Posts

Showing posts from March, 2013

ಪಂಚತೀರ್ಥ, ದೇವರಮನೆ

Image
                               ಐದು ತೀರ್ಥದಲ್ಲಿಮುಳುಗು ಹಾಕಿ ಚಿಕ್ಕಮಗಳೂರು ಜಿಲ್ಲೆ ಕಳಸದಿಂದ 3 ಕಿ.ಮೀ. ಅಂತರದಲ್ಲಿರುವ ಭದ್ರಾ ತೀರದ ಅಂಬುತೀರ್ಥ ಮನಮೋಹಕ, ರಮಣೀಯ ತಾಣ. ಹೊರನಾಡು, ಶೃಂಗೇರಿಗಳಿಗೆ ಭೇಟಿ ನೀಡಿ ಕಳಸೇಶ್ವರಸ್ವಾಮಿ ದರ್ಶನ ಮಾಡುವ ಭಕ್ತರು ಸಮೀಪವೇ ಇರುವ ಈ ಪಂಚತೀರ್ಥಕ್ಕೆ ಭೇಟಿ ನೀಡದಿದ್ದರೆ ಪವಿತ್ರ ಕ್ಷೇತ್ರ ದರ್ಶನದಿಂದ ವಂಚಿತರಾಗುವುದಂತೂ ದಿಟ. ಸುಮಾರು 5 ಸಾವಿರ ವರ್ಷಗಳ ಹಿನ್ನೆಲೆಯಿರುವ ಕಳಸ ಕ್ಷೇತ್ರ ಮಹಾಮುನಿ ಅಗಸ್ತ್ಯ ಕ್ಷೇತ್ರವೆನಿಸಿದೆ. ಸ್ವಯಂಭು ಕಳಸೇಶ್ವರಸ್ವಾಮಿ ದೇಗುಲ ಹೊಂದಿದ ಖ್ಯಾತಿ. ಕುದುರೆಮುಖ ಬಳಿಯ ಗಂಗಾಮೂಲವೆಂಬ ಪವಿತ್ರ ತಾಣದಲ್ಲಿ ತುಂಗಾ, ಭದ್ರಾ ಹಾಗೂ ನೇತ್ರಾವತಿ ನದಿಗಳು ಉಗಮವಾಗುತ್ತವೆ. ತುಂಗೆಯು ಮುಂದೆ ಸಾಗಿ ಹನುಮನಗುಂಡಿ, ಸುತನಬ್ಬಿ ಜಲಪಾತಗಳನ್ನು ಸೃಷ್ಟಿಸಿ ಶೃಂಗೇರಿಯತ್ತ ಸಾಗಿದರೆ, ನೇತ್ರಾವತಿ ನದಿಯು ಕಾರ್ಕಳದತ್ತ ಮುಖತೋರಿ ಧರ್ಮಸ್ಥಳದತ್ತ ಸಾಗುತ್ತಾಳೆ. ಭದ್ರಾ ನದಿಯು ಕುದುರೆಮುಖ, ಕಳಸ ಹಾದಿಯ ಸಹ್ಯಾದ್ರಿ ಪರ್ವತ ಪ್ರದೇಶಗಳ ಕಣಿವೆಗಳಲ್ಲಿ ಸಾಗುತ್ತಾಳೆ. ಹೀಗೆ ಕಳಸದ ಬಳಿ ಸಾಗುವಾಗ ಅಂಬುತೀರ್ಥ (ಅಂಬಾತೀರ್ಥ ಹಾಗೂ ಮಾತೃಕಾತೀರ್ಥವೆಂದೂ ಹೇಳುತ್ತಾರೆ), ರುದ್ರತೀರ್ಥ, ಕೋಟಿತೀರ್ಥ, ನಾಗತೀರ್ಥ ಹಾಗೂ ವಸಿಷ್ಠ ತೀರ್ಥಗಳಾಗಿ ಹರಿಯುತ್ತಾಳೆ. ಈ ಪಂಚತೀರ್ಥಗಳಲ್ಲಿ ಅಂಬ...

ಕೆರೆ ಕರೆ, ಸುತ್ತಿ ಕುರುವತ್ತಿ, ಗುಡ್ಡಟ್ಟು ಗಣೇಶ

Image
ಆಂಧ್ರಪ್ರದೇಶದ ಕಂಭಂಕೆರೆ ಹೊರತುಪಡಿಸಿದರೆ ದಕ್ಷಿಣ ಭಾರತದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇರುವುದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆಗೆ. ಇದು ಕರ್ನಾಟಕದ ಪ್ರಾಚೀನ ತಂತ್ರಜ್ಞಾನದ ಹೆಮ್ಮೆ. ಹಿರೇಹಳ್ಳಕ್ಕೆ ಎರಡು ಗುಡ್ಡಗಳ ಮಧ್ಯೆ ಒಂದು ಬೃಹತ್ ಒಡ್ಡು ಕಟ್ಟಿ ಹಾಕಿ ನೀರು ನಿಲ್ಲಿಸಿರುವ ಆ ಕೆರೆಯ ಸುತ್ತಳತೆ 65 ಕಿಲೋಮೀಟರ್. ಅದರ ಅಚ್ಚುಕಟ್ಟು ಪ್ರದೇಶ ಎರಡು ಸಾವಿರ ಹೆಕ್ಟೇರ್. ಇಷ್ಟೊಂದು ವಿಸ್ತಾರದ ಕೆರೆ ನೋಡುಗರ ಕಣ್ಣಿಗೆ ಸಾಗರದಂತೆ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದದ ಏರಿ. ಏರಿಯ ಅಗಲ ಒಂದೆಡೆ 60 ಅಡಿಗಳಾದರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ. ಐತಿಹಾಸಿಕ ಹಿನ್ನೆಲೆ ಕೆರೆಯ ನಿರ್ಮಾಣದ ಹಿಂದೆ ಅಚ್ಚರಿಯ ಸಂಗತಿಗಳಿವೆ. ಇವು ಇತಿಹಾಸಕ್ತರಿಗೆ ಹೆಚ್ಚಿನ ಸಂಶೋಧನೆಗೆ ಆಕರಗಳನ್ನು ಒದಗಿಸುತ್ತವೆ. ಈ ಪ್ರದೇಶದಲ್ಲಿ ಹಿಂದೆ ಸ್ವರ್ಗವತಿ ಎಂಬ ಪಟ್ಟಣ ಇತ್ತೆಂಬ ಐತಿಹ್ಯ. ವಿಕ್ರಮರಾಯನೆಂಬ ರಾಜ ಆಳುತ್ತಿದ್ದ, ನೂತನಾದೇವಿ ಆತನ ಪತ್ನಿ. ಈ ದಂಪತಿಗೆ ಶಾಂತಲಾದೇವಿ (ಶಾಂತಮ್ಮ) ಎಂಬ ಒಬ್ಬಳೇ ಮಗಳು. ಅವಳು ಯವ್ವನಾವಸ್ಥೆಗೆ ಬಂದಾಗ ಒಮ್ಮೆ ತಂದೆಯ ಅನುಮತಿ ಪಡೆಯದೆ ಕಾರ್ಯನಿಮಿತ್ತ ನೆರೆಯ ಊರಿಗೆ ಹೋಗಿ ಅರಮನೆಗೆ ಹಿಂತಿರುಗುತ್ತಾಳೆ. ಆಕೆಯ ನಡವಳಿಕೆಯನ್ನು ತಂದೆ ವಿಕ್ರಮರಾಯ ಆಕ್ಷೇಪಿಸಿ ನಿಂದಿಸುತ್ತಾನೆ. ನಡತೆಗೆಟ್ಟವಳು (ಸೂಳೆ) ಎಂದು ಜರಿಯುತ್ತಾನೆ. ತಂದೆಯ ಬೈಗುಳ ...

ಕೊಲ್ಲಿ ದ್ವೀಪ,ಕೆಳದಿ, ಮಲ್ಲಳ್ಳಿ ಜಲಪಾತ

Image
ಕಪಿಲಾ ನದಿಯ ದಂಡೆಯಲ್ಲಿರುವ ಭೀಮನಕೊಲ್ಲಿ ಕಳೆಯೇ ವಿಭಿನ್ನ. ಇದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿಗೆ ಸೇರುತ್ತದೆ. ಮೂರು ಕಡೆ ಜಲಾವೃತಗೊಂಡು, ಪರ್ಯಾಯ ದ್ವೀಪ ಕ್ಷೇತ್ರ ಎನಿಸಿಕೊಂಡಿದೆ ಈ ಭೀಮನಕೊಲ್ಲಿ. ಪ್ರತಿವರ್ಷ ಫೆಬ್ರವರಿಯಲ್ಲಿ ಅಲ್ಲಿ ಮಹದೇಶ್ವರಸ್ವಾಮಿ ಜಾತ್ರೆ ನಡೆಯುತ್ತದೆ. ಕೈಲಾಸಪತಿ ಪರಶಿವ ಮಹದೇಶ್ವರನಾಗಿ ಭೂಮಂಡಲದಲ್ಲಿ ಅವತರಿಸಿ, ತಮ್ಮ ಧಾರ್ಮಿಕ ಪಯಣದ ಕಾಲದಲ್ಲಿ ಶ್ರೀಕ್ಷೇತ್ರ ಭೀಮನಕೊಲ್ಲಿಗೆ ಬಂದು ಭಕ್ತರು ಹರಕೆ ನೆರವೇರಿಸಿ, ಅಲ್ಲಿಂದ ಶ್ರೀಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ ಎಂಬುದು ಪ್ರತೀತಿ. ಅಂದು ಈ ಕ್ಷೇತ್ರದಲ್ಲಿ ಶಿವನು ತಪಸ್ಸು ಆಚರಿಸಿ, ಸದ್ಬೋಧನೆ ಮಾಡಿದ ಪುಣ್ಯ ಸ್ಥಳದಲ್ಲಿ ಶಿವಲಿಂಗ ಉದ್ಭವಿಸಿ, ಸರ್ವರ ಆರಾಧ್ಯ ದೈವವಾಗಿ ಪೂಜಿತವಾಗುತ್ತಿದೆ. ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಕಬಿನಿ ಜಲಾಶಯ ನಿರ್ಮಾಣವಾದ ನಂತರ ಭೀಮನಕೊಲ್ಲಿ ಕ್ಷೇತ್ರದ ಮೂರು ಕಡೆ ಜಲಾವೃತಗೊಂಡಿತು. ಬಹುಕಾಲ ಜನ ಸಂಪರ್ಕವಿಲ್ಲದಂತಾಗಿತ್ತು. ಆದರೆ 1989-90 ರಿಂದ ಪವಿತ್ರ ಯಾತ್ರಾ ಸ್ಥಳ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದೆ. ನಾಡಿನ ಮೂಲೆ ಮೂಲೆಗಳಿಂದ ಭಕ್ತರು, ಪ್ರವಾಸಿಗರು ವರ್ಷವಿಡೀ ಇಲ್ಲಿಗೆ ಬರುತ್ತಿದ್ದಾರೆ. ದೋಣಿ ವಿಹಾರ, ನೈಸರ್ಗಿಕ ಶಿಬಿರ ನಡೆಸುವವರಿಗೆ, ಪ್ರವಾಸಿಗರಿಗೆ, ಪರಿಸರ ಪ್ರಿಯರಿಗೆ ಬೇಕಾದ ನೈಸರ್ಗಿಕ ವಾತಾವರಣ ಈ ಕ್ಷೇತ್ರದಲ್ಲಿದೆ. ಮಂಗಳಕಾರ್ಯ, ಸೇವಾ ಕೈಂಕರ್ಯ, ಅನ್ನ...

ಓಕೆ, ಡನ್

Image
ಡನ್‌ಲಪ್ ಟಯರ್ ಹೆಸರು ಕೇಳದವರು ಕಡಿಮೆ. ಎಂಆರ್‌ಎಫ್, ಬ್ರಿಡ್ಜ್‌ಸ್ಟೋನ್ ಮುಂತಾದ ಕಂಪನಿಗಳ ಟಯರ್‌ಗಳು ಹುಟ್ಟುವ ಮೊದಲೇ ಡನ್‌ಲಪ್ ಟಯರ್ ಪ್ರಸಿದ್ಧವಾಗಿತ್ತು. ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾಗಿತ್ತು. ಇನ್ನೊಂದು ಸಂಗತಿ ಗೊತ್ತೇ? ವಿಶ್ವದಲ್ಲೇ ಮೊದಲ ಬಾರಿಗೆ ಟಯರ್ ಒಳಗೊಂದು ಟ್ಯೂಬ್ ಇಟ್ಟು, ಅದರೊಳಗೆ ಗಾಳಿ ತುಂಬಿ, ಅದನ್ನು ವಾಹನಕ್ಕೆ ಅಳವಡಿಸಿ ಓಡಿಸಬಹುದು ಎಂದು ತೋರಿಸಿಕೊಟ್ಟಿದ್ದೇ ಡನ್‌ಲಪ್ ಕಂಪನಿ! ಅದಕ್ಕೂ ಮೊದಲು ಸಂಪೂರ್ಣ ರಬ್ಬರ್‌ನಿಂದ ಕೂಡಿದ ಟಯರ್‌ಗಳನ್ನು ಬಳಸಲಾಗುತ್ತಿತ್ತು. ಇಷ್ಟಕ್ಕೂ ಡನ್‌ಲಪ್ ಎಂಬುದು ಕಂಪನಿ ಸ್ಥಾಪಿಸಿದ ವ್ಯಕ್ತಿಯ ಹೆಸರು! ಪೂರ್ಣ ಹೆಸರು ಜಾನ್ ಡನ್‌ಲಪ್. ಇವರೇನೂ ವಾಹನ ಉದ್ಯಮದಲ್ಲಿರಲಿಲ್ಲ. ದೊಡ್ಡ ಸಾಧನೆ ಮಾಡಬೇಕು ಎಂದು ಸಂಶೋಧನೆ ಮಾಡಿ ಕಂಡುಹಿಡಿದಿದ್ದೂ ಅಲ್ಲ. ಕೊನೇಪಕ್ಷ ಮೆಕ್ಯಾನಿಕ್ ಕೂಡ ಅಲ್ಲ. ಆತ ಒಬ್ಬ ಪ್ರಾಣಿಗಳ ವೈದ್ಯನಾಗಿದ್ದ. ಜಾನ್ ಡನ್‌ಲಪ್ ಅವರ ಮಗ ಶೀತ ಪರಿಹಾರಕ್ಕಾಗಿ ಸೈಕಲ್ ಓಡಿಸುತ್ತಿದ್ದ. ಆದರೆ ಕೆಟ್ಟ ರಸ್ತೆಯಲ್ಲಿ ರಬ್ಬರ್ ಟಯರ್ ಅಳವಡಿಸಿದ ಟಯರ್‌ನ ಸೈಕಲ್ ಓಡಿಸಲು ಕಷ್ಟವಾಗುತ್ತಿತ್ತು. ಹೇಗಾದರೂ ಮಾಡಿ ಸೈಕಲ್ ಪ್ರಯಾಣವನ್ನು ಸುಲಭಗೊಳಿಸಬೇಕು ಎಂದು ಜಾನ್ ಡನ್‌ಲಪ್ ಚಿಂತಿಸತೊಡಗಿದ. ಆಗ ಗಾರ್ಡನ್‌ಗೆ ಬಳಸುತ್ತಿದ್ದ ಹಳೆಯ ರಬ್ಬರ್ ಪೈಪನ್ನೇ ಟ್ಯೂಬ್ ರೀತಿಯಲ್ಲಿ ಪರಿವರ್ತಿಸಿ, ಗಾಳಿ ತುಂಬಿ ಪ್ರಯೋಗ ಮಾಡಿದ. ಇದೇ ಜಗತ್ತಿನ ಮೊದಲ ಟ್ಯೂಬ್! ಇದು...

ಕಲ್ಯಾಣಮಸ್ತ್, ಸವದತ್ತಿ ಯಲ್ಲಮ್ಮ, ಉಂಚಳ್ಳಿ ಜಲಪಾತ,ಇಟಗಿಯ ಮಹಾದೇವ ದೇವಾಲಯ

Image
ಜಲಪಾತಗಳ ತವರು ಎಂದೇ ಖ್ಯಾತಿಯನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಹತ್ತು ಹಲವು ಜಲಪಾತಗಳು ವಿಶ್ವವಿಖ್ಯಾತ. ಆದರೆ ನೂರಕ್ಕೂ ಹೆಚ್ಚಿನ ಜಲಪಾತಗಳು ಇನ್ನೂ ತೆರೆಯ ಮರೆಯಲ್ಲೇ ಉಳಿದಿವೆ. ಅವುಗಳಲ್ಲಿ ಕಲ್ಯಾಣೇಶ್ವರ ಜಲಪಾತ ಕೂಡ ಒಂದು. ಸಿದ್ದಾಪುರ ತಾಲೂಕಿನ ಹಸರಗೋಡ ಗ್ರಾ.ಪಂ. ವ್ಯಾಪ್ತಿಯ ಕುಚಗುಂಡಿ ಊರಿನಲ್ಲಿರುವ ಕಲ್ಯಾಣೇಶ್ವರ ಜಲಪಾತ 15-20 ಅಡಿಗಳ ಎತ್ತರದಿಂದ ಜಿಗಿಯುತ್ತದೆ. ಈ ಜಲಪಾತದ ಮೂಲ ಯಾವುದೋ ದೊಡ್ಡ ನದಿಯಲ್ಲ. ಚಿಕ್ಕದೊಂದು ಹಳ್ಳ. ಜೂನ್‌ನಿಂದ ಡಿಸೆಂಬರ್ ವರೆಗೂ ಇದು ವೈಭವದಿಂದ ಧುಮುಕುತ್ತದೆ. ಆ ನಂತರ ಹಳ್ಳದ ನೀರು ಬತ್ತಿ ಹೋಗುವ ಕಾರಣ ಮತ್ತೆ ಜಲಪಾತಕ್ಕೆ ಜೀವಕಳೆ ಬರುವುದು ಮುಂದಿನ ಮಳೆಗಾಲದಲ್ಲಿಯೇ. ಹಸಿರು ವೃಕ್ಷ ಸಮೂಹ, ಅಡಿಕೆ ತೋಟಗಳ ನಡುವೆ ಜುಳು ಜುಳು ಸದ್ದು ಮಾಡುತ್ತ ಇಳಿದುಬರುವ ಕಲ್ಯಾಣೇಶ್ವರ ಜಲಪಾತದ ದೃಶ್ಯ ಮನಮೋಹಕ. ಜಲಪಾತದ ಬುಡದಲ್ಲಿರುವ 5-10 ಅಡಿ ಆಳದ ಗುಂಡಿಯಲ್ಲಿ ಪ್ರವಾಸಿಗರು ಖುಷಿಯಿಂದ ಈಜಬಹುದು. ಈ ಜಲಪಾತದ ಬುಡದಲ್ಲಿ ಕಲ್ಲಿನ ಸಾಲುಗಳಿಲ್ಲ. ಮಣ್ಣಿನ ಹಂದರ ಇರುವ ಕಾರಣ ಪ್ರವಾಸಿಗರಿಗೆ ಯಾವುದೇ ಅಪಾಯವೂ ಇಲ್ಲ. ಅಡ್ಕಳ್ಳಿ- ಕೋಡ್ಸರ ಸಂಪರ್ಕ ರಸ್ತೆಯ ಪಕ್ಕದಲ್ಲೇ ಸದ್ದು ಮಾಡುತ್ತಿದ್ದರೂ ಈ ಜಲಪಾತ ಹೆಚ್ಚಿನ ಜನರ ಗಮನಕ್ಕೆ ಬಾರದೇ ಇರುವುದು ವಿಶೇಷವೇ ಹೌದು. ರಸ್ತೆಯ ಪಕ್ಕವೇ ಇರುವುದರಿಂದ ಚಾರಣ ಮಾಡಬೇಕಿಲ್ಲ. ಸಾಹಸಿಗರಾಗಬೇಕಿಲ್ಲ. ಜಲಪಾತದ ಒಡಲಿನವರೆಗೂ ವಾಹನ ಒಯ್ಯಬಹುದು...