗೆ ದೇವರು ಬೇಗ ಓಗೊಡುತ್ತಾನೆ ಎಂಬುದನ್ನು ಪರೀಕ್ಷಿಸಲು ಇಬ್ಬರೂ ದ್ವೀಪದ ವಿರುದ್ಧ ದಿಕ್ಕುಗಳಲ್ಲಿ ವಾಸಿಸಬೇಕೆಂದು ನಿರ್ಧರಿಸಿ, ಅದರಂತೆಯೇ ದೂರವಾದರು. ಅವರು ಮೊದಲು ಪ್ರಾರ್ಥಿಸಿದ್ದು ಆಹಾರಕ್ಕಾಗಿ. ಮರುದಿನ ಬೆಳಗ್ಗೆ ಮೊದಲನೇ ವ್ಯಕ್ತಿ ಇದ್ದ ತುಸು ದೂರದಲ್ಲೇ ಹಣ್ಣು ತುಂಬಿದ ಮರವೊಂದು ಬೆಳೆದು ನಿಂತಿತ್ತು. ಆದರೆ...

ಕಷ್ಟಗಳ ದೀವಾರ್ ಕೆಡವಿ ಸುಖದ ಸೌಧ ಕಟ್ಟಿದ ದತ್ತಾ!

Image
ಭಾವತೀಯನ - ಎ.ಆರ್.ಮಣಿಕಾಂತ್ ಕೇವಲ ಸೆಕೆಂಡ್ ಪಿಯುಸಿ ಓದಿರುವ ಸುದೀಪ್ ದತ್ತಾ, 600 ಎಂಬಿಎ - ಬಿಇ ಪದವೀಧರರಿಗೆ ಕೆಲಸ ನೀಡಿದ್ದಾನೆ... ಇದು 1989ರ ಮಾತು. ಕೋಲ್ಕತಾ ಸಮೀಪದ ಹಳ್ಳಿಯವನಾದ ಸುದೀಪ್ ದತ್ತಾ ಎಂಬ 17 ವರ್ಷದ ಹುಡುಗ, ಪುಟ್ಟ ಲಗೇಜಿನೊಂದಿಗೆ ರೈಲು ಹತ್ತಿ ಮುಂಬಯಿಗೆ ಬಂದ. ಹೊಟ್ಟೆಪಾಡಿಗೆ ಯಾವುದಾದರೂ ಕೆಲಸ ಹುಡುಕುವುದು ಅವನ ಉದ್ದೇಶವಾಗಿತ್ತು. ಮುಂಬಯಿಯಲ್ಲಿ ಅವನಿಗೆ ಸ್ನೇಹಿತರಿರಲಿಲ್ಲ. ಬಂಧುಗಳಿರಲಿಲ್ಲ. ಗಾಡ್‌ಫಾದರ್‌ಗಳೂ ಇರಲಿಲ್ಲ. ಹಾಗಾಗಿ, ಮೊದಲ ಎರಡು ವರ್ಷ ಥೇಟ್ ಭಿಕ್ಷುಕರ ಥರಾ ಬದುಕಿಬಿಟ್ಟ. ಬಾಡಿಗೆ ಮನೆ ಮಾಡುವಂಥ ಆರ್ಥಿಕ ಚೈತನ್ಯವಿಲ್ಲದ ಕಾರಣದಿಂದ, ತಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯ ಒಂದು ಮೂಲೆಯಲ್ಲಿ ಮಲಗುತ್ತಿದ್ದ. ಸಂಬಳದ ಹಣ ಬೇಗನೇ ಮುಗಿದು ಹೋದಾಗ, ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡ. ಅಂಥವನು ಇವತ್ತು, ಅದೇ ಮುಂಬಯಿಯಲ್ಲಿ, ವರ್ಷಕ್ಕೆ 1000 ಕೋಟಿ ರೂ. ವಹಿವಾಟು ನಡೆಸುವ ಕಂಪನಿಯೊಂದರ 'ಬಾಸ್‌' ಆಗಿದ್ದಾನೆ. ದೇಶದ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಜಾಗ ಪಡೆದುಕೊಂಡಿದ್ದಾನೆ. ನಂಬೋದೇ ಕಷ್ಟ ಎಂಬಂತಿರುವ ತಮ್ಮ ಬದುಕಿನ ಸಕ್ಸಸ್ ಸ್ಟೋರಿಯನ್ನು ಸದ್ಯ ಹಾಂಕಾಂಗ್ ಪ್ರವಾಸದಲ್ಲಿರುವ ಸುದೀಪ್ ದತ್ತಾ ಅವರೇ ವಿವರಿಸಿದ್ದು ಹೀಗೆ: ಕೋಲ್ಕೊತಾಗೆ ಹತ್ತಿರವಿರುವ ದುರ್ಗಾಪುರ ನನ್ನ ಹುಟ್ಟೂರು. ಅಲ್ಲಿನ ಹಿಂದೂಸ್ತಾನ್ ಫರ್ಟಿಲೈಸರ್ ಕಂಪನಿಯಲ್ಲಿ ನಮ್ಮ ತಂದೆ ಸೆಕ್ಯೂರಿಟಿ ಗಾ...

One Village. 60 Millionaires. The Miracle Of Hiware Bazar

Image
Ramesh Menon  reports on a village in Maharashtra that witnessed an exodus after a severe drought in 1972, but did an amazing turnaround CAN A  poverty-ridden village where alcoholism and crime are rampant turn into a showpiece of change and prosperity? Seems highly unlikely. In Hiware Bazar in Ahmednagar district of Maharashtra, however, you will see such a miracle in progress. Hiware Bazar conjures up images of a bustling marketplace, but a few years ago, it was one of the most drought-prone villages of Maharashtra. Today, the rich and prosperous village is a shining example of how sustainable development and change can be brought about with common sense and determination. In 1995, the monthly per capita income was around Rs 830. Now, it is Rs 30,000. The village, which has 235 families and a population of around 1,250, now also boasts of 60 millionaires. The cement houses along well-planned, clean roads are pinkish brown. There is a sense of discipline and order...

ಕಡು ಬಡ ಗ್ರಾಮ ಇಂದು ಭೂ ಲೋಕದ ಸ್ವರ್ಗ!

Image
ಹಿವರೆ ಬಾಜಾರ್, ಅಹಮದನಗರ, ಮಾ.15: ಆ ಗ್ರಾಮ ಇಂದು ಭೂ ಲೋಕದ ಸ್ವರ್ಗವಾಗಿದೆ. ಆದರೆ ಸುಮಾರು ಮೂರು ದಶಕಗಳ ಹಿಂದೆ ಅದು ಅಪರಾಧ, ಮದ್ಯಪಾನ, ಬರ ಭೂಷಣವಾಗಿತ್ತು. 1989ರಲ್ಲಿ ಪೋಪಟರಾವ ಪವಾರ ಎಂಬ ಸ್ನಾತಕೋತ್ತರ ಪದವೀಧರ ಗ್ರಾಮದ ಮುಖ್ಯಸ್ಥನಾಗಿ ವಾಪಸಾಗಿ ಜಾದು ಮಾಡಿದ ನೋಡಿ. ಅಲ್ಲೀಗ ಹಸಿರು ನಳನಳಿಸುತ್ತಿದೆ. ಜೀವಂತಿಕೆ ಪುಟಿಯುತ್ತಿದೆ. ಈ ಗ್ರಾಮಕ್ಕೆ ಒಬ್ಬೇ ಒಬ್ಬ ವೈದ್ಯನೂ ಇಲ್ಲ. ಆದರೆ 32 ಮಂದಿ MBBS ಮಾಡುತ್ತಿದ್ದಾರೆ! ಯುವಜನತೆಯ ಕೈಕೆಸರಾದರೆ... ವಯೋಸಹಜವಾಗಿ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡಿದ್ದ ಪೋಪತರಾವ್ ಪವಾರ್ ಆತನೇ ಹೇಳುವಂತೆ ಅಂದು ಗ್ರಾಮಕ್ಕೆ ಮರಳದಿದ್ದರೆ ಅಬ್ಬಬ್ಬಾ ಅಂದರೆ ಒಬ್ಬ ರಣಜಿ ಆಟಗಾರನಾಗಿರುತ್ತಿದನಂತೆ! ಅಥವಾ ಶಿಕ್ಷಣ ಪೂರೈಸಿದ ಮೇಲೆ ವೈಟ್ ಕಾಲರ್ ಜಾಬ್ ಗಿಟ್ಟಿಸಿ, ನಾನು ನನ್ನದು ಎಂದು ಒಂದು ಕುಟುಂಬವನ್ನು ಪೋಷಿಸಬಲ್ಲವನಾಗಿರುತ್ತಿದ್ದ. ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಹಿವರೆ ಬಾಜಾರ್ ಎಂವುದೇ ಈ ಆದರ್ಶ ಗ್ರಾಮ. ಕೃಷಿ ನೀರಾವರಿ ಯೋಜನೆಗಳ ಜತೆಗೆ ಕೆಲ ಜಲ ಸಂಪನ್ಮೂಲ ಯೋಜನೆಗಳನ್ನು ಸಾವಧಾನವಾಗಿ ಕಾರ್ಯಗತಗೊಳಿಸಲಾಗಿದೆ. ಮಳೆ ಕೊಯ್ಲಿಗೆ ಒತ್ತುಕೊಟ್ಟು 52 ಮಣ್ಣು ಕುಂಟೆಗಳು, 32 ಕಲ್ಲು ಕುಂಟೆಗಳು, 9 ಚೆಕ್ ಡ್ಯಾಂಗಳನ್ನು ಗ್ರಾಮಸ್ಥರಿಂದಲೇ ನಿರ್ಮಿಸಿದ. ಈ ಮಧ್ಯೆ, ಗ್ರಾಮದಲ್ಲಿ ಒಂದಾನಂತರ ಒಂದರಂತೆ ತಲೆಯೆತ್ತುತ್ತಿದ್ದ 22 ಸಾರಾಯಿ ಅಂಗಡಿಗಳ ಬಾಗಿಲು ಮುಚ್ಚಿಸಿದ. ರೈತರಿಗೆ ಸಕಾಲಕ್ಕೆ ಸಾಲ ದಕ್ಕುವ...

ಇವಳೂ ನಿರ್ಭಯಾ!

Image
ಪೊನ್ನಂಪೇಟೆಯಿಂದ ಕಾಮಾಟಿಪುರಕ್ಕೆ! ಹರೆಯದ ಆಟಗಳು ಎಂಥ ದುಃಖದ ದಡಕ್ಕೆ ಕೊಂಡೊಯ್ದು ಬಿಸಾಕುತ್ತದೆ ಎಂಬುದಕ್ಕೆ ಈ ಕಥೆ ಸಾಕ್ಷಿ. ಅವತ್ತು ಮಣ್ಣಲ್ಲಿ ಮಣ್ಣಾದ ಹೆಣ್ಣುಮಗಳು ನೀತಾ, ದೆಹಲಿಯಲ್ಲಿ ಅತ್ಯಾಚಾರಗೊಂಡ 'ನಿರ್ಭಯಾ'ಳನ್ನೂ ಮೀರಿ ನಿಲ್ಲುತ್ತಾಳೆ. ಈ ಶೋಷಣೆಯನ್ನು ಕೊಂದು ಹಾಕಲು ಯಾವ ಪಾಷಣವಿದೆ? ಅದು ಹಸಿರನ್ನು ಹೊದ್ದು ನಿಂತ ಕೊಡಗು. ಈ ಕಾಫಿ ಕಣಿವೆಯ ಮಡಿಲಲ್ಲಿರುವ ಪೊನ್ನಂಪೇಟೆಯ ಪಕ್ಕದ ಒಂದು ಸಣ್ಣ ಹಳ್ಳಿಯಲ್ಲಿ ಜಯಾಳ ವಾಸ. ವಿವಾಹಿತೆ. ಚಿಕ್ಕ ವಯಸ್ಸಲ್ಲೇ ಅವಳ ಕೊರಳಿಗೆ ತಾಳಿ ಬಿದ್ದಿತ್ತು. ಪತಿರಾಯ ಜಯಾಗೆ ಒಂದು ಮಗು ಕರುಣಿಸಿ ಅದೆಲ್ಲಿ ಪರಾರಿಯಾದನೋ ಗೊತ್ತಿಲ್ಲ! ಹೋದವನು ಇಂದು ಬರಬಹುದು, ನಾಳೆ ಬರಬಹುದು ಎಂದು ಕಾದಿದ್ದೇ ಬಂತು. ಪ್ರಯೋಜನವಾಗಲಿಲ್ಲ. ಹುಟ್ಟಿದ ಮಗುವಿಗೆ 'ನೀತಾ' ಎಂದು ಹೆಸರಿಟ್ಟ ಜಯಾ, ಮಗಳ ಕಣ್ಗಳಲ್ಲಿ ಕನಸಿನ ಹಣತೆ ಹಚ್ಚಿಟ್ಟು, ಅದರ ಬೆಳಕಲ್ಲೇ ದಿನದೂಡತೊಡಗಿದಳು. ಕಾಫಿ ತೋಟಗಳಲ್ಲಿ ಕೂಲಿ ಮಾಡುವ ಜಯಾ, ತನ್ನ ಸ್ಥಿತಿ ಮಗಳಿಗೆ ಬರೋದು ಬೇಡವೆನ್ನುವುದು ಆಕೆಯಲ್ಲಿ ಕಂಗೊಳಿಸುತ್ತಿದ್ದ ನಿತ್ಯದ ಕಾಳಜಿ. ಹೀಗಾಗಿ, ಮಗಳನ್ನು ಶಾಲೆ ಮುಖಮಾಡಿದಳು. ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೇ ಮುಗಿಸಿದ ನೀತಾ, ಹೈಸ್ಕೂಲಿಗೆ ಪೊನ್ನಂಪೇಟೆ ಕಡೆಗೆ ನಡೆದಳು. ಕೂಲಿಯ ಅಲ್ಪಸ್ವಲ್ಪ ಹಣದಲ್ಲೇ ನೀತಾಳಿಗೆ ಯಾವುದೇ ಕುಂದು ಬಾರದಂತೆ ನೋಡಿಕೊಳ್ಳುವಲ್ಲಿ ಜಯಾ ಯಶಸ್ವಿಯಾಗಿದ್ದಳು. ಇವರಿದ್...

ಗಂಗಾಮಾತೆಯ ಉಳಿಸಲು 'ಕಟ್ಟೆ'ಕಡೆಯ ಪ್ರಯತ್ನ

Image
ಮೇಘ ಮೇದಿನಿ - ರಾಧಾಕೃಷ್ಣ ಎಸ್. ಭಡ್ತಿ ನಿಮಗೆ ನೆನಪಿರಬಹುದು, ಕಳೆದ ಜೂನ್ 14ರಂದು ಅನ್ಯಾಯವಾಗಿ ಸಂತರೊಬ್ಬರು ಈ ಪುಣ್ಯಭೂಮಿಯಲ್ಲಿ ಪ್ರಾಣಕಳೆದುಕೊಂಡರು. ಹಾಗೆ ಅವರು ಪ್ರಾಣತ್ಯಾಗ ಮಾಡಿದ್ದು ನಮ್ಮ ಪುಣ್ಯನದಿ ಗಂಗೆಗಾಗಿ. ಅದು ಆತ್ಮಹತ್ಯೆಯಲ್ಲ, ಆತ್ಮಾಹುತಿ. ಈವರೆಗೆ ಪಾಪಿಗಳ ಶವಗಳಿಗೆ ಮಾತ್ರ ಮುಕ್ತಿ ದೊರಕಿಸುತ್ತಿದ್ದ ಗಂಗೆ ಇದರೊಂದಿಗೆ ಮೊದಲಬಾರಿಗೆ ಜೀವಂತ ವ್ಯಕ್ತಿಯೊಬ್ಬನಿಗೆ ವಿಶಿಷ್ಟ ರೀತಿಯಲ್ಲಿ ಮುಕ್ತಿ ದೊರಕಿಸಿಕೊಟ್ಟಿದ್ದಳು. ಹೌದು, ಗಂಗಾ ತಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ನದಿಯ ಶುದ್ಧೀಕರಣಕ್ಕೆ ಆಗ್ರಹಿಸಿ  ಸತತ 115 ದಿನ ಉಪವಾಸ ಕುಳಿತ ಉತ್ತರಾಖಂಡ್ ರಾಜ್ಯದ ಹರಿದ್ವಾರದ ಸನ್ಯಾಸಿ ಸ್ವಾಮಿ ನಿಗಮಾನಂದರಿಗೆ ಸಿಕ್ಕ ಉತ್ತರ ಸಾವು! ನಾಚಿಕೆಯಾಗಬೇಕಿತ್ತು ನಮಗೆ. ಆದರೆ, ಸರಕಾರಕ್ಕೆ ಅದು ದೊಡ್ಡ ವಿಚಾರವಾಗಲೇ ಇಲ್ಲ. ಏಕೆಂದರೆ ಆ ಸಂತನ ಸಾವು ಸ್ವಲ್ಪ ಸುದ್ದಿಯಾಯಿತು ಎಂಬುದನ್ನು ಬಿಟ್ಟರೆ ಮೊದಲಾಗಲೀ ಆನಂತರವಾಗಲೀ ನಮಗೆ ಏನೂ ಅನ್ನಿಸಲೇ ಇಲ್ಲ. ಗಂಗೆಯ ಒಡಲಲ್ಲಿ ಅರೆ ಬೆಂದ ಹೆಣಗಳೂ ಎಂದಿನಂತೆಯೇ ತೇಲಿ ಹೋಗುತ್ತಲೇ ಇವೆ. ಗಣಿಗಾರಿಕೆ, ಗಂಗೆಯ ಹರಿವಿಗೆ ಅಡ್ಡಲಾಗಿ ಮನಬಂದಂತೆ ಒಡ್ಡುಗಳ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಅತ್ಯಾಚಾರಗಳೂ ಮುಂದುವರಿದೇ ಇವೆ. ಇದಕ್ಕಿಂತ ವಿಪಯರ್ಯಾಸ ಬೇರೇನಿದೆ? ಹಠಕ್ಕೆ ಬೀಳದೇ, ಪ್ರತಿಭಟನೆಗೆ ಇಳಿಯದೇ ಏನೂ ಆಗುವುದಿಲ್ಲವೇ ಅಥವಾ ಕೊನೇಪಕ್ಷ ಒಂದು ಜೀವಕ್ಕೆ...

ಈ ಮಾಯಾನಗರಿಯಲಿ ಶುದ್ಧ ನೀರೇ ಮಾಯ!

ಮೇಘ ಮೇದಿನಿ - ರಾಧಾಕೃಷ್ಣ ಎಸ್. ಭಡ್ತಿ ನಮಗೆ ಆ ಬಗ್ಗೆ ಹೆಮ್ಮೆ ಇದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಖ್ಯಾತಿ ನಮ್ಮ ಬೆಂಗಳೂರಿಗೆ ಇದೆ.  ಆದರೆ ಅದು ನಿಜಕ್ಕೂ ಹೆಮ್ಮೆಯ ಸಂಗತಿಯೇ ಎಂಬುದು ವಿವೇಚನೆಗೆ ಬಿಟ್ಟ ವಿಚಾರ. ಏಕೆಂದರೆ ಈ ಬೆಳವಣಿಗೆ ಹೀಗೆಯೇ ಸಾಗುತ್ತಿದ್ದರೆ ಇಲ್ಲಿನ ಜನ ಹನಿ ನೀರಿಗಾಗಿ ಹಾಹಾಕಾರ ಮಾಡುವ, ಪರದಾಡುವ ದಿನ ದೂರವಿಲ್ಲ. ದಿನದಿನಕ್ಕೂ ಈ ಬೃಹನ್ನಗರಿಯ ಒಡಲು ಸೇರುತ್ತಿರುವ ಭಾರಿ ಜನಸಂಖ್ಯೆ.                                    ಅಭಿವೃದ್ಧಿ ಹೆಸರಿನಲ್ಲಿ ನೂರಾರು ವರ್ಷ ಹಳೆ ಮರಗಳನ್ನು ಆಪೋಶನ ತೆಗೆದುಕೊಂಡು ಮುಗಿಲೆತ್ತರಕ್ಕೆ ಎದ್ದುನಿಲ್ಲುವ ಮನಮೋಹಕ ಕಟ್ಟಡಗಳು. ಗಲ್ಲಿಗಲ್ಲಿಗಳಿಗೂ ಡಾಂಬರು. ವಸುಂಧರೆಯ ಹೊಟ್ಟೆ ತಂಪಾಗಿಸಲು ಅವಕಾಶವಾದರೂ ಎಲ್ಲಿದೆ? ಮಳೆ ನೀರು ಕಾಂಕ್ರೀಟ್ ಚರಂಡಿಗಳಲ್ಲಿ ಸಾಗಿ, ದೊಡ್ಡ ಮೋರಿಯಲ್ಲಿ ಹರಿದು ಹೋಗುತ್ತದೆಯೇ ವಿನಾ ಭೂಮಿಯ ಒಳಕ್ಕೆ ಇಳಿಯುವುದೇ ಇಲ್ಲ. ಅದೇ ನಾವು ಅವಳ ಒಡಲು ಬಗೆದು, ಸಾವಿರ ಅಡಿ ಆಳಕ್ಕೆ ಇಳಿದು ಅಲ್ಲಿರುವ ನೀರನ್ನೆಲ್ಲ ಬಳಸುತ್ತಿದ್ದೇವೆ. ದಿನಕ್ಕೊಂದು ಬಗೆಯ ಜ್ವರ. ಪ್ರತಿದಿನವೂ ವೈದ್ಯಲೋಕವನ್ನು ಅಚ್ಚರಿಗೆ ಕೆಡಗುವ, ಅವರು ಕಂಡುಕೇಳರಿಯದ ಹೊಸಹೊಸ ಕಾಯಿಲೆಗಳು. ಈ ಕ್ಷಣ ನಗುನಗುತ್ತ ಇದ್ದವ ಮರುಕ್ಷಣ ಅನಾರ...